ಆ್ಯಪ್ನಗರ

‘ಹುಲಿ ನಿಯಂತ್ರಣ ಮಾಡೋದು ನಮ್ಗೆ ಗೊತ್ತು, ಅವಕ್ಕೆ ಮದುವೆ ಮಾಡ್ಬೇಕು, ಅವಕಾಶ ಕೊಡಿ’: ಬೋಪಣ್ಣ

ಕೊಡಲು ಜಿಲ್ಲೆಯಲ್ಲಿ ಹುಲಿಗಳ ದಾಳಿಗಳು ಪದೇ ಪದೇ ಸಂಭವಿಸುತ್ತಿವೆ. ಆದರೆ, ಇದನ್ನು ಸರ್ಕಾರ ನಿಯಂತ್ರಿಸುತ್ತಿಲ್ಲ ಎಂದು ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಸದಸ್ಯರಾಗಿರುವ ಕೊಡಗಿವರೇ ಆದ ಕೆ.ಜಿ. ಬೋಪಣ್ಣ ಅವರು ಅಸಮಾಧಾನ ವ್ಯಕ್ತಪಡಿಸಿದರು. ಕೊಡಗಿನವರಾದ ನಮ್ಮಲ್ಲಿ ಹುಲಿಗಳನ್ನು ನಿಯಂತ್ರಿಸುವುದು ಹೇಗೆ ಎಂಬುದು ಗೊತ್ತಿದೆ. ನಮ್ಮಲ್ಲಿ ಹುಲಿಗಳನ್ನು ನಿಯಂತ್ರಿಸಲು ನಾವು ಹುಲಿಗಳ ಮದುವೆ ಮಾಡುತ್ತೇವೆ. ಸರ್ಕಾರದ ಕೈಯ್ಯಲ್ಲಿ ಹುಲಿಗಳ ನಿಯಂತ್ರಣ ಸಾಧ್ಯವಿಲ್ಲ ಎನ್ನುವುದಾದರೆ ನಮಗೊಂದು ಅವಕಾಶ ಕೊಡಿ ಎಂದು ಅವರು ಕೇಳಿದ್ದಾರೆ.

Authored byಇರ್ಷಾದ್ ಉಪ್ಪಿನಂಗಡಿ | Edited byಚೇತನ್ ಓ.ಆರ್. | Vijaya Karnataka Web 13 Feb 2023, 2:17 pm

ಹೈಲೈಟ್ಸ್‌:

  • ವಿಧಾನಪರಿಷತ್ ನಲ್ಲಿ ಮಾತನಾಡಿದ ಬಿಜೆಪಿಯ ಹಿರಿಯ ಸದಸ್ಯ ಕೆ.ಜಿ. ಬೋಪಣ್ಣ.
  • ಹುಲಿಗಳ ದಾಳಿಗಳನ್ನು ನಿಯಂತ್ರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆಕ್ಷೇಪ.
  • ಹುಲಿಗಳನ್ನು ನಿಯಂತ್ರಿಸುವುದು ನಮಗೆ ಗೊತ್ತಿದೆ; ನಮಗೊಂದು ಅವಕಾಶ ಕೊಡಿ ಎಂದು ಕೇಳಿದ ಬೋಪಣ್ಣ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web K.G.Bopaiah
ಬೆಂಗಳೂರು: ಹುಲಿ ನಿಯಂತ್ರಣ ಮಾಡೋದು ನಮಗೆ ಗೊತ್ತು, ಕೊಡಗಿನವರಾದ ನಮ್ಮಲ್ಲಿ ಹುಲಿ‌ ಮದುವೆ ಮಾಡುತ್ತೇವೆ, ಅವಕಾಶ ಕೊಡಿ ಎಂದು ಬಿಜೆಪಿ ಶಾಸಕ ಹಾಗೂ ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಕೆಜಿ ಬೋಪಯ್ಯ, ವಿರಾಜಪೇಟೆ ತಾಲ್ಲೂಕಿನ ಗ್ರಾಮದಲ್ಲಿ ನಿನ್ನೆ ಹುಲಿ ದಾಳಿ ಮಾಡಿ 12 ವರ್ಷದ ಬಾಲಕನನ್ನು ಕೊಂದು ಹಾಕಿದೆ. ಸೋಮವಾರ ಬೆಳಗ್ಗೆ ಕೂಡಾ ಮತ್ತೆ ದಾಳಿ ಮಾಡಿ 75 ವರ್ಷದ ಮಹಿಳೆಯನ್ನು ಕೊಂದಿದೆ ಎಂದು ಗಮನ ಸೆಳೆದರು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇದಾಗಿದೆ. ನಿಮ್ಮ ಕೈಯಲ್ಲಿ ಆಗಲ್ಲ ಅಂದ್ರೆ ಬಿಟ್ಟುಬಿಡಿ. ನಮಗೆ ಬಿಟ್ಟು ಬಿಡಿ ಹುಲಿ ಕಂಟ್ರೋಲ್ ಮಾಡುತ್ತೇವೆ ಎಂದು ಹುಲಿ ಹಾವಳಿ ಬಗ್ಗೆ ಶಾಸಕ ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದರು.

Safaris in Tiger Reserves: ಅಭಯಾರಣ್ಯದಲ್ಲಿ ಹುಲಿ ಸಫಾರಿಗೆ ಬೀಳಲಿದೆ ಬ್ರೇಕ್: ಏನಿದು ಹೊಸ ನಿಯಮ?
ಈ ವೇಳೆ ದ್ವನಿಗೂಡಿಸಿದ ಶಾಸಕ ಅಪ್ಪಚ್ಚು ರಂಜನ್, ಡಿಎಫ್ ಒ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜೊತೆಗೆ ಹುನುಸೂರು ಶಾಸಕ ಮಂಜುನಾಥ್ ಕೂಡ ಧ್ವನಿಗೂಡಿಸಿ, ಸತ್ತವರು ನನ್ನ ಕ್ಷೇತ್ರದವರು ಎಂದರು. ಈ ವೇಳೆ ಹುಲಿ ನಿಮ್ಮ ತಾಲ್ಲೂಕಿದ್ದೋ ಏನು ಎಂದು ಸ್ಪೀಕರ್ ಕಾಗೇರಿ ಪ್ರಶ್ನಿಸಿದರು. ಇಲ್ಲ ಹುಲಿ ಸರ್ಕಾರದ್ದು, ಆದರೆ ಸತ್ತವರು ನಮ್ಮ ತಾಲ್ಲೂಕಿನವರು. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಇದೆ ಅಜ್ಜ, ಮೊಮ್ಮಗ ಹುಲಿಗೆ ಬಲಿಯಾಗಿದ್ದಾರೆ. ಇವರು ಸತ್ತ ಸುದ್ದಿ ಕೇಳಿ ಅಜ್ಜಿ ಕೂಡ ಈಗ ಸತ್ತಿದ್ದಾರೆ ಎಂದ ಮಂಜುನಾಥ್ ಸದನದ ಗಮನ ಸೆಳೆದರು.

ಮಂಜುನಾಥ್ ಮಾತು‌ ಕೇಳಿ ಕಳವಳ ವ್ಯಕ್ತಪಡಿಸಿದ ಸ್ಪೀಕರ್ ,ಹುಲಿ ನಿಯಂತ್ರಣ ಬಗ್ಗೆ ಸದನದಲ್ಲಿ ವಿಶೇಷ ಚರ್ಚೆಗೆ ಅವಕಾಶ ನೀಡುವ ಬಗ್ಗೆ ಸ್ಪೀಕರ್ ಭರವಸೆ ನೀಡಿದರು‌. ಇದಕ್ಕೆ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಉತ್ತರ ನೀಡಿ, ಯಾವುದೇ ಹಂತದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಆಗಿದೆ ಎಂದಾದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಸಿಎಂ ಬಂದ ಬಳಿಕ ಇಲಾಖೆಯಿಂದ ಮಾಹಿತಿಯನ್ನು ತರಿಸಿ ಉತ್ತರ ಕೊಡುತ್ತೇವೆ ಎಂದರು‌.

Tiger Population in India: ವಿಶ್ವದ ಶೇ 70ರಷ್ಟು ಹುಲಿ ಸಂತತಿ ಭಾರತದಲ್ಲಿ: ಸುಪ್ರೀಂಗೆ ಕೇಂದ್ರ ಸರಕಾರದ ವರದಿ
ಕಳೆದ ತಿಂಗಳು, ಮೈಸೂರು ಜಿಲ್ಲೆಯಲ್ಲಿ ಚಿರತೆ ದಾಳಿ ನಡೆದಿದ್ದ ಘಟನೆಗಳು ನಡೆದಿರುವ ಬೆನ್ನಲ್ಲೇ ಭಾನುವಾರ ಹುಲಿ ದಾಳಿ (Tiger attack) ಮಾಡಿರುವ ಘಟನೆ ನಾಗರಹೊಳೆ ವಲಯದಲ್ಲಿ ನಡೆದಿದೆ. ಹುಲಿ ದಾಳಿಗೆ ಸಿಲುಕಿದ ಬುಡಕಟ್ಟಿನ ಯುವಕನೊಬ್ಬ ಸ್ಥಳದಲ್ಲೇ ಸಾವಿಗೀಡಾಗಿದ್ದ. ಕಾಡಿನ ಪ್ರದೇಶದಲ್ಲಿ ಸೌದೆ ಸಂಗ್ರಹಿಸಲು ಹೋಗಿದ್ದ ಗುಂಪಿನ ಮೇಲೆ ಹುಲಿ ಹಠಾತ್ ದಾಳಿ ನಡೆಸಿತ್ತು .ಹುಲಿ ದಾಳಿಗೆ ಸಿಲುಕಿದ ಮಂಜುವಿನ ತಲೆ ಸೀಳಿ ಪ್ರಾಣ ತೆಗೆದಿತ್ತು. ಇತರರು ದಿಕ್ಕಾಪಾಲಾಗಿ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದರು.

ನಾಲ್ಕು ಮರಿಗಳೊಂದಿಗೆ ಈ ಪ್ರದೇಶದಲ್ಲಿ ನೆಲೆ ಕಂಡುಕೊಂಡಿರುವ ಹುಲಿಯು ಮಂಜುವಿನ ಮೇಲೆ ದಾಳಿ ನಡೆಸಿ‌‌‌ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದ ಕಳೆದ ಹಲವಾರು ದಿನಗಳಿಂದ ತನ್ನ ನಾಲ್ಕು ಮರಿಗಳ ಜೊತೆ ಈ ಭಾಗದಲ್ಲಿ ಅಡ್ಡಾಡಿಕೊಂಡಿರುವ ಹುಲಿ ಹಲವು ಜನರ ಕಣ್ಣಿಗೆ ಬಿದ್ದಿತ್ತು.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ