ಆ್ಯಪ್ನಗರ

ಮುಖ್ಯಮಂತ್ರಿ ಕಿಂಗ್‌, ನಾನು ಇಲಾಖೆ ಮಿನಿಸ್ಟರ್‌: ಸಚಿವ ಸುಧಾಕರ್‌

ಕೊರೊನಾ ನಿರ್ವಹಣೆ ವಿಚಾರದಲ್ಲಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರೇ ಕಿಂಗ್‌ ಮತ್ತು ಕ್ಯಾಪ್ಟನ್‌. ನಾನು ಸಂಬಂಧಿತ ಇಲಾಖೆಯ ಮಿನಿಸ್ಟರ್‌. ಎಂದು ವೈದ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

Vijaya Karnataka Web 1 Jul 2020, 8:30 am
ಬೆಂಗಳೂರು: ''ಕೊರೊನಾ ನಿರ್ವಹಣೆ ವಿಚಾರದಲ್ಲಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರೇ ಕಿಂಗ್‌ ಮತ್ತು ಕ್ಯಾಪ್ಟನ್‌. ನಾನು ಸಂಬಂಧಿತ ಇಲಾಖೆಯ ಮಿನಿಸ್ಟರ್‌. ಈ ಬಗ್ಗೆ ಯಾವ ಗೊಂದಲವೂ ಇಲ್ಲ,'' ಎಂದು ವೈದ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.
Vijaya Karnataka Web Dr. K. Sudhakar


ಬೆಂಗಳೂರು ನಗರದಲ್ಲಿ ಸೋಂಕು ನಿರ್ವಹಣೆ ಉಸ್ತುವಾರಿ ಅಶೋಕ್‌ ಅಥವಾ ನಿಮ್ಮದಾ ಎಂದು ಸುದ್ದಿಗಾರರು ವಿಧಾನಸೌಧಲ್ಲಿ ಕೇಳಿದಾಗ ಸಚಿವ ಸುಧಾಕರ್‌ ಹೀಗೆ ಪ್ರತಿಕ್ರಿಯಿಸಿದರು. ಕುಟುಂಬ ಸದಸ್ಯರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಳೆದ 8 ದಿನಗಳಿಂದ ಹೋಮ್‌ ಕ್ವಾರಂಟೈನ್‌ನಲ್ಲಿದ್ದ ಡಾ. ಸುಧಾಕರ್‌ ಮಂಗಳವಾರ ವಿಧಾನಸೌಧ ಕಚೇರಿ ಯಲ್ಲಿ ಕರ್ತವ್ಯಕ್ಕೆ ಮರಳಿದರು.''ಹಿರಿಯರಾದ ಕಂದಾಯ ಸಚಿವರು ನನ್ನ ಅನುಪಸ್ಥಿತಿಯಲ್ಲಿ ಬಹಳ ಚೆನ್ನಾಗಿ ಜವಾಬ್ದಾರಿ ನಿರ್ವಹಿಸಿದರು. ನಾನು ಹೋಮ್‌ ಕ್ವಾರಂಟೈನ್‌ನಲ್ಲಿದ್ದ ಕಾರಣ ಕಂದಾಯ ಸಚಿವರಿಗೆ ಬೆಂಗಳೂರು ನೋಡಿಕೊಳ್ಳಲು ಸಿಎಂ ಹೇಳಿದ್ದರು. ಆ ಕೆಲಸವನ್ನು ಅವರು ಮಾಡಿದ್ದಾರೆ. ನಮ್ಮಲ್ಲಿ ಯಾರಿಗೂ ಗೊಂದಲ ಇಲ್ಲ. ಸಿಎಂ ಸೂಚನೆಯಂತೆ ಕೆಲಸ ಮಾಡುತ್ತಿದ್ದೇವೆ,'' ಎಂದರು.

ಪ್ರತಿ ಮಾತಿನಲ್ಲೂ ಕಂದಾಯ ಸಚಿವರು ಎಂದರೇ ಹೊರತು, ಅಶೋಕ್‌ ಎಂದು ಹೆಸರು ಹೇಳಲಿಲ್ಲ. ''ಪತ್ನಿ, ಪುತ್ರಿಗೆ ಕೊರೊನಾ ಪಾಸಿಟಿವ್‌ ಬಂದ ಕಾರಣ ನಾನು ಕ್ವಾರಂಟೈನ್‌ನಲ್ಲಿದ್ದೆ. ಎರಡು ಬಾರಿಯ ಟೆಸ್ಟಿಂಗ್‌ನಲ್ಲಿ ನನ್ನ ರಿಪೋರ್ಟ್‌ ನೆಗೆಟಿವ್‌ ಬಂದಿದೆ. ಹೀಗಾಗಿ ಕ್ವಾರಂಟೈನ್‌ ಮುಗಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ. ಎಲ್ಲರ ಆಶೀರ್ವಾದ, ಹಾರೈಕೆಯಿಂದ ನಾನು ಮತ್ತೆ ಬಂದಿದ್ದೇನೆ. ಇನ್ನೆರಡು ದಿನಗಳಲ್ಲಿ ನನ್ನ ಪತ್ನಿ ಹಾಗೂ ಪುತ್ರಿ ಕೂಡ ಡಿಸ್ಚಾರ್ಜ್ ಆಗುತ್ತಿದ್ದಾರೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ