ಆ್ಯಪ್ನಗರ

ಬಿಎಸ್‌ವೈ ವಿದೇಶ ಪ್ರವಾಸ ರದ್ದತಿಗೆ ಕಾರಣವೇನು..? ಚಳಿಯೋ, ರಾಜಕೀಯ ನಡುಕವೋ..?

ಸಿಎಂ ವಿದೇಶ ಪ್ರವಾಸ ರದ್ದತಿ ಹಿಂದೆ ‘ರಾಜಕಾರಣ’ವೂ ಇದೆ ಎನ್ನಲಾಗುತ್ತಿದೆ. ಜನವರಿ 17 ಇಲ್ಲವೇ 18ರಂದು ಸಂಪುಟ ವಿಸ್ತರಣೆ ನಡೆಯಲಿದ್ದು, ಆ ಬಳಿಕ ಸ್ಥಾನ ವಂಚಿತರು ಅಸಮಾಧಾನಗೊಳ್ಳುವ ಭೀತಿ ಇದೆ.

Vijaya Karnataka 9 Jan 2020, 11:20 pm
ಬೆಂಗಳೂರು: ಜನವರಿ 21 ರಿಂದ 24 ರವರೆಗೆ ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುವ ವಿಶ್ವ ಆರ್ಥಿಕ ಶೃಂಗದಲ್ಲಿ ಭಾಗವಹಿಸದಿರಲು ಸಿಎಂ ಬಿ.ಎಸ್‌. ಯಡಿಯೂರಪ್ಪ ನಿರ್ಧರಿಸಿದ್ದಾರೆ. ದಾವೋಸ್‌ನಲ್ಲಿ ಇದೀಗ ನಾಲ್ಕು ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿದ್ದು, ಈ ಚಳಿಗೆ ಒಗ್ಗಿಕೊಳ್ಳಲು ಆಗುವುದಿಲ್ಲ ಎಂಬ ಕಾರಣಕ್ಕಾಗಿಯೇ ಸಿಎಂ ಪ್ರವಾಸದಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.
Vijaya Karnataka Web bsy caricature
ಬಿಎಸ್‌ವೈ ವಿದೇಶ ಪ್ರವಾಸ ರದ್ದತಿಗೆ ಕಾರಣವೇನು..? ಚಳಿಯೋ, ರಾಜಕೀಯ ನಡುಕವೋ..?


ನಿಗದಿಯಂತೆ ಬಿಎಸ್‌ವೈ ಅವರು ಜನವರಿ 20ರಂದು ಪ್ರಯಾಣ ಬೆಳೆಸಬೇಕಿತ್ತು. ದಾವೋಸ್‌ಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಾಲಯದಿಂದಲೇ ಬಿಎಸ್‌ವೈ ಅವರಿಗೆ ಆಹ್ವಾನ ಬಂದಿತ್ತು. ಬಂಡವಾಳ ಆಕರ್ಷಣೆ ದೃಷ್ಟಿಯಿಂದ ವಿಶ್ವ ಆರ್ಥಿಕ ಶೃಂಗ ಮಹತ್ವದ ವೇದಿಕೆಯಾಗಿರುವುದರಿಂದ ಬಿಎಸ್‌ವೈ ಅವರೂ ಉತ್ಸುಕರಾಗಿದ್ದರು. ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಆದ್ರೆ, ಈ ವಯಸ್ಸಿನಲ್ಲಿ ಚಳಿ ವಾತಾವರಣದಲ್ಲಿ ಪ್ರವಾಸ ಕೈಗೊಳ್ಳುವುದು ಸೂಕ್ತವಲ್ಲವೆಂಬ ಅಭಿಪ್ರಾಯ ಸಿಎಂ ಅವರ ಕುಟುಂಬ ವಲಯದಲ್ಲೇ ವ್ಯಕ್ತವಾಯಿತು. ವೈದ್ಯರೂ ಕೂಡ ಚಳಿ ಪ್ರದೇಶದಲ್ಲಿ ಪ್ರವಾಸ ಕೈಗೊಳ್ಳದೇ ಇರುವುದು ಸೂಕ್ತವೆಂಬ ಸಲಹೆ ನೀಡಿದರು ಎನ್ನಲಾಗಿದೆ.

ಶೆಟ್ಟರ್‌ ಸಾರಥ್ಯ: ಈ ನಡುವೆ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ನೇತೃತ್ವದಲ್ಲಿ ಇಲಾಖೆ ಅಧಿಕಾರಿಗಳ ತಂಡ ದಾವೋಸ್‌ ಸಮ್ಮೇಳನದಲ್ಲಿ ಭಾಗಿಯಾಗಲಿದೆ.

ಡಿಕೆಶಿ 'ಕೈ' ತಪ್ಪಿದ ಕೆಪಿಸಿಸಿ ಅಧ್ಯಕ್ಷ ಪಟ್ಟ..? ಖಂಡ್ರೆ ಅಥವಾ ಎಂ.ಬಿ. ಪಾಟೀಲ್‌ರತ್ತ ವರಿಷ್ಠರ ಚಿತ್ತ..!

ರಾಜಕಾರಣ ಕಾರಣ..?: ಸಿಎಂ ವಿದೇಶ ಪ್ರವಾಸ ರದ್ದತಿ ಹಿಂದೆ ‘ರಾಜಕಾರಣ’ವೂ ಇದೆ ಎನ್ನಲಾಗುತ್ತಿದೆ. ಜನವರಿ 17 ಇಲ್ಲವೇ 18ರಂದು ಸಂಪುಟ ವಿಸ್ತರಣೆ ನಡೆಯಲಿದ್ದು, ಆ ಬಳಿಕ ಸ್ಥಾನ ವಂಚಿತರು ಅಸಮಾಧಾನಗೊಳ್ಳುವ ಭೀತಿ ಇದೆ. ಒಂದೊಮ್ಮೆ ಈ ಹಂತದಲ್ಲಿ ತಾವು ವಿದೇಶ ಪ್ರವಾಸಕ್ಕೆ ಹೋದರೆ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ ಎಂಬ ಕಾರಣಕ್ಕಾಗಿಯೂ ಬಿಎಸ್‌ವೈ ವಿದೇಶ ಪ್ರವಾಸ ರದ್ದು ಮಾಡಿದರು ಎಂಬ ಮಾತು ಕೇಳಿಬರುತ್ತಿದೆ. ಕಳೆದ ಬಾರಿ ಕುಮಾರಸ್ವಾಮಿ ಅವರು ವಿದೇಶ ಪ್ರವಾಸದಲ್ಲಿದ್ದಾಗಲೇ ಕಾಂಗ್ರೆಸ್‌, ಜೆಡಿಎಸ್‌ ಶಾಸಕರು ಬಂಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಜನವರಿ 17 ಅಥವಾ 18ಕ್ಕೆ ಸಂಪುಟ ವಿಸ್ತರಣೆ..? ಸಂಕ್ರಾಂತಿ ಬಳಿಕ 'ಅರ್ಹ'ರಿಗೆ ಬೆಲ್ಲ..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ