ಆ್ಯಪ್ನಗರ

ಸಿದ್ದರಾಮಯ್ಯ ಅವರೇ ಮನೆಗೆ ಹೋಗಿ ಏನು ಮಾಡ್ತೀರಾ? ಮಾಧುಸ್ವಾಮಿ ಪ್ರಶ್ನೆಗೆ ಸದನದಲ್ಲಿ ನಗುವೋ ನಗು

ಸಿದ್ದರಾಮಯ್ಯ ಅವರೇ ಮನೆಗೆ ಹೋಗಿ ಏನು ಮಾಡ್ತೀರಾ? ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಕೇಳಿದ ಪ್ರಶ್ನೆ ವಿಧಾನಸಭೆಯನ್ನು ಮಂಗಳವಾರ ನಗೆಗಡಲಿನಲ್ಲಿ ತೇಲಿಸಿತು.‌ ​​ಮೈಸೂರು ಅತ್ಯಾಚಾರ ಪ್ರಕರಣ ಸಂಬಂಧ ಸಿದ್ದರಾಮಯ್ಯ ಮಾತಿಗೆ ಅವಕಾಶ ನೀಡುವಂತೆ ಕೇಳಿದಾಗ ಈ ಘಟನೆ ನಡೆಯಿತು.

Authored byಇರ್ಷಾದ್ ಉಪ್ಪಿನಂಗಡಿ | Vijaya Karnataka Web 21 Sep 2021, 6:49 pm

ಹೈಲೈಟ್ಸ್‌:

  • ಸಿದ್ದರಾಮಯ್ಯ ಅವರೇ ಮನೆಗೆ ಹೋಗಿ ಏನು ಮಾಡ್ತೀರಾ? ಎಂದು ವಿಧಾನಸಭೆಯಲ್ಲಿ ಪ್ರಶ್ನಿಸಿದ ಸಚಿವ ಜೆ.ಸಿ. ಮಾಧುಸ್ವಾಮಿ
  • ಮಾಧುಸ್ವಾಮಿ ಕೇಳಿದ ಪ್ರಶ್ನೆಯಿಂದ ನಗೆಗಡಲಿನಲ್ಲಿ ತೇಲಿದ ವಿಧಾನಸಭೆ
  • ಮೈಸೂರು ಅತ್ಯಾಚಾರ ಪ್ರಕರಣ ಸಂಬಂಧ ಸಿದ್ದರಾಮಯ್ಯ ಮಾತಿಗೆ ಅವಕಾಶ ನೀಡುವಂತೆ ಕೇಳಿದಾಗ ಈ ಘಟನೆ ನಡೆಯಿತು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web siddaramaiah
ಬೆಂಗಳೂರು: ಸಿದ್ದರಾಮಯ್ಯ ಅವರೇ ಮನೆಗೆ ಹೋಗಿ ಏನು ಮಾಡ್ತೀರಾ? ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಕೇಳಿದ ಪ್ರಶ್ನೆ ವಿಧಾನಸಭೆಯನ್ನು ನಗೆಗಡಲಿನಲ್ಲಿ ತೇಲಿಸಿತು.‌
ಮೈಸೂರು ಅತ್ಯಾಚಾರ ಪ್ರಕರಣದ ವಿಚಾರವಾಗಿ ಮಾತನಾಡಬೇಕು, ಎರಡು ದಿನದಿಂದ ಕಾಯ್ತಾ ಇದ್ದೇನೆ ಎಂದು ವಿಪಕ್ಷ ನಾಯಲಕ ಸಿದ್ದರಾಮಯ್ಯ ಅವಕಾಶ ಕೋರಿದರು.‌ ಇದಕ್ಕೆ ಪ್ರತಿಕ್ರಿಯೆ ನೀಡಿದ ಜೆ.ಸಿ. ಮಾಧುಸ್ವಾಮಿ, ವಿಧೇಯಕ ಪಾಸ್ ಮಾಡಿಕೊಳ್ಳೋಣ, ವಿಧಾನ ಪರಿಷತ್‌ಗೆ ಹೋಗಬೇಕು ಎಂದರು.

ಇದಕ್ಕೆ ಮೈಸೂರು ಘಟನೆ ಮೊದಲು ಚರ್ಚೆಯಾಗಲಿ ಆಮೇಲೆ ಬಿಲ್ ಪಾಸ್ ಮಾಡಿಕೊಳ್ಳಿ ಎಂದು ಸಿದ್ದರಾಮಯ್ಯ ಸಲಹೆ ಕೊಟ್ಟರು.‌ ಇದಕ್ಕೆ, ಬೇಗ ಮನೆಗೆ ಹೋಗಿ ಏನು ಮಾಡ್ತೀರಾ? ಎಂದು ಮಾಧುಸ್ವಾಮಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಳೆಲೆದರು.

ಮೇಲ್ಮನೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಸಭಾತ್ಯಾಗದ ನಡುವಲ್ಲೇ ವಿಧೇಯಕ ಅಂಗೀಕಾರ..
ಮಾಧುಸ್ವಾಮಿ ‌ಮಾತಿಗೆ ಎದ್ದು ನಿಂತ ಮಾಜಿ ಸ್ಪೀಕರ್‌ ಕೆ.ಆರ್. ರಮೇಶ್ ಕುಮಾರ್, ಮಾಧುಸ್ವಾಮಿ ನೀವು ಏನ್ ಮಾಡ್ತಿರೋ ಗೊತ್ತಿಲ್ಲ.
ಆದರೆ ಸಿದ್ದರಾಮಯ್ಯ ಮನೆಯಲ್ಲಿ ಏನ್ ಮಾಡ್ತಾರೆ ಅಂತ ಹೇಳೋಕೆ ಆಗಲ್ಲ ಎಂದರು.‌ ಇದು ಸದನವನ್ನು ಮತ್ತಷ್ಟು ನಗೆಗಡಲಿನಲ್ಲಿ ತೇಲಿಸಿತು.

ಜೆಡಿಎಸ್ ಶಾಸಕರಿಗೆ ಬಿಡಿಗಾಸು ಅನುದಾನ ಕೊಟ್ಟಿಲ್ಲ: ಎಚ್. ಡಿ. ರೇವಣ್ಣ ಅಸಮಾಧಾನ
'ಮನೆಯಲ್ಲಿ ಹೋಗಿ ಏನು ಮಾಡ್ತಿರಿ, ಇಲ್ಲಿ ಕುಳಿತುಕೊಳ್ಳಿ' ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದರು. ಜೆ.ಸಿ. ಮಾಧುಸ್ವಾಮಿ ಕೂಡಾ ಇದಕ್ಕೆ ಧ್ವನಿಗೂಡಿಸಿದರು. ಇದಕ್ಕೆ, 'ನಾನೇನು ಮಾಡ್ತೀನಿ ಅಂತ ನಿಮಗೆ ಗೊತ್ತು, ನೀವೇನು ಮಾಡ್ತೀರಿ ಅಂತ ನನಗೆ ಗೊತ್ತು' ಎಂದು ನಗುನಗುತ್ತಾ 'ನಡೀರಿ' ಎಂದರು ಸಿದ್ದರಾಮಯ್ಯ.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ