ಆ್ಯಪ್ನಗರ

ಮುಂದಿನ ದಿನಗಳಲ್ಲಿ ನೀರಿಗಾಗಿ ನಡೆಯಲಿದೆ ಯುದ್ಧ: ಕುಮಾರಸ್ವಾಮಿ

ಬಾವಿ, ಕೆರೆಗಳ‌ ನೀರು ಬತ್ತಿಹೋಗಿವೆ. ತಾಂತ್ರಿಕವಾಗಿ ಬದಲಾವಣೆಯಾಗಿದೆ. ಅಂತರ್ಜಲವನ್ನು ಕೃಷಿಗೆ ಹೆಚ್ಚೆಚ್ಚು ಬಳಸುತ್ತಿದ್ದೇವೆ. ಅಂತರ್ಜಲದಲ್ಲಿಯೂ ನೀರು ಕಡಿಮೆಯಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ

Vijaya Karnataka Web 28 Feb 2019, 1:35 pm
ಬೆಂಗಳೂರು: ನೀರಿಗಾಗಿ ಮುಂದಿನ ದಿನಗಳು ಸಮಸ್ಯೆಯನ್ನು ಎದುರಿಸಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಹಲವು ವರ್ಷಗಳಿಂದಲೇ ನೀರಿಗಾಗಿ ಯುದ್ಧ ನಡೆಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತಿ ವಹಿಸಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
Vijaya Karnataka Web ಕಾರ್ಯಕ್ರಮದಲ್ಲಿ ಸಿಎಂ
ಕಾರ್ಯಕ್ರಮದಲ್ಲಿ ಸಿಎಂ


ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆ ಜಲಾಮೃತಕ್ಕೆ ಚಾಲನೆ ನೀಡಲಾಯಿತು.

ಬೆಂಗಳೂರಿನ ಡಾ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಜಲಾಮೃತ ಕಾರ್ಯಕ್ರಮವನ್ನು ಲೋಕಾರ್ಪಣೆ ಮಾಡಿದರು .

ಬಾವಿ, ಕೆರೆಗಳ‌ ನೀರು ಬತ್ತಿಹೋಗಿವೆ. ತಾಂತ್ರಿಕವಾಗಿ ಬದಲಾವಣೆಯಾಗಿದೆ. ಅಂತರ್ಜಲವನ್ನು ಕೃಷಿಗೆ ಹೆಚ್ಚೆಚ್ಚು ಬಳಸುತ್ತಿದ್ದೇವೆ. ಅಂತರ್ಜಲದಲ್ಲಿಯೂ ನೀರು ಕಡಿಮೆಯಾಗಿದೆ ಎಂದರು.

ಮುಂದಿನ‌ ದಿನಗಳಲ್ಲಿ ಹನಿ ನೀರಿಗೂ ಕಷ್ಟ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ನೀರು ಮತ್ತು ಹಸಿರು ಉಳಿಸಬೇಕು. ಆ ಮೂಲಕ ನಾಡನ್ನು ಉಳಿಸಬೇಕು ಎಂದು ಮುಖ್ಯಮಂತ್ರಿ ಕರೆ ನೀಡಿದರು.

ಸಾರ್ವಜನಿಕವಾಗಿ ನಾಗರಿಕರಿಗೆ ಜಾಗೃತಿ ಮೂಡಿಸುವ ಹೆಚ್ಚಿನ ಜವಾಬ್ದಾರಿ ಅಧಿಕಾರಿಗಳ‌ ಮೇಲಿದೆ ಎಂದರು.

ಗೋಪಾಲಸ್ವಾಮಿ ಬೆಟ್ಟ ಪ್ರದೇಶದಲ್ಲಿನ ಅನಾಹುತ‌ ಕಂಡು ಕಣ್ಣಲ್ಲಿ ನೀರು ಬಂತು.ಪದೇಪದೆ ಅರಣ್ಯಕ್ಕೆ ಬೆಂಕಿಬಿದ್ದಾಗ ನೀರನ್ನು ಹಾಕಲು ಸಾಧ್ಯವಿಲ್ಲ. ಆದರೂ ಬೆಂಕಿ ನಂದಿಸಲು ಸರಕಾರ ತ್ವರಿತ ಕ್ರಮಗಳನ್ನು ಕೈಗೊಂಡಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ