ಆ್ಯಪ್ನಗರ

ಪಕ್ಷ ಬಿಡದಂತೆ ನಾಯಕರು ಮನವಿ ಮಾಡಿದ್ದಾರೆ, ಸಚಿವ ಸ್ಥಾನಕ್ಕೆ ಲಾಬಿ ಮಾಡಿಲ್ಲ: ರಾಮಲಿಂಗಾರೆಡ್ಡಿ

ಬಂಡಾಯದ ಬಾವುಟ ಹಾರಿಸಿರುವ ಬೆಂಗಳೂರು ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಮನವೊಲಿಕೆ ಕಸರತ್ತು ಸಾಗಿದ್ದು, ಹಿರಿಯ ನಾಯಕರ ದಂಡೇ ಭಾನುವಾರ ತೆರಳಿತ್ತು.

Vijaya Karnataka Web 14 Jul 2019, 10:00 pm
ಬೆಂಗಳೂರು: ದೋಸ್ತಿ ಸರಕಾರಕ್ಕೆ ತೀವ್ರ ಶಾಕ್ ನೀಡಿರುವ ಬಿಟಿಎಂ ಕ್ಷೇತ್ರದ ಶಾಸಕ ರಾಮಲಿಂಗಾರೆಡ್ಡಿ ಮನವೊಲಿಕೆ ಕಸರತ್ತು ನಡೆದಿದೆ. ಆದರೆ ರಾಮಲಿಂಗಾರೆಡ್ಡಿ ತಮ್ಮ ನಿಲುವು ಬದಲಿಸುವ ಮನಸ್ಸು ಮಾಡಿಲ್ಲ
Vijaya Karnataka Web ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ


ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ನಾಯಕರ ಜತೆಗಿನ ಸಂಧಾನ ನಂತರ ಆನೇಕಲ್‌ ಸಮೀಪದ ಫಾರ್ಮ್‌ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಪಕ್ಷವನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ನಾಯಕರು ಮನವಿ ಮಾಡಿದ್ದಾರೆ. ಆದರೆ ಉಸ್ತುವಾರಿ ಹೊತ್ತಿರುವ ನಾಯಕರು ಇಲ್ಲಿಗೆ ಬರಬಾರದಿತ್ತು. ನನಗೆ ಫೋನ್‌ ಮಾಡಿದ್ದರೆ ನಾನೇ ಹೋಗಿ ಮಾತನಾಡುತ್ತಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಜುಲೈ 15ರವರೆಗೆ ರಾಜಕೀಯ ಮಾತನಾಡುವುದಿಲ್ಲ. ಸೋಮವಾರ ನಡೆಯುವ ವಿಧಾನಸಭಾ ಕಲಾಪಕ್ಕೆ ಹಾಜರಾಗುತ್ತೇನೆ ಎಂದು ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ