ಆ್ಯಪ್ನಗರ

ಕಪ್ಪು ಬಣ್ಣದಿಂದ ಹಳದಿಗೆ ತಿರುಗಿದ ವೃಷಭಾವತಿ ನದಿ : ಆತಂಕಗೊಂಡ ನದಿಪಾತ್ರದ ಜನತೆ

ಹಳದಿ ನದಿ ಎಂದ ಕೂಡಲೇ ಚೀನಾದ 'ಹಾಂಗ್‌ ಹಿ' ನದಿ ನೆನಪಾಗುತ್ತದೆ. ಆದರೆ, ಬೆಂಗಳೂರಿನ ಮೂಲಕ ಹರಿಯುವ ವೃಷಭಾವತಿ ಕೂಡ ಪೂರ್ಣ ಹಳದಿ ಬಣ್ಣಕ್ಕೆ ತಿರುಗಿರುವುದು ನದಿ ಪಾತ್ರದ ಜನರಲ್ಲಿ ಆತಂಕ ಮೂಡಿಸಿದೆ.

Vijaya Karnataka Web 23 Sep 2019, 6:19 pm
ರಾಮನಗರ: ಇಷ್ಟು ದಿನ ಕಪ್ಪು ಬಣ್ಣದಲ್ಲಿ ಹರಿಯುತ್ತಿದ್ದ ವೃಷಭಾವತಿ ನದಿಯ ನೀರು ಇದೀಗ ಹಳದಿ‌ ಬಣ್ಣಕ್ಕೆ ತಿರುಗಿದೆ. ಬೆಂಗಳೂರು ಹೊರವಲಯದ ಅಂಚೇಪಾಳ್ಯ, ಕುಂಬಳಗೂಡು ಸಮೀಪ ನದಿಯ ನೀರು ಹಳದಿ ಬಣ್ಣದಲ್ಲಿ ಹರಿಯುತ್ತಿದೆ. ಕೆಂಗೇರಿ ಚರಂಡಿ ನೀರನ್ನು ತುಂಬಿಕೊಂಡು ಕಪ್ಪುಬಣ್ಣದಲ್ಲಿ ಹರಿಯುತ್ತಿದ್ದ ನದಿ, ಇದ್ದಕ್ಕಿದ್ದಂತೆ ಹಳದಿ ಬಣ್ಣಕ್ಕೆ ತಿರುಗಿದ್ದನ್ನು ಕಂಡು ನದಿಯ ಅಕ್ಕಪಕ್ಕದ ನಿವಾಸಿಗಳು ಆತಂಕಗೊಂಡಿದ್ದಾರೆ.
Vijaya Karnataka Web vrushabhavathi 1


ವೃಷಭಾವತಿ ನದಿಗೆ ಕೆಂಗೇರಿ ಚರಂಡಿ ನೀರಿನ ಜತೆಗೆ ಕಾರ್ಖಾನೆಗಳ‌ ವಿಷಯುಕ್ತ ರಾಸಾಯನಿಕ ನೀರು ಸೇರಿರಬಹುದೇ ಎಂಬ ಅನುಮಾನ ಮೂಡಿದೆ. ಭಾನುವಾರ ರಾತ್ರಿಯಿಂದ ನದಿ ನೀರಿನ ಬಣ್ಣ ಬದಲಾಗಿದೆ. ಭಾನುವಾರವಷ್ಟೇ ನಗರದಲ್ಲಿ ವೃಷಭಾವತಿ ನದಿ ಪುನಶ್ಚೇತನಕ್ಕೆ ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು. ಇಗಾಗಲೇ ನದಿ ಮತ್ತಷ್ಟು ಮಲಿನಗೊಂಡು ಹರಿಯುತ್ತಿದೆ.

ಬೆಂಗಳೂರಿನಲ್ಲಿರುವ ವೃಷಭಾವತಿ ನದಿಯು ಪಶ್ಚಿಮಾಭಿಮುಖವಾಗಿ ನಗರದಲ್ಲಿ ಸಾಗಿ ಮೈಸೂರು ರಸ್ತೆಯ ಅಂಚಿನಲ್ಲಿ ಹರಿದು ಗಾಳಿ ಆಂಜನೇಯ ದೇವಸ್ಥಾನದ ಪಕ್ಕದಲ್ಲಿ ಹರಿದು ಮುಂದೆ ರಾಮನಗರ ಜಿಲ್ಲೆಯ ಬೈರಮಂಗಲದ ಮೂಲಕ ಹರಿದು ನಂತರ ಕನಕಪುರ ತಾಲೂಕಿನಲ್ಲಿ ಹರಿದು ಸಂಗಮದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಇದಕ್ಕೆ ಪೂರಕವಾಗಿ ದೊಡ್ಡಬಸವಣ್ಣನ ದೇವಾಲಯದ ಬಳಿ ಬಸವನಹಳ್ಳಿ ಎಂಬ ಗ್ರಾಂ ಇತ್ತೆಂಬುದು ಇತಿಹಾಸದಿಂದ ತಿಳಿದು ಬರುತ್ತದೆ. ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಬಸವನಗುಡಿಯ ಬಡಾವಣೆ ನಿರ್ಮಾಣವಾದ ಅನಂತರ ಕೆಲವು ವರ್ಷ ಬಸವಪುರ ಎಂಬ ಹೆಸರಿದ್ದದ್ದು ಐತಿಹಾಸಿಕ ದಾಖಲೆಗಳಿಂದ ತಿಳಿದು ಬರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ