ಆ್ಯಪ್ನಗರ

ಡಿಸಿ ವರ್ಗಾವಣೆ: ಕಾಂಗ್ರೆಸ್‌, ಜೆಡಿಎಸ್‌ ವಾಗ್ವಾದ

ಸಚಿವ ರೇವಣ್ಣ, ಲೋಕಸಭೆ ಚುನಾವಣೆ ಬರುತ್ತಿದೆ. ಆಡಳಿತ ಅನುಕೂಲಕ್ಕಾಗಿ ವರ್ಗಾವಣೆ ಮಾಡಬೇಕಾಗುತ್ತದೆ. ಜಿಪಂ ಸಿಇಒ ಕೂಡಾ ಬದಲಾಗಿದ್ದಾರೆ ಎಂದಿದ್ದಾರೆ.

Vijaya Karnataka 25 Feb 2019, 10:21 am
ಹಾಸನ: ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವರ್ಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ. ಜೆಡಿಎಸ್‌ ವರ್ಗದಲ್ಲಿ ತನ್ನ ಪಾತ್ರವಿಲ್ಲ ಎಂದರೆ ಡೈನಾಮಿಕ್‌ ಡಿಸಿ ಎಂದು ಬಿರುದು ನೀಡಿದ್ದು ಜೆಡಿಎಸ್‌. ಅಂತಹವರನ್ನು ಏಕೆ ದಿಢೀರ್‌ ಎತ್ತಂಗಡಿ ಮಾಡಲಾಯಿತು ಎಂದು ಕಾಂಗ್ರೆಸ್‌ ಮುಖಂಡರು ಪ್ರಶ್ನಿಸುತ್ತಿದ್ದಾರೆ.
Vijaya Karnataka Web Rohini


ನನ್ನಪಾತ್ರವಿಲ್ಲ: ರೇವಣ್ಣ
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರೇವಣ್ಣ,'ಲೋಕಸಭೆ ಚುನಾವಣೆ ಬರುತ್ತಿದೆ. ಆಡಳಿತ ಅನುಕೂಲಕ್ಕಾಗಿ ವರ್ಗಾವಣೆ ಮಾಡಬೇಕಾಗುತ್ತದೆ. ಜಿಪಂ ಸಿಇಒ ಕೂಡಾ ಬದಲಾಗಿದ್ದಾರೆ,''ಎಂದು ಸ್ಪಷ್ಟಪಡಿಸಿದರು.

ಡೈನಾಮಿಕ್‌ ಡಿಸಿ ವರ್ಗ ಏಕೆ?:
''ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಡಿಸಿ ರೋಹಿಣಿ ಸಿಂಧೂರಿ ವರ್ಗ ಮಾಡಿದ್ದ ವೇಳೆ ವಿರೋಧ ವ್ಯಕ್ತಪಡಿಸಿದ್ದ ಜೆಡಿಎಸ್‌ಗೆ ಈಗ ದಿಢೀರ್‌ ವರ್ಗ ಮಾಡಿಸಿರುವುದನ್ನು ನೋಡಿದರೆ ಯಾವ ನೈತಿಕತೆ ಇದೆ,'' ಎಂದು ಕಾಂಗ್ರೆಸ್‌ ಮುಖಂಡ ದೇವರಾಜೇಗೌಡ ಪ್ರಶ್ನಿಸಿದ್ದಾರೆ.

''ರೋಹಿಣಿ ಸಿಂಧೂರಿ ಡೈನಾಮಿಕ್‌ ಅಧಿಕಾರಿ ಎಂದು ಸಿಎಂ ಹೇಳಿದ್ದಾರೆ ಎಂದು ಸಚಿವ ರೇವಣ್ಣ ಹೇಳಿದ್ದರು. ಅಂತಹ ಅಧಿಕಾರಿಯನ್ನು ಅವಧಿಗೆ ಮುನ್ನ ವರ್ಗ ಮಾಡಿದ್ದರ ಮರ್ಮವೇನು,'' ಎಂದು ಪ್ರಶ್ನಿಸಿದ್ದಾರೆ.

ಮಾಜಿ ಸಚಿವ ಎ.ಮಂಜು ಉಸ್ತುವಾರಿ ಸಚಿವರಾಗಿದ್ದ ವೇಳೆ ಡಿಸಿ ವರ್ಗ ಮಾಡಿಸಿದ್ದರು ಎಂದು ಜೆಡಿಎಸ್‌ನವರೇ ಆರೋಪಿಸಿದ್ದಲ್ಲದೆ ಪ್ರಾಮಾಣಿಕ ಅಧಿಕಾರಿ ವರ್ಗ ಮಾಡಿದ್ದನ್ನು ಸ್ವತಃ ದೇವೇಗೌಡರು, ಸಚಿವ ರೇವಣ್ಣ ಖಂಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ