ಆ್ಯಪ್ನಗರ

ವೋಟಿಂಗ್‌ ಓವರ್‌ ಬೆಟ್ಟಿಂಗ್‌ ಬಿಗಿನ್‌ ! *

ಹದಿನೈದನೇ ವಿಧಾನಸಭೆಯಲ್ಲಿ ತಮ್ಮ ಪ್ರತಿನಿಧಿಗಳು ...

Vijaya Karnataka 13 May 2018, 5:00 am
ಬೆಂಗಳೂರು: ಹದಿನೈದನೇ ವಿಧಾನಸಭೆಯಲ್ಲಿ ತಮ್ಮ ಪ್ರತಿನಿಧಿಗಳು ಯಾರಿರಬೇಕು, ಮುಂದಿನ ಐದು ವರ್ಷಗಳ ಕಾಲ ಯಾವ ಪಕ್ಷ ಆಡಳಿತ ನಡೆಸಬೇಕು ಎಂಬ ಮತದಾರರ ತೀರ್ಮಾನ ಶನಿವಾರ ಮತಯಂತ್ರ ಸೇರಿತು. ಇವಿಎಂಗಳಲ್ಲಿ ಭದ್ರವಾಗಿರುವ ಜನಾದೇಶದ ಗುಟ್ಟು ಬಹಿರಂಗವಾಗಲು ಇನ್ನು ಮೂರು ದಿನ (ಮೇ 15) ಕಾಯಬೇಕಿದೆ. ಈಗ ಏನಿದ್ದರೂ ಸೋಲು -ಗೆಲುವಿನ ಲೆಕ್ಕಾಚಾರ.
Vijaya Karnataka Web voting ink


ಬೇಸಿಗೆಯ ಬಿರುಬಿಸಿಲನ್ನೂ ಲೆಕ್ಕಿಸದೆ ರಾಜ್ಯ ಸುತ್ತಿದ್ದ ಪಕ್ಷಗಳ ನಾಯಕರು, ಕ್ಷೇತ್ರದ ಮೂಲೆಮೂಲೆ ಎಡತಾಕಿದ್ದ ಅಭ್ಯರ್ಥಿಗಳಿಗೆ ಈಗ ನಿರುಮ್ಮಳ ಭಾವ. ರಾಜಕೀಯ ನಾಯಕರು ಮತ್ತು ಅಭ್ಯರ್ಥಿಗಳ ಬಳಲಿದ ದೇಹ ವಿಶ್ರಾಂತಿ ಬಯಸಿದರೂ, ಮನಸ್ಸು ಮಾತ್ರ ಲೆಕ್ಕಾಚಾರದಲ್ಲೇ ಮುಳುಗಿದೆ. ಶೇಕಡವಾರು ಮತದಾನ ಆಧರಿಸಿ ಯಾವ ಬೂತ್‌ನಲ್ಲಿ ಎಷ್ಟು ಮತ ಬಂದಿರಬಹುದು, ಯಾರು ಕೈಕೊಟ್ಟರು, ಯಾವ ವಿಚಾರ ಕೈಹಿಡಿಯಿತು ಎಂಬ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಕ್ಷೇತ್ರ ಸುತ್ತಿ ಬಳಲಿದ್ದ ಅಭ್ಯರ್ಥಿಗಳು ಮತದಾನ ಮುಗಿಯುತ್ತಿದ್ದಂತೆ ಯುದ್ಧವೊಂದನ್ನು ಮುಗಿಸಿದ ಭಾವದಲ್ಲಿ ಆಪ್ತರು ಹಾಗೂ ಬೆಂಬಲಿಗರೊಂದಿಗೆ ಸಮಾಲೋಚನೆಗಳನ್ನು ನಡೆಸಿದರು. ಫಲಿತಾಂಶ ಏನಾಗಬಹುದು ಎಂಬ ಕುರಿತು ಮಾಹಿತಿ ಕಲೆಹಾಕಿದರು. ಭಾನುವಾರ ದಿನವಿಡೀ ವಿಶ್ರಾಂತಿ ಪಡೆಯುವ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮತ ಎಣಿಕೆ ಸಿದ್ಧತೆಗಳ ಬಗ್ಗೆ ಸೋಮವಾರ ತಲೆಕೆಡಿಸಿಕೊಳ್ಳಲಿದ್ದಾರೆ. ಕೆಲವು ಕಡೆಗಳಲ್ಲಿ ಅಭ್ಯರ್ಥಿಗಳು ದಣಿವಾರಿಸಿಕೊಳ್ಳಲು ರೆಸಾರ್ಟ್‌ಗಳನ್ನು ಸೇರಿಕೊಂಡಿದ್ದಾರೆ.

ಹೆಚ್ಚಿದ ಬೆಟ್ಟಿಂಗ್‌ ಭರಾಟೆ

ಮತದಾನ ಮುಗಿದು ಫಲಿತಾಂಶ ಹೊರಬೀಳಲು ಮೂರು ದಿನಗಳ ಸಮಯಾವಕಾಶವಿದ್ದು, ಯಾರು ಗೆಲ್ಲುತ್ತಾರೆ, ಯಾವ ಪಕ್ಷ ಎಷ್ಟು ಸ್ಥಾನ ಗೆಲ್ಲುತ್ತದೆ, ಯಾವ ಪಕ್ಷ ಅಧಿಕಾರಕ್ಕೆ ಬರುತ್ತಾರೆ, ಯಾರು ಸಿಎಂ ಆಗುತ್ತಾರೆ ಎಂಬಂತಹ ಬೆಟ್ಟಿಂಗ್‌ ಭರಾಟೆ ಆರಂಭವಾಗಿದೆ. ಕೆಲವು ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ಬಾಜಿ ನಡೆದಿದ್ದರೆ, ಅದರ ಜತೆಗೇ, ಯಾವ ಪಕ್ಷ 100 ಸ್ಥಾನ ದಾಟಬಹುದು. ಕಾಂಗ್ರೆಸ್‌, ಬಿಜೆಪಿ ಪೈಕಿ ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬ ಕುರಿತಂತೆ ದೊಡ್ಡ ಪ್ರಮಾಣದಲ್ಲಿ ಬೆಟ್ಟಿಂಗ್‌ ನಡೆದಿದೆ.

ಚಾಮುಂಡೇಶ್ವರಿಯಲ್ಲಿ ಸಿಎಂ ಸಿದ್ದರಾಮಯ್ಯ ಗೆಲ್ತಾರಾ? ಬಾದಾಮಿಯಲ್ಲಿ ಸಿದ್ದರಾಮಯ್ಯ ಮತ್ತು ಶ್ರೀರಾಮುಲು ಪೈಕಿ ಯಾರು ಗೆಲ್ಲುತ್ತಾರೆ? ರಾಮನಗರ, ಚನ್ನಪಟ್ಟಣ ಎರಡೂ ಕಡೆ ಕುಮಾರಸ್ವಾಮಿ ಗೆಲ್ಲುತ್ತಾರಾ? ಈ ಹೈವೋಲ್ಟೇಜ್‌ ಕ್ಷೇತ್ರಗಳ ಬಗ್ಗೆಯೇ ಹೆಚ್ಚು ಬೆಟ್ಟಿಂಗ್‌ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ