ಆ್ಯಪ್ನಗರ

ಶಾಸಕರ ಅನರ್ಹತೆ: ಬಿಜೆಪಿಗೆ ಆಗುತ್ತಾ ಪ್ಲಸ್‌ ಪಾಯಿಂಟ್‌?

ಕರ್ನಾಟಕ ವಿಧಾನಸಭೆಯಲ್ಲಿ ಮತ್ತೊಂದು ವಿಶ್ವಾಸಮತಯಾಚನೆಯ ಅಗ್ನಿ ಪರೀಕ್ಷೆ ಸೋಮವಾರ ನಡೆಯಲಿದೆ. ಈ ಪರೀಕ್ಷೆಯಲ್ಲಿ ಬಿಎಸ್‌ ಯಡಿಯೂರಪ್ಪ ಯಶಸ್ವಿಯಾಗುತ್ತಾರಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Vijaya Karnataka Web 28 Jul 2019, 7:01 pm
ಬೆಂಗಳೂರು: ದೋಸ್ತಿ ಸರಕಾರದ ವಿರುದ್ಧ ಬಂಡಾಯದ ಕಹಳೆ ಊದಿ, ರಾಜೀನಾಮೆ ನೀಡಿ ಮುಂಬಯಿಯಲ್ಲಿ ವಾಸ್ತವ್ಯ ಹೂಡಿದ್ದ ಅತೃಪ್ತ ಶಾಸಕರನ್ನು ಸ್ಪೀಕರ್ ಕೆ.ಆರ್‌. ರಮೇಶ್‌ ಕುಮಾರ್‌ ಅನರ್ಹಗೊಳಿಸಿದ್ದಾರೆ.
Vijaya Karnataka Web ಬಿಎಸ್‌ವೈ
ಬಿಎಸ್‌ವೈ


ಇದು ಒಂದು ರೀತಿಯಲ್ಲಿ ಬಿಜೆಪಿಗೆ ಲಾಭದಾಯಕವೇ ಆಗುವ ಸಾಧ್ಯತೆ ಇದೆ.

ಸೋಮವಾರ ವಿಶ್ವಾಸ ಮತ ಯಾಚನೆ ಮಾಡುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈಗಾಗಲೇ ತಿಳಿಸಿದ್ದಾರೆ. ಅದಕ್ಕೆ ಮುನ್ನಾ ದಿನವೇ ಸ್ಪೀಕರ್‌ ರಮೇಶ್‌ ಕುಮಾರ್‌ ಅತೃಪ್ತರಿಗೆ ಶಾಕ್‌ ಕೊಟ್ಟಿದ್ದಾರೆ.

ಹೀಗಾಗಿ ವಿವಿಧಾನಸಭೆಯ ಬಲಾಬಲದ ಮೇಲೆ ಇದು ಪರಿಣಾಮ ಬೀರಲಿದೆ.

ಈಗಿರುವ ವಿಧಾನಸಭೆಯ ಬಲ 224, ಬಿಜೆಪಿ 105, ಕಾಂಗ್ರೆಸ್‌ 79, ಜೆಡಿಎಸ್‌ 37 ಸ್ಥಾನ ಪಡೆದಿದೆ. ಪಕ್ಷೇತರ 1, ಕೆಪಿಜೆಪಿ 1, ಬಿಎಸ್‌ಪಿ 1 ಸ್ಥಾನ ಪಡೆದಿತ್ತು.

ಕೆಪಿಜೆಪಿಯ ಆರ್‌. ಶಂಕರ್ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದ್ದಾರೆ. ಶಂಕರ್‌ ಸೇರಿದಂತೆ ಮೂವರನ್ನು ಕಳೆದ ವಾರ ಅನರ್ಹಗೊಳಿಸಲಾಗಿತ್ತು. ಭಾನುವಾರ ಇನ್ನೂ 14 ಶಾಸಕರನ್ನು ಅನರ್ಹಗೊಳಿಸಿದ್ದರಿಂದ 17 ಮಂದಿ ಅನರ್ಹರಾಗಿದ್ದಾರೆ.

ಇದರಿಂದಾಗಿ ಕಾಂಗ್ರೆಸ್‌ ಬಲ 64, ಜೆಡಿಎಸ್‌ ಬಲ 34ಕ್ಕೆ ಇಳಿದಿದೆ. ವಿಧಾನಸಭೆ ಬಲಾಬಲ ಈಗ 207 ಹೀಗಾಗಿ ಮ್ಯಾಜಿಕ್‌ ನಂಬರ್‌ 104 ಆಗಲಿದೆ. ಬಿಜೆಪಿ ಬಳಿ ಈಗ 106 ಸದಸ್ಯ ಬಲ ಇದೆ.

ಹೀಗಾಗಿ ಸೋಮವಾರ ನಡೆಯಲಿರುವ ವಿಶ್ವಾಸಮತಯಾಚನೆ ಪರೀಕ್ಷೆಯಲ್ಲಿ ಬಿಎಸ್‌ ಯಡಿಯೂರಪ್ಪ ಪಾಸಾಗಬಹುದು.

17 ಅತೃಪ್ತ ಶಾಸಕರನ್ನು ಅನರ್ಹಗೊಳಿಸುವ ಮೂಲಕ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಸೇಡು ತೀರಿಸಿಕೊಂಡಿವೆ. ಈಗ ಅತೃಪ್ತ ಶಾಸಕರು ಕಾನೂನು ಹೋರಾಟದ ಮೊರೆ ಹೋಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ