ಆ್ಯಪ್ನಗರ

ಆಪರೇಷನ್‌ ಕಮಲ ಆಡಿಯೋ: ಮೋದಿ, ಶಾ ಎಲ್ಲವನ್ನೂ ನಿಭಾಯಿಸುತ್ತಾರೆ, ಜಜ್‌ಗಳನ್ನು ಬುಕ್‌ ಮಾಡುತ್ತಾರೆ!

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಸೇರಿದಂತೆ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ಬಗ್ಗೆಯೂ ಮಾಜಿ ಸಿಎಂ ಯಡಿಯೂರಪ್ಪ ಉಲ್ಲೇಖಿಸಿರುವುದು ಆಡಿಯೋದಲ್ಲಿ ಕೇಳಿಬಂದಿದ್ದು, ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

Vijaya Karnataka Web 9 Feb 2019, 9:59 am
ಬೆಂಗಳೂರು: ಬಜೆಟ್‌ ಮಂಡನೆಗೂ ಮೊದಲು ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಎಚ್‌ಡಿ ಕುಮಾರಸ್ವಾಮಿ 'ಆಪರೇಷನ್‌ ಕಮಲ' ಆಡಿಯೋ ಬಿಡುಗಡೆ ಮಾಡುವ ಮೂಲಕ ಕಮಲ ಪಾಳಕ್ಕೆ ಶಾಕ್‌ ನೀಡಿದ್ದರು. ಈ ಆಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಸೇರಿದಂತೆ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ಹೆಸರುಗಳು ಕೇಳಿಬಂದಿದ್ದು, ರಾಷ್ಟ್ರ ಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
Vijaya Karnataka Web Operation Lotus


ರಾಜೀನಾಮೆ ಕೊಟ್ಟು ಬಂದು ಬಿಡಿ. ತಕ್ಷಣ ಮುಂಬೈಗೆ ಹೋಗಿ. ಅಲ್ಲಿ ವಿಜಯೇಂದ್ರ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. 25 ಕೋಟಿ ರೂ. ಹಣ ಕೊಡುತ್ತೇನೆ. ಚುನಾವಣೆಗೆ 25 ಕೋಟಿ ರೂ. ಕೊಡುತ್ತೇನೆ. ಜತೆಗೆ, ಹೊಸ ಸರಕಾರದಲ್ಲಿ ಒಂದು ಒಳ್ಳೆಯ ಖಾತೆ ಕೊಡುತ್ತೇನೆ, ಹಣ ಮಾಡಿಕೊಳ್ಳಿ ಎಂದು ಯಡಿಯೂರಪ್ಪ ಹೇಳಿದ್ದಾರೆ. ಸಭಾಧ್ಯಕ್ಷರಿಗೂ 50 ಕೋಟಿ ರೂ. ಕೊಟ್ಟು ಬುಕ್‌ ಮಾಡಿದ್ದೇವೆ. ಪಕ್ಷಾಂತರ ನಿಷೇಧ ಕಾಯಿದೆಯಿಂದ ಪಾರಾಗಲು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ಶಾ ಅವರು ಎಲ್ಲವನ್ನೂ ನಿಭಾಯಿಸುತ್ತಾರೆ. ಜಡ್ಜ್‌ಗಳನ್ನು ಬುಕ್‌ ಮಾಡುತ್ತಾರೆ ಎಂದೆಲ್ಲಾ ಯಡಿಯೂರಪ್ಪ ಹೇಳಿರುವುದು ಆಡಿಯೋದಲ್ಲಿ ದಾಖಲಾಗಿದೆ.

ಮಹಾರಾಷ್ಟ್ರ ಸಿಎಂ ಕೂಡ ಈ ಕಾರ್ಯಾಚರಣೆಯ ಭಾಗವಾಗಿದ್ದಾರೆ ಎಂಬುದನ್ನು ಯಡಿಯೂರಪ್ಪ ತಮ್ಮ ಸಂಭಾಷಣೆಯಲ್ಲಿ ಪ್ರಸ್ತಾಪಿಸಿದ್ದಾರೆ. ಈ ಆಡಿಯೊವನ್ನು ಪ್ರಧಾನಿಯವರಿಗೂ ಕಳಿಸಿಕೊಡುತ್ತೇನೆ. ಏನು ಕ್ರಮ ತೆಗೆದುಕೊಳ್ಳುತ್ತಾರೋ ಕೈಗೊಳ್ಳಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಹಿಂದೆ ಸರಕಾರ ಕೆಡವಲು ಸಾಧ್ಯವಾಗದಿರಬಹುದು. ಈ ಬಾರಿ ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಿದ್ದೇವೆ. ಆಡಳಿತ ಪಕ್ಷದ 12 ಮಂದಿ ಶಾಸಕರು ನಮ್ಮ ಜತೆ ಇದ್ದಾರೆ. ಜೆಡಿಎಸ್‌ ಶಾಸಕ ಗೌರಿಶಂಕರ್‌ ಕೂಡ ನಮ್ಮ ಜತೆ ಸೇರುತ್ತಾರೆ ಎಂದೆಲ್ಲಾ ಯಡಿಯೂರಪ್ಪ ಅವರು ನಂಬಿಸಲು ಪ್ರಯತ್ನಿಸಿದ್ದಾರೆ. 'ಆಪರೇಷನ್‌ ಕಮಲ' ಯಡಿಯೂರಪ್ಪ ಹುಟ್ಟುಗುಣ ಮತ್ತು ಅದು ಅವರಿಗೊಂದು ಚಾಳಿ ಎಂದರು. ಡಿಸಿಎಂ ಡಾ.ಜಿ.ಪರಮೇಶ್ವರ್‌ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಆಪರೇಷನ್‌ ಕಮಲಕ್ಕೆ ಕೋಟ್ಯಾಂತರ ರೂಪಾಯಿ ವ್ಯಯಿಸಲು ಸಿದ್ಧವಾಗಿರುವ ದುಡ್ಡು ಕಪ್ಪೋ, ಬಿಳುಪೋ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ