ಆ್ಯಪ್ನಗರ

​ಕಿಂಗ್‌ ಮೇಕರ್‌ ಅಲ್ಲ , ನಾವೇ ಕಿಂಗ್‌: ಕುಮಾರಸ್ವಾಮಿ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಸರಳ ಬಹುಮತ ಗಳಿಸಲಿದ್ದು ಅಧಿಕಾರಕ್ಕೆ ಬರಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Vijaya Karnataka Web 14 Feb 2018, 3:18 pm
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿಜೆಡಿಎಸ್‌ ಸರಳ ಬಹುಮತಗಳಿಸಲಿದ್ದು ಅಧಿಕಾರಕ್ಕೆ ಬರಲಿದೆ. ಉಭಯ ರಾಷ್ಟ್ರೀಯ ಪಕ್ಷಗಳ ಸೀಟಿನ ಸಂಖ್ಯೆ 60 ರಿಂದ 70 ದಾಟುವುದು ಕಷ್ಟವೆಂದು ಮಾಜಿ ಸಿಎಂ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
Vijaya Karnataka Web we are king says kumara swamy
​ಕಿಂಗ್‌ ಮೇಕರ್‌ ಅಲ್ಲ , ನಾವೇ ಕಿಂಗ್‌: ಕುಮಾರಸ್ವಾಮಿ


'ವಿಕ ಸಂವಾದ'ದಲ್ಲಿಭಾಗಿಯಾಗಿ ಮಾತನಾಡಿದ ಅವರು, ''ಈ ಬಾರಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಪ್ರಶ್ನೆಯೇ ಇಲ್ಲ. ಸಮ್ಮಿಶ್ರ ಸರಕಾರ ರಚನೆಯ ಪ್ರಶ್ನೆಯೂ ಉದ್ಭವಿಸದು. ಸರಕಾರ ರಚನೆಗೆ ಅಗತ್ಯವಾದ 113 ಸ್ಥಾನಗಳನ್ನು ಜೆಡಿಎಸ್‌ ಜಯಸಲಿದೆ,'' ಎಂಬ ವಿಶ್ವಾಸ ವ್ಯಕ್ತಪಡಿಸಿದರು.

''ಕಾಂಗ್ರೆಸ್‌, ಬಿಜೆಪಿಯವರೂ ಖಾಸಗಿಯಾಗಿ ನಿಮ್ಮನ್ನು ಬಿಟ್ಟುಸರಕಾರ ರಚಿಸಲಾಗದು ಎನ್ನುತ್ತಿದ್ದಾರೆ. ಆದರೆ, ವಾಸ್ತವ ಬೇರೆಯೇ ಇದ್ದು ಜಾತಿ, ಧರ್ಮದ ರಾಜಕಾರಣದಲ್ಲಿಜನರು ನಂಬಿಕೆ ಕಳೆದುಕೊಂಡಿದ್ದಾರೆ. ಜೆಡಿಎಸ್‌ ಮೇಲೆ ರೈತರು ನಿರೀಕ್ಷೆ ಇರಿಸಿಕೊಂಡಿದ್ದಾರೆ. 75 ಲಕ್ಷ ಕೃಷಿ ಕುಟುಂಬಗಳು ರಾಜ್ಯದಲ್ಲಿವೆ. ಅವರಲ್ಲಿಎಲ್ಲ ಜಾತಿ, ಸಮುದಾಯದವರೂ ಇದ್ದಾರೆ. ನಾನು ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದೇನೆ. ರೈತರು ಇದಕ್ಕಾಗಿ ಕಾಯುತ್ತಿದ್ದಾರೆ. ಸಾಲ ಮನ್ನಾ ವಿಚಾರವೇ ಜೆಡಿಎಸ್‌ ಗೆಲುವಿಗೆ ಟ್ರಂಪ್‌ ಕಾರ್ಡ್‌ ಎನ್ನಿಸಿಕೊಳ್ಳಲಿದೆ. ಈ ಸಲ ಕಿಂಗ್‌ ಮೇಕರ್‌ ಪ್ರಶ್ನೆಯೇ ಇಲ್ಲ' ಎಂದು ಸ್ಪಷ್ಟಪಡಿಸಿದರು.

''ಎಷ್ಟು ದಿನ ಮುಖ್ಯಮಂತ್ರಿಯಾಗಿರುತ್ತೇನೆ ಎನ್ನುವುದು ಮುಖ್ಯವಲ್ಲ. ಇರುವಷ್ಟು ದಿನ ಹೇಗೆ ಜನಪರ ಕೆಲಸ ಮಾಡುತ್ತೇನೆ ಎನ್ನುವ ಪಾಲಿಸಿ ನನ್ನದು. ನನಗೆ ಎಲ್ಲ ರೀತಿಯ ಅನುಭವವೂ ಆಗಿದೆ. ಜನರಿಗೆ ಒಳ್ಳೆಯದು ಮಾಡಬೇಕೆನ್ನುವುದೇ ನನ್ನ ಆಸೆ, 150 ಕ್ಷೇತ್ರಗಳನ್ನು ಸುತ್ತಿ ಬಂದಿದ್ದೇನೆ, ಜನರ ನಾಡಿ ಮಿಡಿತ ಅರ್ಥವಾಗಿದ್ದು ಈ ಸಲ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕೆಂದು ಜನ ಬಯಸಿದ್ದಾರೆ,'' ಎಂದು ತಿಳಿಸಿದರು.

45 ಕ್ಷೇತ್ರಗಳಲ್ಲಿ ಗಮನ

''ಹೈದರಾಬಾದ್‌ಮುಂಬಯಿ ಕರ್ನಾಟಕದಿಂದ ಒಟ್ಟಾರೆ 98 ಸೀಟುಗಳಿವೆ. ಆ ಭಾಗದಲ್ಲಿನಮ್ಮ ಸಂಘಟನೆ ಸದೃಢವಾಗಿಲ್ಲ ಎನ್ನುವುದೂ ಅರಿವಿದೆ. ಹಾಗಾಗಿ ಅಲ್ಲಿನ 45 ವಿಧಾನಸಭೆ ಕ್ಷೇತ್ರ ಗೆಲ್ಲುವುದು ನಮ್ಮ ಗುರಿ. ಅಲ್ಲಿಯೇ ನಾವು ಹೆಚ್ಚು ಗಮನ ಕೇಂದ್ರೀಕರಿಸುತ್ತೇವೆ. ಬಾಗಲಕೋಟದ ಬದಾಮಿ, ತೇರದಾಳ ಕ್ಷೇತ್ರ, ಕಲಬುರ್ಗಿಯ 45 ಕ್ಷೇತ್ರ, ಬೀದರ್‌ 4, ಬೆಳಗಾವಿ 3, ಉತ್ತರ ಕನ್ನಡ 34, ವಿಜಯಪುರ 57, ರಾಯಚೂರು 56 ಕ್ಷೇತ್ರಗಳನ್ನು ಗೆಲ್ಲಲು ಶ್ರಮ ಹಾಕಲಾಗುವುದು. 1994ರಲ್ಲಿರಾಮಕೃಷ್ಣ ಹೆಗಡೆ, ಜೆ.ಎಚ್‌. ಪಟೇಲ್‌, ಸಿದ್ದರಾಮಯ್ಯ ಇದ್ದಾಗಲೇ ಜನತಾದಳಕ್ಕೆ ಉತ್ತರ ಕರ್ನಾಟಕದಲ್ಲಿ39 ಸ್ಥಾನಗಳಷ್ಟೇ ಬಂದಿದ್ದವು. ಅದನ್ನು ಉತ್ತಮ ಪಡಿಸಿಕೊಳ್ಳಲಾಗುವುದು,'' ಎಂದರು.

ಸ್ಟಾರ್‌ ಕಾಂಪೇನರ್‌ಗಳು ಗೆಲ್ಲಲ್ಲ

''ಜೆಡಿಎಸ್‌ಗೆ ನಾನೊಬ್ಬನೇ ಸ್ಟಾರ್‌ ಕಾಂಪೇನರ್‌, ದೇವೇಗೌಡರು ಸಹ ರಾಜ್ಯ ಸುತ್ತುತ್ತಿದ್ದಾರೆ. ಆದರೆ ನಮ್ಮಲ್ಲಿದ್ದ ಸ್ಟಾರ್‌ ಕಾಂಪೇನರ್‌ಗಳು ಈಗ ಪಕ್ಷ ಬಿಟ್ಟಿದ್ದಾರೆ (7 ಮಂದಿ ಬಂಡಾಯ ಶಾಸಕರು) ಆದರೆ ಅವರಲ್ಲಿಯಾರೊಬ್ಬರೂ ಗೆಲ್ಲಲ್ಲ '' ಎಂದು ಕುಮಾರಸ್ವಾಮಿ ಹೇಳಿದರು.

'ವಿಕ'ಗೆ ಎಚ್‌ಡಿಕೆ ಅಭಿನಂದನೆ

ಓದುಗರ ನಂಬರ್‌1 ಪತ್ರಿಕೆಯಾಗಿ ಬೆಳೆದಿರುವ 'ವಿಜಯ ಕರ್ನಾಟಕ' ವನ್ನು ಕುಮಾರಸ್ವಾಮಿ ಅಭಿನಂದಿಸಿದ್ದಾರೆ. ತಾವು ನಿತ್ಯ ಈ ಪತ್ರಿಕೆ ಓದದೇ ಹೊರಗಡೆ ಹೋಗುವುದಿಲ್ಲ. ಸುದ್ದಿಗಳು ಹಾಗೂ ಲೇಖನಗಳು ಚೆನ್ನಾಗಿ ಬರುತ್ತಿದ್ದು ಜನಸಾಮಾನ್ಯರನ್ನು ತಲುಪಿದೆ. ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದ ವ್ಯಕ್ತಿಗಳ ಲೇಖನಗಳು ಚೆನ್ನಾಗಿ ಮೂಡಿ ಬರುತ್ತಿವೆ. ಯಾವುದೇ ಪಕ್ಷದ ಪರ ವಿರೋಧ ಎಂಬಂತ್ತಿಲ್ಲ. ಎಲ್ಲಾ ಪಕ್ಷಗಳಿಗೂ ಸಮಾನ ಅವಕಾಶ ಕೊಡಲಾಗುತ್ತಿದೆ, ವಿಶೇಷವಾಗಿ ವಾಸ್ತವಾಂಶ ಸಂಗತಿಗಳನ್ನು ಪ್ರಕಟಿಸುತ್ತಿರುವುದು ಸಂತಸ ತಂದಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ