ಆ್ಯಪ್ನಗರ

ಯೋಗೇಶ್ವರ್‌ ವರಸೆಗೆ ಬಿಜೆಪಿಯಲ್ಲಿ ಆಕ್ಷೇಪ; ಸಿಪಿವೈ VS ಡಿಕೆಶಿ ಸಮರಕ್ಕೆ ಒಕ್ಕಲಿಗ ಮುಖಂಡರೇ ಗರಂ..!

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಮರ ಸಾರಿರುವ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ವರಸೆ ವಿರುದ್ಧ ಬಿಜೆಪಿಯಲ್ಲಿಯೇ ಆಕ್ಷೇಪ ಕೇಳಿಬಂದಿದೆ.

Vijaya Karnataka Web 2 Aug 2020, 11:27 pm
ಬೆಂಗಳೂರು: ವಿಧಾನ ಪರಿಷತ್‌ಗೆ ನೇಮಕಗೊಳ್ಳುತ್ತಿದ್ದಂತೆ ವೀರಾವೇಶ ತೋರುತ್ತಿರುವ ಸಿ.ಪಿ.ಯೋಗೇಶ್ವರ್‌ ವಿಚಾರದಲ್ಲಿ ಬಿಜೆಪಿಯ ಒಕ್ಕಲಿಗ ಮುಖಂಡರೇ ಗರಂ ಆಗಿದ್ದಾರೆ. ಜತೆಗೆ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್‌ ವಿರುದ್ಧ ಕಾಲು ಕೆರೆದುಕೊಂಡು ಜಗಳಕ್ಕೆ ಬಿದ್ದಿರುವುದರಿಂದ ಪಕ್ಷದ ವರ್ಚಸ್ಸಿಗೂ ಧಕ್ಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಅವರು, ಸಿಎಂ ಅವರಿಗೆ ದೂರು ನೀಡಿದ್ದಾರೆ.
Vijaya Karnataka Web vokkaliga bjp leaders oppose c p yogeshwar talk war against dk shivakumar and hd kumarswamy
ಯೋಗೇಶ್ವರ್‌ ವರಸೆಗೆ ಬಿಜೆಪಿಯಲ್ಲಿ ಆಕ್ಷೇಪ; ಸಿಪಿವೈ VS ಡಿಕೆಶಿ ಸಮರಕ್ಕೆ ಒಕ್ಕಲಿಗ ಮುಖಂಡರೇ ಗರಂ..!


ಕುಮಾರಸ್ವಾಮಿ ಹಾಗೂ ಶಿವಕುಮಾರ್‌ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ ಬಿಜೆಪಿಗೂ ಮುಜುಗರವಾಗುವಂತೆ ಮಾತಾಡಿರುವುದು ಪಕ್ಷದ ವಲಯದಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ. ಅದರಲ್ಲೂ ಒಕ್ಕಲಿಗ ಮುಖಂಡರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ತಿಳಿದು ಬಂದಿದೆ.

ವಾರ್ನಿಂಗ್‌ ನೀಡಿರುವ ಸಿಎಂ
ಯೋಗೇಶ್ವರ್‌ ಹೇಳಿಕೆಗಳನ್ನು ಸಿಎಂ ಅವರೂ ಗಂಭೀರವಾಗಿ ತೆಗೆದುಕೊಂಡಿದ್ದು, ವಿವಾದ ಹುಟ್ಟು ಹಾಕದಂತೆಯೂ ಕಿವಿಮಾತು ಹೇಳಿದ್ದರು. ದೂರು ನೀಡಿದ ಪಕ್ಷದ ಮುಖಂಡರಿಗೆ ಈ ವಿಷಯ ತಿಳಿಸಿದ ಅವರು ಯೋಗೇಶ್ವರ್‌ ಅವರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಮತ್ತೊಮ್ಮೆ ಸೂಚನೆ ನೀಡಲಾಗುವುದು ಎಂದು ಹೇಳಿರುವುದಾಗಿ ಗೊತ್ತಾಗಿದೆ.

'ಕೊತ್ವಾಲ್‌ ರಾಮಚಂದ್ರ ಸಂಸ್ಕೃತಿಯಿಂದ ಡಿ.ಕೆ.ಶಿವಕುಮಾರ್‌ ಹೊರಬರಲಿ': ಸಿ.ಪಿ.ಯೋಗೇಶ್ವರ್‌ ತಿರುಗೇಟು

ರಾಮನಗರ ರಾಜಕಾರಣ
ಕುಮಾರಸ್ವಾಮಿ, ಡಿಕೆಶಿ ಅವರಂತಹ ಪ್ರಬಲರ ನಡುವೆ ರಾಮನಗರ ಜಿಲ್ಲಾ ರಾಜಕಾರಣದಲ್ಲಿ ಯೋಗೇಶ್ವರ್‌ ಅವರಿಗೆ ಅಸ್ತಿತ್ವ ಕಂಡುಕೊಳ್ಳಬೇಕಿದೆ. ವಾಸ್ತವದಲ್ಲಿ ಒಕ್ಕಲಿಗರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬಕ್ಕೆ ನಿಷ್ಠೆ ತೋರಲು ಆದ್ಯತೆ ನೀಡುತ್ತಾರೆ. ಈ ಸಮುದಾಯದವರು ಡಿ.ಕೆ.ಶಿವಕುಮಾರ್‌ ಅವರನ್ನೂ ಬೆಂಬಲಿಸಿದ್ದಾರೆ. ಡಿಕೆಶಿ ಅವರನ್ನು ಭವಿಷ್ಯದ ನಾಯಕ ಎಂದೂ ಬಿಂಬಿಸಲಾಗಿದೆ.

'ನಾನು ಕಾಂಗ್ರೆಸ್‌ ಸೇರಲು ಹೋಗಿದ್ದೆ ಎಂಬುದು ಸಂಪೂರ್ಣ ಸುಳ್ಳು': ಡಿಕೆಶಿ ಆರೋಪಕ್ಕೆ ಯೋಗೇಶ್ವರ್‌ ಸ್ಪಷ್ಟನೆ

ಯೋಗೇಶ್ವರ್‌ ಈ ನಾಯಕರ ಮಟ್ಟಕ್ಕೆ ಬೆಳೆದೂ ಇಲ್ಲ. ಜತೆಗೆ ಬಿಜೆಪಿಯಲ್ಲೇ ಇರುವ ಸಮಾಜದ ಮುಖಂಡರಿಗೆ ಹೋಲಿಸಿದರೂ ಯೋಗೇಶ್ವರ್‌ ಅವರಿಗೆ ಅಂತಹ ವರ್ಚಸ್ಸಿಲ್ಲ. ಈ ನಡುವೆಯೂ ಜಿಲ್ಲಾ ರಾಜಕಾರಣ ಮುಂದಿಟ್ಟುಕೊಂಡು ಅವರು ಏನೆಲ್ಲಾ ಕಸರತ್ತು ಮಾಡುತ್ತಿರುವುದಕ್ಕೆ ಪಕ್ಷ ಹಾಗೂ ಸಮುದಾಯದಲ್ಲೂ ತೀವ್ರ ಆಕ್ಷೇಪವಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

'ಕಾಂಗ್ರೆಸ್‌ಗೆ‌‌ ಸೇರಿಸಿಕೊಳ್ಳಿ ಎಂದು ಯೋಗೇಶ್ವರ್‌ ಕಾಲು ಹಿಡಿದಿದ್ದ'; ಡಿ.ಕೆ.ಶಿವಕುಮಾರ್ ತಿರುಗೇಟು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ