ಆ್ಯಪ್ನಗರ

ತಿಂಗಳೊಳಗೆ ಸಚಿವರೊಬ್ಬರು ರಾಜೀನಾಮೆ ನೀಡ್ತಾರೆ, ಆ ಸ್ಥಾನ ನನಗೆ: ಜೆಡಿಎಸ್‌ ಶಾಸಕ ಸತ್ಯನಾರಾಯಣ

ರಾಜೀನಾಮೆ ನಿರ್ಧಾರವನ್ನು ಮುಂದೂಡಿದ ಜೆಡಿಎಸ್‌ ನಾಯಕ

Vijaya Karnataka Web 7 Jun 2018, 4:59 pm
ಬೆಂಗಳೂರು: ಸಚಿವ ಸ್ಥಾನ ಸಿಗದಿದ್ದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ರಾಜೀನಾಮೆ ನೀಡುವುದಾಗಿ ತಿಳಿಸಿದ್ದ ಶಿರಾ ಜೆಡಿಎಸ್‌ ಶಾಸಕ ಬಿ. ಸತ್ಯನಾರಾಯಣ, ಈಗ ತಮ್ಮ ನಿರ್ಧಾರವನ್ನು ಮುಂದೂಡಿದ್ದಾರೆ.
Vijaya Karnataka Web ಜೆಡಿಎಸ್‌
ಜೆಡಿಎಸ್‌


ಒಂದು ತಿಂಗಳಿನಲ್ಲಿ ಜೆಡಿಎಸ್‌ ಸಚಿವರೊಬ್ಬರು ರಾಜೀನಾಮೆ ನೀಡಲಿದ್ದಾರೆ. ಆ ಸ್ಥಾನವನ್ನು ನನಗೇ ನೀಡುವುದಾಗಿ ಜೆಡಿಎಸ್‌ ವರಿಷ್ಠರು ಭರವಸೆ ನೀಡಿದ್ದಾರೆ. ಒಂದು ತಿಂಗಳು ಕಾದು ನೋಡೋಣ ಎಂದು ಅವರು ತಿಳಿಸಿದರು.

ಸಚಿವರ ಪ್ರಮಾಣ ವಚನ ನಂತರ ತೀವ್ರ ಆಕ್ರೋಶಗೊಂಡಿದ್ದ ಸತ್ಯನಾರಾಯಣ ರಾಜೀನಾಮೆ ಬೆದರಿಕೆ ಒಡ್ಡಿದ್ದರು. ಆದರೆ ಜೆಡಿಎಸ್‌ ವರಿಷ್ಠರು ಗುರುವಾರ ಸತ್ಯನಾರಾಯಣ ಜತೆ ಮಾತುಕತೆ ನಡೆಸಿ ಮನವೊಲಿಸಿದರು.

ಕಳೆದ 10 ವರ್ಷಗಳಿಂದಲೂ ಅಧಿಕಾರವಿಲ್ಲದೆ ವಿರೋಧಪಕ್ಷದಲ್ಲಿದ್ದೆವು. ಈಗ ಮೈತ್ರಿಯಿಂದ ಅಧಿಕಾರ ಸಿಕ್ಕಿದ್ದು, ಅಧಿಕಾರ ಉಳಿಯಬೇಕು, ಮುಖ್ಯಮಂತ್ರಿಗಳ ಸ್ಥಾನ ಉಳಿಯಬೇಕು ಎಂದು ನಾಯಕರು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಶಾಸಕರು ತಿಳಿಸಿದರು.

ಅದರಂತೆ ನಾನು ನನ್ನ ಕ್ಷೇತ್ರದ ಜನರ ಸೇವೆಯಲ್ಲಿ ತೊಡಗುತ್ತೇನೆ.

ಒಂದು ತಿಂಗಳ ನಂತರ ಸಚಿವರೊಬ್ಬರು ರಾಜೀನಾಮೆ ನೀಡುತ್ತಾರೆ. ಆಗ ನನಗೆ ಸಚಿವ ಸ್ಥಾನ ಕೊಡುವುದಾಗಿ ಪಕ್ಷದ ವರಿಷ್ಠರು ಭರವಸೆ ನೀಡಿದ್ದರು. ಆದರೆ ಇದು ಕಷ್ಟಸಾಧ್ಯ. ಕಾದು ನೋಡೋಣ ಎಂದು ಸತ್ಯನಾರಾಯಣ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ