ಆ್ಯಪ್ನಗರ

ಅನಂತಕುಮಾರ ಹೆಗಡೆಗೆ ಮಾತೇ ಮಂತ್ರಿ ಪದವಿ ತಪ್ಪಿಸಿತೇ?

ಸಂಸದ ಅನಂತಕುಮಾರ ಹೆಗಡೆ ಈ ಹಿಂದೆ ಕೌಶಲಾಭಿವೃದ್ಧಿ ಖಾತೆಗೆ ನೀರಿಲ್ಲದ ಬಾವಿ ಎಂದು ಹೇಳಿ ಅವಾಂತರ ಮಾಡಿಕೊಂಡಿದ್ದರು. ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದಿರುವಿಕೆ ಬಗ್ಗೆಯೂ ಮೋದಿ ಬೇಸರಗೊಂಡಿದ್ದರು.

Vijaya Karnataka 31 May 2019, 10:36 am
ಬೆಂಗಳೂರು: ಅನಗತ್ಯ ಮಾತು ಮತ್ತು ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡದೆ ಪಕ್ಷವನ್ನು ಮೇಲಿಂದ ಮೇಲೆ ಮುಜುಗರಕ್ಕೆ ಒಳಪಡಿಸಿದ್ದೇ ಅನಂತಕುಮಾರ ಹೆಗಡೆ ಅವರಿಗೆ ಸಚಿವ ಸ್ಥಾನ ಕೈ ತಪ್ಪಲು ಕಾರಣ ಎನ್ನಲಾಗುತ್ತಿದೆ.
Vijaya Karnataka Web Ananthkumar Hegde


ಈ ಹಿಂದಿನ ಅವಧಿಯ ಕೊನೆಯಲ್ಲಿ ಬಲು ಮಹತ್ವದ ಕೌಶಲಾಭಿವೃದ್ಧಿ ಖಾತೆ ನೀಡಿದರೂ, ಆ ಖಾತೆ ‘ನೀರಿಲ್ಲದ ಬಾವಿ’ಎಂದು ಆರಂಭದಲ್ಲೇ ಹೇಳಿ ಅವಾಂತರ ಮಾಡಿಕೊಂಡ ಅನಂತಕುಮಾರ್‌ ಹೆಗಡೆ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿಲ್ಲ ಎಂದು ಪ್ರಧಾನಿ ಬೇಸರ ಗೊಂಡಿದ್ದರು.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅನಂತ ಹೆಗಡೆ ಪಕ್ಷಕ್ಕೆ ಹೆಚ್ಚು ಮತ ತರಬಹುದೆಂದು ನಿರೀಕ್ಷೆ ಮಾಡಿದ್ದರೆ, ತಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆ ಮಾಡುವುದಕ್ಕಾಗಿ ಎಂದು ಹೇಳಿ ಪಕ್ಷವನ್ನು ಪೇಚಿಗೆ ಸಿಲುಕಿಸಿದ್ದು ಅಮಿತ್‌ ಶಾ ಅವರಿಗೆ ಸಿಟ್ಟು ತರಿಸಿತ್ತು.

ಆ ಹೇಳಿಕೆಯಿಂದ ವಿಧಾನಸಭಾ ಚುನಾವಣೆಯಲ್ಲಿ ನಷ್ಟವಾಯಿತೆಂಬ ಅಭಿಪ್ರಾಯವೂ ಇದೆ. ಅಷ್ಟು ಸಾಲದ್ದಕ್ಕೆ ಈ ಚುನಾವಣೆ ಯಲ್ಲಿ ಗಾಂಧೀಜಿ ಹಂತಕ ಗೋಡ್ಸೆ ದೇಶಭಕ್ತ ಎಂಬುದನ್ನು ಸಮರ್ಥಿಸಿ ವಿವಾದಾಸ್ಪದ ಟ್ವೀಟ್‌ ಕೂಡ ದುಬಾರಿಯಾಗಿ ಪರಿಣಮಿಸಿದೆ.

ಈ ಎಲ್ಲ ಕಾರಣದಿಂದ ಮೋದಿ ಅವರು ಈ ಬಾರಿ ಸಚಿವ ಸ್ಥಾನ ನೀಡುವ ಮನಸ್ಸು ಮಾಡಿಲ್ಲ ಎಂದು ಹಿರಿಯ ಬಿಜೆಪಿ ಮುಖಂಡರೊಬ್ಬರು ಅಭಿಪ್ರಾಯಪಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ