ಆ್ಯಪ್ನಗರ

ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಕೆಆರ್‌ಎಸ್‌ ಅಭಿವೃದ್ಧಿ

ಕೃಷ್ಣರಾಜಸಾಗರ ಹಣೆಕಟ್ಟೆ ಅಭಿವೃದ್ಧಿಗೊಳಿಸುವ ಹಳೇ ಯೋಜನೆಗೆ ಸಿಟಿ ರವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿಂದಿನ ಪ್ರವಾಸೋದ್ಯಮ ಸಚಿವರು ಕೆಆರ್‌ಎಸ್‌ ಅನ್ನು ಡಿಸ್ನಿ ಲ್ಯಾಂಡ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ಹೇಳಿದ್ದರು ಈ ಯೋಜನೆಗೆ ನಮ್ಮ ಬೆಮಬಲವಿದೆ ಎಂದು ಹೇಳಿದ್ದಾರೆ.

ವಿಕ ಸುದ್ದಿಲೋಕ 11 Sep 2019, 7:25 am
ಮೈಸೂರು: ಹಿಂದಿನ ಪ್ರವಾಸೋದ್ಯಮ ಸಚಿವರು ಕೆಆರ್‌ಎಸ್‌ ಅನ್ನು ಡಿಸ್ನಿ ಲ್ಯಾಂಡ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ಹೇಳಿದ್ದರು. ಅದಕ್ಕೆ ನಮ್ಮ ಪೂರ್ಣ ಬೆಂಬಲವಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ . ಅನನ್ಯವಾಗಿ ಕೊಟ್ಟರಷ್ಟೇ ಜಗತ್ತನ್ನು ಸೆಳೆಯಲು ಸಾಧ್ಯ. ಅಲ್ಲದೆ, ಪ್ರವಾಸೋದ್ಯಮದಿಂದ ಆ ಯೋಜನೆ ರೂಪಿಸಿಲ್ಲ. ಭಾರಿ ನೀರಾವರಿಯಿಂದ ಯೋಜನೆ ಪ್ರಕಟಿಸಿದ್ದಾರೆ. ಅದು ಬ್ಲೂಪ್ರಿಂಟ್‌ನಿಂದ ಇನ್ನೂ ಟೇಕ್‌ ಆಫ್‌ ಆಗಿಲ್ಲ. ಹಾಗಾಗಿ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ಸಿಟಿ ರವಿ ತಿಳಿಸಿದರು.
Vijaya Karnataka Web c t ravi


ಏನಿದು ಯೋಜನೆ: ಕೃಷ್ಣರಾಜಸಾಗರ ಜಲಾಶಯದ ಬಳಿ ಅಮೆರಿಕದ ಪ್ರಸಿದ್ಧ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಆಕರ್ಷಕ ಪ್ರವಾಸಿ ತಾಣ ನಿರ್ಮಿಸು ಯೋಜನೆಯೆ ಇದಾಗಿದೆ. ದೇಶದಲ್ಲೇ ಮೊದಲ ಪೆಂಗ್ವಿನ್ ಮೃಗಾಲಯ, ಉದ್ಯಾನ ಸುತ್ತಾಡಲು ಟ್ರಾವಲ್, ಹೊಸ ಅನುಭವ ನೀಡುವ ವಾಟರ್ ಪ್ಲೇಟ್, ಮೈನವಿರೇಳಿಸುವ ವಾಟರ್ ಸ್ಪೋರ್ಟ್ಸ್ ಮುಂತಾದವು ಕೆಆರ್‌ಎಸ್‌ ಡಿಸ್ನಿ ಲ್ಯಾಂಡ್‌ ನಲ್ಲಿ ಇರಲಿವೆ. 336 ಎಕರೆ ಜಾಗದಲ್ಲಿ ಡಿಸ್ನಿಲ್ಯಾಂಡ್ ಅಭಿವೃದ್ಧಿಪಡಿಸಲಾಗಿತ್ತು. ಈ ಕುರಿತು ನೀಲನಕ್ಷೆಯನ್ನೂ ತಯಾರಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ