ಆ್ಯಪ್ನಗರ

ಬಿಎಸ್‌ವೈ ಸಂಪುಟದಲ್ಲಿ ಯಾರ‍್ಯಾರಿಗೆ ತಪ್ಪಿದೆ ಸಚಿವ ಸ್ಥಾನ? ಇಲ್ಲಿದೆ ನೋಡಿ

ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ಹಲವು ದಿನಗಳ ಬಳಿಕ ಕೊನೆಗೂ ಸಂಪುಟ ಭಾಗ್ಯ ದೊರೆತಿದೆ. ಈ ಪೈಕಿ ಮೊದಲ ಪಟ್ಟಿಯಲ್ಲಿ 17 ಶಾಸಕರು ಸಚಿವರಾಗಿದ್ದಾರೆ. ಹಲವು ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಈ ಪಟ್ಟಿಯನ್ನು ನೋಡೋಣ ಬನ್ನಿ.

Vijaya Karnataka Web 20 Aug 2019, 2:22 pm
ಬೆಂಗಳೂರು: ರಾಜ್ಯ ಸಚಿವ ಸಂಪುಟವನ್ನು ಅಂತಿಮಗೊಳಿಸಲಾಗಿದ್ದು, 17 ಮಂದಿ ಶಾಸಕರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡಲಾಗಿದೆ. ಇನ್ನು, ಹಲವು ಶಾಸಕರಿಗೆ ಸಚಿವ ಸ್ಥಾನ ಕೈಬಿಡಲಾಗಿದೆ.
Vijaya Karnataka Web Vidhanasoudha


ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಉಮೇಶ್‌ ಕತ್ತಿ, ಸುರಪುರ ಶಾಸಕ ರಾಜುಗೌಡ, ದತ್ತಾತ್ರೇಯ ಪಾಟೀಲ್ ರೇವೂರು, ಎ.ಎಸ್‌. ಪಾಟೀಲ್ ನಡಹಳ್ಳಿ, ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್‌, ರಾಮದಾಸ್, ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್‌, ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ಮುರುಗೇಶ್‌ ನಿರಾಣಿ, ಸಿ.ಪಿ.ಯೋಗೇಶ್ವರ್ ಮುಂತಾದವರಿಗೆ ಸಚಿವ ಸ್ಥಾನ ಕೈತಪ್ಪಿದೆ.

ಈ ಸುದ್ದಿಯನ್ನು ಓದಿ: ಸಚಿವ ಸಂಪುಟ ವಿಸ್ತರಣೆ: ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ
ಕಲಬುರಗಿ ಶಾಸಕ ದತ್ತಾತ್ರೇಯ ರೇವೂರು ಅವರಿಗೆ ಸಚಿವ ಸ್ಥಾನ ಪಕ್ಕಾ ಎಂದೇ ಹೇಳಲಾಗುತ್ತಿತ್ತು. ಆದರೆ ಅಂತಿಮ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಸಚಿವ ಸ್ಥಾನ ದೊರೆಯದಿರುವುದಕ್ಕೆ ಬೇಸರವಿಲ್ಲ, ಮಂತ್ರಿ ಮಾಡುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ, ಲಕ್ಷ್ಮಣ ಸವದಿಗೆ ದೊರೆತಿರುವುದನ್ನು ಸ್ವಾಗತಿಸುತ್ತೇನೆ ಎಂದು ಮಾಧ್ಯಮಗಳಿಗೆ ರೇವೂರು ಹೇಳಿದ್ದಾರೆ.

ಇನ್ನು, ಮಂತ್ರಿಗಿರಿ ತಪ್ಪಿರುವುದಕ್ಕೆ ಯಾದಗಿರಿಯ ಸುರಪುರದ ಶಾಸಕ ಅಸಮಾಧಾನ ಹೊರಹಾಕಿದ್ದಾರೆ. ರಾಜುಗೌಡ ಮುಖಂಡರು, ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರ ಕ್ಷೇತ್ರದ ಶಾಸಕ ರಾಜುಗೌಡ 100 ಕ್ಕೂ ಹೆಚ್ಚು ಮುಖಂಡರೊಂದಿಗೆ ಹೋಟೆಲ್‌ನಲ್ಲಿ ಸಭೆ ನಡೆಸಿದ್ದಾರೆ. ಅಲ್ಲದೆ, ಅಭಯ್ ಪಾಟೀಲ್ ಸಹ ಅಸಮಾಧಾನ ಹೊರಹಾಕಿದ್ದು, 5 - 10 ಶಾಸಕರು ಪಕ್ಷದಲ್ಲಿದ್ದಾಗಲೂ ಕೆಲಸ ಮಾಡಿದ್ದೇನೆ. ಆದರೀಗ ಪಕ್ಷ ತನಗೆ ಸಚಿವ ಸ್ಥಾನದಿಂದ ಕೈ ಬಿಟ್ಟಿರುವುದು ಏಕೆ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ. ಜತೆಗೆ ತಿಪ್ಪಾರೆಡ್ಡಿ ಸಹ ಮಂತ್ರಿಗಿರಿ ಸಿಗದ್ದಕ್ಕೆ ಬೇಸರಗೊಂಡು ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರು ಹಾಜರಾಗಿದ್ದಾರೆ. ಗೂಳೀಹಟ್ಟಿ ಶೇಖರ್‌ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಅಸಮಾಧಾನಿತ ಶಾಸಕರು
1. ಜಿಎಚ್‌ ತಿಪ್ಪಾರೆಡ್ಡಿ
2. ಗೂಳಿಹಟ್ಟಿ ಚಂದ್ರಶೇಖರ್‌
3. ಎಸ್‌ಎ ರವೀಂದ್ರನಾಥ್‌
4. ಎಂಪಿ ರೇಣುಕಾಚಾರ್ಯ
5. ಮುರುಗೇಶ್‌ ನಿರಾಣಿ
6. ಸಿಪಿ ಯೋಗೇಶ್ವರ್‌
7. ಮಾಡಾಳ್‌ ವಿರುಪಾಕ್ಷ
8. ಬಾಲಚಂದ್ರ ಜಾರಕಿಹೊಳಿ
9. ದತ್ತಾತ್ರೇಯ ಪಾಟಿಲ್‌ ರೇವೂರ
10. ಉಮೇಶ್‌ ಕತ್ತಿ
12. ಹಾಲಾಡಿ ಶ್ರೀನಿವಾಸ ಶೆಟ್ಟಿ

ಇದನ್ನೂ ಓದಿ: ಬಿಎಸ್‌ವೈ ಸಂಪುಟ: ಅತಿಹೆಚ್ಚು ಶಾಸಕರನ್ನು ಕೊಟ್ಟ ಕರಾವಳಿಗಿಲ್ಲ ಮಂತ್ರಿ ಸ್ಥಾನ
ಇನ್ನೊಂದೆಡೆ ಬಿಜೆಪಿಗೆ ಹೆಚ್ಚು ಗೆಲುವು ತಂದುಕೊಟ್ಟ ಕರಾವಳಿಯ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ. ಕರಾವಳಿಯ 3 ಜಿಲ್ಲೆಗಳಿಂದ ಒಬ್ಬರಿಗೆ ಮಾತ್ರ ಅದೂ ಎಂ.ಎಲ್‌.ಸಿಗೆ ಸಚಿವ ಸ್ಥಾನ ನೀಡಲಾಗಿದೆ. ಹೈದರಾಬಾದ್‌ ಕರ್ನಾಟಕ ಭಾಗದ ಲಿಂಗಾಯತರಿಗೂ ಸ್ಥಾನ ನೀಡಿಲ್ಲ ಎಂಬ ಅಸಮಾಧಾನ ಸಹ ಕೇಳಿಬರುತ್ತಿದೆ.

ಇಂದು ಬೆಳಗ್ಗೆ ಬಿಎಸ್‌ವೈ ಕ್ಯಾಬಿನೆಟ್‌ ವಿಸ್ತರಣೆ, 17 ಸಚಿವರ ಅಂತಿಮ ಪಟ್ಟಿ ಪ್ರಕಟ
ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಚನೆಯಾಗಿ ಹಲವು ದಿನಗಳು ಕಳೆದಿದ್ದರೂ ಸಂಪುಟ ರಚನೆಯಾಗಿರಲಿಲ್ಲ. ಸೋಮವಾರ ರಾತ್ರಿ 17 ಶಾಸಕರ ಪಟ್ಟಿಯನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಸಿಎಂ ಯಡಿಯೂರಪ್ಪ ರಾಜ್ಯಪಾಲ ವಜುಭಾಯಿ ವಾಲಾಗೆ ಕಳಿಸಿಕೊಟ್ಟಿದ್ದರು. ಮಂಗಳವಾರ ಬೆಳಗ್ಗೆ ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ 17 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕೊನೆಗೂ ಹೊರಬಿತ್ತು 17 ಸಚಿವರ ಪಟ್ಟಿ: ಯಾರಿಗೆ ಲಕ್? ಯಾರಿಗೆ ನಿರಾಶೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ