ಬೆಂಗಳೂರು: ಕೊರೊನಾ ಮೂರನೇ ಅಲೆಯಲ್ಲಿ ಅಪೌಷ್ಟಿಕ ಸಮಸ್ಯೆ ಎದುರಿಸುತ್ತಿರುವ ಮಕ್ಕಳ ರಕ್ಷಣೆಗೆ ಮುಂದಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕೋವಿಡ್, ಬ್ಲ್ಯಾಕ್ ಫಂಗಸ್, ಕವಾಸಕಿ ಸಾಂಕ್ರಾಮಿಕ ರೋಗದಿಂದ ಮಕ್ಕಳನ್ನು ರಕ್ಷಿಸಲು ಕರಡು ಪ್ರತಿ ಸಿದ್ಧಪಡಿಸಿದೆ. ರೋಗ ನಿರೋಧಕ ಶಕ್ತಿ ಕುಂದಿರುವ ಮಕ್ಕಳಲ್ಲೂ ಕಾಣಿಸುತ್ತಿರುವ ಈ ಮೂರು ರೋಗಗಳು, ಅಪೌಷ್ಟಿಕ ಮಕ್ಕಳಲ್ಲಿ ಬಹುಬೇಗ ವ್ಯಾಪಿಸುವ ಸಂಭವವಿದ್ದು, ರಕ್ಷಣೆಗೆ ಪೂರ್ವ ನಿಯೋಜಿತ ಕಾರ್ಯಕ್ರಮಗಳ ಪಟ್ಟಿ ಸಿದ್ಧಪಡಿಸಿದೆ.
ಕೋವಿಡ್ ಎರಡನೇ ಅಲೆಯಲ್ಲಿ 45 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈವರೆಗೂ 7 ಮಕ್ಕಳಲ್ಲಿ ಬ್ಲ್ಯಾಕ್ ಫಂಗಸ್ನಿಂದಾಗಿ ಕಣ್ಣು ಮತ್ತು ಮೆದುಳಿಗೆ ಹಾನಿ ಊಂಟು ಮಾಡಿದೆ. ಕವಾಸಕಿ ರೋಗ ಲಕ್ಷಣವು ಹಲವು ಮಕ್ಕಳನ್ನು ಬಾಧಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಮೂರನೇ ಅಲೆಯಲ್ಲಿ ಎಚ್ಚರಿಕೆ ಹೆಜ್ಜೆಯಿಡಲು ಇಲಾಖೆ ನಿರ್ಧರಿಸಿದೆ.
ಅಲೆಮಾರಿಗಳ ಮೇಲೆ ನಿಗಾ: ಅಲೆಮಾರಿ, ಆದಿವಾಸಿ ಹಾಗೂ ತಾಂಡಾಗಳ ಮಕ್ಕಳಲ್ಲಿ ಕೋವಿಡ್ ಸೋಂಕು ಉಲ್ಬಣಿಸುತ್ತಿದ್ದರೂ, ಆರೋಗ್ಯ ಇಲಾಖೆ ತಪಾಸಣೆ ನಡೆಸುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಿತ್ತು. ಈ ಸ್ಥಳಗಳಲ್ಲಿ ಕ್ರಮ ಬದ್ಧ ತಪಾಸಣೆ, ಆರೋಗ್ಯ ಪಡೆಗಳು ಪ್ರತಿನಿತ್ಯ ಭೇಟಿ ನೀಡಿ ತಪಾಸಣೆ ನಡೆಸುವಂತೆ ಸೂಚನೆ, ಇಲ್ಲಿನ ಪಾಲಕರು ಲಸಿಕೆ ಪಡೆಯುವುದರಿಂದ ಮಕ್ಕಳಿಗೆ ಕೋವಿಡ್ ಬರುವುದನ್ನು ತಡೆಯಬಹುದಾದ ಸಲಹೆ ನೀಡಲು ಸೂಚಿಸಲಾಗಿದೆ.
ಕರಡು ಪ್ರತಿಯಲ್ಲಿನ ಪ್ರಮುಖ ಅಂಶಗಳು
- ಅಪೌಷ್ಠಿಕ ಮಕ್ಕಳಿಗೆ ನಿತ್ಯ ಆರೋಗ್ಯ ತಪಾಸಣೆ, ಪೌಷ್ಠಿಕ ಆಹಾರ ಒದಗಿಸುವುದು
- ಪ್ರತಿ ಜಿಲ್ಲೆಯಲ್ಲಿ ಪ್ರತ್ಯೇಕ ಮಕ್ಕಳ ಕೋವಿಡ್ ಕೇರ್ ಸೆಂಟರ್ ಆರಂಭ
- ತೀವ್ರ ಅಪೌಷ್ಠಿಕ ಮಕ್ಕಳಿಗೆ ಚುಚ್ಚುಮದ್ದು ಕಡ್ಡಾಯ
- ಪ್ರತಿ ತಾಲೂಕಿನಲ್ಲಿಮಕ್ಕಳ ಸಹಾಯವಾಣಿ/ವಾರ್ ರೂಂ ಸ್ಥಾಪನೆ
- ತಾಲೂಕು ಕೇಂದ್ರದಲ್ಲಿ ಚಿಕಿತ್ಸಾ ಸೌಲಭ್ಯ, ಉಪಕರಣ ಮತ್ತು ಔಷಧ ಸಮರ್ಪಕ ದಾಸ್ತಾನು
- ಅಂಗನವಾಡಿ ಕಾರ್ಯಕರ್ತೆಯರಿಗೆ ಥರ್ಮಲ್ ಸ್ಕ್ಯಾನರ್ ಮತ್ತು ಆ್ಯಕ್ಸಿಮೀಟರ್ ನೀಡಿ ತಪಾಸಣೆ
- ಬಾಲವಿಕಾಸ ಸಮಿತಿಗಳ ಮೂಲಕ ಗ್ರಾಮೀಣ ಭಾಗದಲ್ಲಿಅರಿವು
'ಅಪೌಷ್ಟಿಕ ಮಕ್ಕಳ ತಪಾಸಣೆ, ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರ ಸಿಗದೇ ಇದ್ದರೆ ಸ್ಥಳೀಯ ಇಲಾಖೆಗೆ ಅಥವಾ ಸಹಾಯವಾಣಿ ಮೂಲಕ ದೂರು ನೀಡಬಹುದು' ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಾದ ಅನುರಾಧಾ ಕೆ.ಎನ್. ಕರೆ ನೀಡಿದ್ದಾರೆ.
ಕೋವಿಡ್ ಎರಡನೇ ಅಲೆಯಲ್ಲಿ 45 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈವರೆಗೂ 7 ಮಕ್ಕಳಲ್ಲಿ ಬ್ಲ್ಯಾಕ್ ಫಂಗಸ್ನಿಂದಾಗಿ ಕಣ್ಣು ಮತ್ತು ಮೆದುಳಿಗೆ ಹಾನಿ ಊಂಟು ಮಾಡಿದೆ. ಕವಾಸಕಿ ರೋಗ ಲಕ್ಷಣವು ಹಲವು ಮಕ್ಕಳನ್ನು ಬಾಧಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಮೂರನೇ ಅಲೆಯಲ್ಲಿ ಎಚ್ಚರಿಕೆ ಹೆಜ್ಜೆಯಿಡಲು ಇಲಾಖೆ ನಿರ್ಧರಿಸಿದೆ.
ಅಲೆಮಾರಿಗಳ ಮೇಲೆ ನಿಗಾ: ಅಲೆಮಾರಿ, ಆದಿವಾಸಿ ಹಾಗೂ ತಾಂಡಾಗಳ ಮಕ್ಕಳಲ್ಲಿ ಕೋವಿಡ್ ಸೋಂಕು ಉಲ್ಬಣಿಸುತ್ತಿದ್ದರೂ, ಆರೋಗ್ಯ ಇಲಾಖೆ ತಪಾಸಣೆ ನಡೆಸುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಿತ್ತು. ಈ ಸ್ಥಳಗಳಲ್ಲಿ ಕ್ರಮ ಬದ್ಧ ತಪಾಸಣೆ, ಆರೋಗ್ಯ ಪಡೆಗಳು ಪ್ರತಿನಿತ್ಯ ಭೇಟಿ ನೀಡಿ ತಪಾಸಣೆ ನಡೆಸುವಂತೆ ಸೂಚನೆ, ಇಲ್ಲಿನ ಪಾಲಕರು ಲಸಿಕೆ ಪಡೆಯುವುದರಿಂದ ಮಕ್ಕಳಿಗೆ ಕೋವಿಡ್ ಬರುವುದನ್ನು ತಡೆಯಬಹುದಾದ ಸಲಹೆ ನೀಡಲು ಸೂಚಿಸಲಾಗಿದೆ.
ಕರಡು ಪ್ರತಿಯಲ್ಲಿನ ಪ್ರಮುಖ ಅಂಶಗಳು
- ಅಪೌಷ್ಠಿಕ ಮಕ್ಕಳಿಗೆ ನಿತ್ಯ ಆರೋಗ್ಯ ತಪಾಸಣೆ, ಪೌಷ್ಠಿಕ ಆಹಾರ ಒದಗಿಸುವುದು
- ಪ್ರತಿ ಜಿಲ್ಲೆಯಲ್ಲಿ ಪ್ರತ್ಯೇಕ ಮಕ್ಕಳ ಕೋವಿಡ್ ಕೇರ್ ಸೆಂಟರ್ ಆರಂಭ
- ತೀವ್ರ ಅಪೌಷ್ಠಿಕ ಮಕ್ಕಳಿಗೆ ಚುಚ್ಚುಮದ್ದು ಕಡ್ಡಾಯ
- ಪ್ರತಿ ತಾಲೂಕಿನಲ್ಲಿಮಕ್ಕಳ ಸಹಾಯವಾಣಿ/ವಾರ್ ರೂಂ ಸ್ಥಾಪನೆ
- ತಾಲೂಕು ಕೇಂದ್ರದಲ್ಲಿ ಚಿಕಿತ್ಸಾ ಸೌಲಭ್ಯ, ಉಪಕರಣ ಮತ್ತು ಔಷಧ ಸಮರ್ಪಕ ದಾಸ್ತಾನು
- ಅಂಗನವಾಡಿ ಕಾರ್ಯಕರ್ತೆಯರಿಗೆ ಥರ್ಮಲ್ ಸ್ಕ್ಯಾನರ್ ಮತ್ತು ಆ್ಯಕ್ಸಿಮೀಟರ್ ನೀಡಿ ತಪಾಸಣೆ
- ಬಾಲವಿಕಾಸ ಸಮಿತಿಗಳ ಮೂಲಕ ಗ್ರಾಮೀಣ ಭಾಗದಲ್ಲಿಅರಿವು
'ಅಪೌಷ್ಟಿಕ ಮಕ್ಕಳ ತಪಾಸಣೆ, ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರ ಸಿಗದೇ ಇದ್ದರೆ ಸ್ಥಳೀಯ ಇಲಾಖೆಗೆ ಅಥವಾ ಸಹಾಯವಾಣಿ ಮೂಲಕ ದೂರು ನೀಡಬಹುದು' ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಾದ ಅನುರಾಧಾ ಕೆ.ಎನ್. ಕರೆ ನೀಡಿದ್ದಾರೆ.