ಆ್ಯಪ್ನಗರ

ಕ್ಯಾಸಿನೋ ಹಿಂದೆ ‘ಆಪರೇಷನ್‌’ ಲಾಬಿ? ಪ್ರವಾಸೋದ್ಯಮ ಇಲಾಖೆ ಚಿಂತನೆಗೆ ವ್ಯಾಪಕ ವಿರೋಧ

ಬೆಂಗಳೂರು: ಅಮೆರಿಕ ಹಾಗೂ ಶ್ರೀಲಂಕಾ ಮಾದರಿಯಲ್ಲಿ ರಾಜ್ಯದಲ್ಲೂ ಕ್ಯಾಸಿನೋ (ಜೂಜು ಕೇಂದ್ರ) ತೆರೆಯಲು ಪ್ರವಾಸೋದ್ಯಮ ಇಲಾಖೆ ನಡೆಸಿರುವ ಚಿಂತನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಪ್ರವಾಸಿ ತಾಣವಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸಲು ಜೂಜಿಗೆ ಶರಣಾಗಬೇಕೆ? ಎಂಬ ಪ್ರಶ್ನೆ ಉದ್ಭವವಾಗಿದೆ. ಅಮೆರಿಕಾದ ಲಾಸ್‌ ವೆಗಾಸ್‌ ರೀತಿ ರಾಜ್ಯದಲ್ಲೂ ಕ್ಯಾಸಿನೋ ಆರಂಭಿಸಲು ಅನುಮತಿ ನೀಡುವ ಮೂಲಕ ಗೋವಾ ಹಾಗೂ ಶ್ರೀಲಂಕಾಕ್ಕೆ ತೆರಳುವ ರಾಜ್ಯದ ಪ್ರವಾಸಿಗರು ಹಾಗೂ ಅನ್ಯ ರಾಜ್ಯದ ಪ್ರವಾಸಿಗರನ್ನು ಬೆಂಗಳೂರಿನತ್ತ ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸಿದೆ. ಆದರೆ ಈ ಪ್ರಸ್ತಾಪ ಜಾರಿಗೆ ಬರುವ ಸಾಧ್ಯತೆ ಅನುಮಾನಾಸ್ಪದವಾಗಿದೆ. ಗೃಹ, ಬಿಬಿಎಂಪಿ ಸೇರಿದಂತೆ ನಾನಾ ಇಲಾಖೆ ಸಮನ್ವಯದೊಂದಿಗೆ ‘ಕ್ಯಾಸಿನೋ ಪ್ರವಾಸೋದ್ಯಮ’ ಅನುಷ್ಠಾನಗೊಳ್ಳಬೇಕಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಬಿಜೆಪಿಯ ಮಾತೃ ಸಂಸ್ಥೆ ಆರ್‌ಎಸ್‌ಎಸ್‌ನ ನೈತಿಕ ಚೌಕಟ್ಟಿಗೆ ಈ ಪ್ರಸ್ತಾಪ ಹೊಂದಿಕೆಯಾಗುತ್ತದೆಯೇ? ಎಂಬ ಪ್ರಶ್ನೆ ಉದ್ಭವವಾಗಿದೆ.

Vijaya Karnataka Web 22 Feb 2020, 8:11 pm
ಬೆಂಗಳೂರು: ಅಮೆರಿಕ ಹಾಗೂ ಶ್ರೀಲಂಕಾ ಮಾದರಿಯಲ್ಲಿ ರಾಜ್ಯದಲ್ಲೂ ಕ್ಯಾಸಿನೋ (ಜೂಜು ಕೇಂದ್ರ) ತೆರೆಯಲು ಪ್ರವಾಸೋದ್ಯಮ ಇಲಾಖೆ ನಡೆಸಿರುವ ಚಿಂತನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಪ್ರವಾಸಿ ತಾಣವಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸಲು ಜೂಜಿಗೆ ಶರಣಾಗಬೇಕೆ? ಎಂಬ ಪ್ರಶ್ನೆ ಉದ್ಭವವಾಗಿದೆ. ಅಮೆರಿಕಾದ ಲಾಸ್‌ ವೆಗಾಸ್‌ ರೀತಿ ರಾಜ್ಯದಲ್ಲೂ ಕ್ಯಾಸಿನೋ ಆರಂಭಿಸಲು ಅನುಮತಿ ನೀಡುವ ಮೂಲಕ ಗೋವಾ ಹಾಗೂ ಶ್ರೀಲಂಕಾಕ್ಕೆ ತೆರಳುವ ರಾಜ್ಯದ ಪ್ರವಾಸಿಗರು ಹಾಗೂ ಅನ್ಯ ರಾಜ್ಯದ ಪ್ರವಾಸಿಗರನ್ನು ಬೆಂಗಳೂರಿನತ್ತ ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸಿದೆ. ಆದರೆ ಈ ಪ್ರಸ್ತಾಪ ಜಾರಿಗೆ ಬರುವ ಸಾಧ್ಯತೆ ಅನುಮಾನಾಸ್ಪದವಾಗಿದೆ. ಗೃಹ, ಬಿಬಿಎಂಪಿ ಸೇರಿದಂತೆ ನಾನಾ ಇಲಾಖೆ ಸಮನ್ವಯದೊಂದಿಗೆ ‘ಕ್ಯಾಸಿನೋ ಪ್ರವಾಸೋದ್ಯಮ’ ಅನುಷ್ಠಾನಗೊಳ್ಳಬೇಕಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಬಿಜೆಪಿಯ ಮಾತೃ ಸಂಸ್ಥೆ ಆರ್‌ಎಸ್‌ಎಸ್‌ನ ನೈತಿಕ ಚೌಕಟ್ಟಿಗೆ ಈ ಪ್ರಸ್ತಾಪ ಹೊಂದಿಕೆಯಾಗುತ್ತದೆಯೇ? ಎಂಬ ಪ್ರಶ್ನೆ ಉದ್ಭವವಾಗಿದೆ.
Vijaya Karnataka Web widespread opposition to tourism departments proposal of starting casino center in karnataka
ಕ್ಯಾಸಿನೋ ಹಿಂದೆ ‘ಆಪರೇಷನ್‌’ ಲಾಬಿ? ಪ್ರವಾಸೋದ್ಯಮ ಇಲಾಖೆ ಚಿಂತನೆಗೆ ವ್ಯಾಪಕ ವಿರೋಧ



​‘ಕ್ಯಾಸಿನೋ ಕೇಂದ್ರ ತೆರೆಯಬೇಕೆಂದು ನಾನು ನೇರವಾಗಿ ಹೇಳಿಲ್ಲ’

ತಮ್ಮ ಈ ಪ್ರಸ್ತಾಪಕ್ಕೆ ರಾಜಕೀಯ ಹಾಗೂ ಸಾಮಾಜಿಕ ವಲಯದಿಂದ ಪ್ರತಿಕೂಲ ಪ್ರತಿಸ್ಪಂದನೆ ದೊರೆಯುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ‘ಕ್ಯಾಸಿನೋ ಕೇಂದ್ರ ತೆರೆಯಬೇಕೆಂದು ನಾನು ನೇರವಾಗಿ ಹೇಳಿಲ್ಲ. ವಿದೇಶದಲ್ಲಿ ಪ್ರವಾಸೋದ್ಯಮ ಹೇಗೆ ಅಭಿವೃದ್ಧಿಯಾಗಿದೆ ಎಂದಷ್ಟೇ ಹೇಳಿದ್ದೇನೆ. ಅಮೆರಿಕ, ಸಿಂಗಾಪುರ, ಶ್ರೀಲಂಕಾದಲ್ಲಿ ಸಾಕಷ್ಟು ಕ್ಯಾಸಿನೋಗಳಿದ್ದು ಅಲ್ಲಿಗೆ ಸಾಕಷ್ಟು ಭಾರತೀಯರು ಹೋಗುತ್ತಾರೆ. ಇಲ್ಲಿ ಮಡಿವಂತಿಕೆ ಪ್ರದರ್ಶಿಸುವವರು ಅಲ್ಲಿ ದುಡ್ಡು ಸುರಿಯುತ್ತಾರೆ ’ ಎಂದು ಉಡುಪಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.


ಕ್ಯಾಸಿನೊ ಆರಂಭಿಸುತ್ತೇವೆ ಎಂದು ನೇರವಾಗಿ ಹೇಳಿಲ್ಲ: ಸಚಿವರಿಂದ ವಿವಾದಕ್ಕೆ ತೆರೆ ಎಳೆಯೋ ಪ್ರಯತ್ನ

​ಕ್ಯಾಸಿನೋ ಕಿಂಗ್‌ಗಳ ಲಾಬಿ?

ಆದರೆ ಸಿಟಿ ರವಿಯವರ ಈ ಪ್ರಸ್ತಾಪ ಕೇವಲ ಪ್ರವಾಸೋದ್ಯಮ ಇಲಾಖೆ ಚಿಂತನೆಯಲ್ಲ. ಸರಕಾರದ ಉನ್ನತ ಹಂತದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ‘ಆಪರೇಷನ್‌ ಕಮಲ’ ಕಾರ್ಯಾಚರಣೆಯಲ್ಲಿ ಕ್ಯಾಸಿನೋ ಕಿಂಗ್‌ಗಳು ಪರೋಕ್ಷ ಬೆಂಬಲ ನೀಡಿದ್ದರು. ಆ ಋುಣ ತೀರಿಸಿಕೊಳ್ಳುವುದಕ್ಕೆ ಜೂಜು ಕೇಂದ್ರ ನಡೆಸಲು ಅನುಮತಿ ನೀಡುವ ಚಿಂತನೆ ನಡೆಸಲಾಗುತ್ತಿದೆ. ಇದರ ಹಿಂದೆ ಕಾಣದ ಪ್ರಭಾವಿ ಕೈಗಳ ಒತ್ತಡ ಇದೆ ಎಂಬ ವ್ಯಾಖ್ಯಾನ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಈ ಹಿಂದೆ ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ‘ಸ್ಕಿಲ್‌ ಗೇಮ್‌ ’ ಹಾವಳಿ ಬೆಂಗಳೂರಿನ ಕಾನೂನು-ಸುವ್ಯವಸ್ಥೆಗೆ ದೊಡ್ಡ ತೊಡಕುಂಟು ಮಾಡಿತ್ತು. ಕ್ಯಾಸಿನೋ ಸ್ಥಾಪನೆಗೆ ಅವಕಾಶ ನೀಡಿದರೆ ಸಂಘಟಿತ ಅಪರಾಧ ಹೆಚ್ಚಳಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂಬ ಆತಂಕ ಎದುರಾಗಿದೆ.

ವ್ಯಾಪಕ ವಿರೋಧ

ಸರಕಾರದ ಈ ಪ್ರಸ್ತಾಪಕ್ಕೆ ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಯೂತ್‌ ಆರ್ಗನೈಸೇಷನ್‌ (ಎಐಡಿವೈಓ) ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಹಿಂದೆ ಬಿಸಿ ಊಟಕ್ಕಾಗಿ ಸಂಪನ್ಮೂಲ ಕ್ರೋಢಿಕರಿಸುವುದಕ್ಕೆ ಎಸ್‌ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್‌ ಸರಕಾರ ಆನ್‌ಲೈನ್‌ ಲಾಟರಿ ಆರಂಭಿಸಿತ್ತು. ಇದರಿಂದ ಕೊಲೆ, ಸುಲಿಗೆ, ಆತ್ಮಹತ್ಯೆಯಂಥ ಪ್ರಕರಣಗಳು ಹೆಚ್ಚಿದವು. ಜೂಜನ್ನು ಉತ್ತೇಜಿಸುವುದು ಸಮಾಜಕ್ಕೆ ಮಾರಕ ಎಂದು ಸಂಘಟನೆ ರಾಜ್ಯ ಕಾರ್ಯದರ್ಶಿ ಡಾ.ಜಿ.ಎಸ್‌. ಕುಮಾರ್‌ ಹೇಳಿದ್ದಾರೆ.

​ಜೂಜಿಗೆ ಅವಕಾಶ ನೀಡಿದರೆ ಹಲವು ಸಮಸ್ಯೆ

ಕ್ಯಾಸಿನೋ ಕೇಂದ್ರಕ್ಕೆ ಅನುಮತಿ ನೀಡಬೇಕಿದ್ದರೆ ಅದಕ್ಕಾಗಿ ಪ್ರತ್ಯೇಕ ನೀತಿ ರೂಪಿಸಬೇಕಾಗುತ್ತದೆ. ಆದರೆ ಈ ಪ್ರಸ್ತಾಪ ಬಿಜೆಪಿಯ ತತ್ತ್ವ- ಸಿದ್ಧಾಂತಕ್ಕೆ ಅನುಗುಣವಾಗಿದೆಯೇ? ಎಂಬುದು ಮೂಲ ಪ್ರಶ್ನೆ. ಜೂಜಿಗೆ ಅವಕಾಶ ನೀಡಿದರೆ ಅದರ ಜತೆಗೆ ಹಲವು ಸಮಸ್ಯೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಇದೆಲ್ಲವನ್ನೂ ನಿಯಂತ್ರಿಸಲು ಸರಕಾರ ಸಿದ್ಧವಾಗಿದೆಯೇ? ಎಂದು ಪ್ರವಾಸೋದ್ಯಮ ಖಾತೆ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ