ಆ್ಯಪ್ನಗರ

ಕಾರ್ಮಿಕರನ್ನು ಹಿಡಿದಿಟ್ಟಿಲ್ಲ, ಪ. ಬಂಗಾಳದಂತಹ ರಾಜ್ಯಗಳು ಯಾರನ್ನು ಕಳಿಸಬೇಡಿ ಎನ್ನುತ್ತಿವೆ: ಆರ್‌. ಅಶೋಕ್‌

ಕಾರ್ಮಿಕರನ್ನು ತಡೆ ಹಿಡಿಯಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್‌. ಅಶೋಕ್‌, ವಿಮಲ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 5 ಸಾವಿರಕ್ಕೂ ಹೆಚ್ಚು ಮಂದಿ ತಮ್ಮ ಊರಿಗೆ ತೆರಳದೆ ಉಳಿದುಕೊಂಡಿದ್ದರ ಹಿಂದಿನ ಕಾರಣವನ್ನು ಸ್ಪಷ್ಟಪಡಿಸಿದ್ದಾರೆ.

Vijaya Karnataka Web 7 May 2020, 6:53 am
ಬೆಂಗಳೂರು: ಕಾರ್ಮಿಕರು ತಮ್ಮ ರಾಜ್ಯಕ್ಕೆ ಹಿಂದಿರುಗುವುದಕ್ಕೆ ಅಡ್ಡಿಯುಂಟು ಮಾಡಿಲ್ಲ. ಯಾವುದೇ ರಾಜ್ಯದ ಕಾರ್ಮಿಕರು ಅವರ ಊರಿಗೆ ಹೋಗುವುದನ್ನು ತಡೆದಿಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.
Vijaya Karnataka Web Workers


ವಿಧಾನಸೌಧದಲ್ಲಿ ಮಾತನಾಡಿದ ಅವರು, ''ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದ ಬಳಿಯಿದ್ದ 5 ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ತಡೆಹಿಡಿಯಲಾಗಿದೆ ಎಂಬ ಆರೋಪಕ್ಕೆ ಅರ್ಥವಿಲ್ಲ. ವಿಮಲ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ಸಂಬಳ ನೀಡಿರದ ಕಾರಣ ಊರಿಗೆ ಹೊರಟಿದ್ದರು. ಹಾಗಾಗಿ ತಕ್ಷಣವೇ ಕಂಪನಿ ಜತೆಗೆ ಮಾತುಕತೆ ನಡೆಸಿ 20 ಸಾವಿರ ರೂ. ಕೊಡಿಸುವ ಭರವಸೆ ನೀಡಲಾಯಿತು. ಇದರಿಂದಾಗಿ ಕಾರ್ಮಿಕರು ಪ್ರಯಾಣ ಸ್ಥಗಿತಗೊಳಿಸಿದರು. ತಮ್ಮ ರಾಜ್ಯಕ್ಕೆ ಹೋದಾಗ 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ ಎಂಬ ಕಾರಣದಿಂದಲೂ ಕಾರ್ಮಿಕರು ಇಲ್ಲಿಯೇ ಉಳಿದುಕೊಂಡಿದ್ದಾರೆ,'' ಎಂದು ಸ್ಪಷ್ಟ ಪಡಿಸಿದರು.

''ರಾಜ್ಯದಿಂದ ರಾಜ್ಯಕ್ಕೆ ಕಾರ್ಮಿಕರನ್ನು ಕಳುಹಿಸಿ ಕೊಡುವಾಗ ಸಂಬಂಧಿಸಿದ ರಾಜ್ಯಗಳ ಅನುಮತಿ ಅಗತ್ಯ. ಪಶ್ಚಿಮ ಬಂಗಾಳ ಸರಕಾರ ಯಾರನ್ನೂ ಕಳುಹಿಸುವುದು ಬೇಡವೆಂದಿದೆ. ಈವರೆಗೆ ರೈಲಿನ ಮೂಲಕ ನಮ್ಮ ರಾಜ್ಯದಿಂದ 9,600 ಕಾರ್ಮಿಕರು ಜಾರ್ಖಂಡ್‌, ಓಡಿಶಾ, ರಾಜಸ್ಥಾನಕ್ಕೆ ತೆರಳಿದ್ದಾರೆ. ಇದರ ಹೊರತಾಗಿ ಬಿಹಾರ್‌ನ 52 ಸಾವಿರ, ಉತ್ತರ ಪ್ರದೇಶದ 34,508, ರಾಜಸ್ತಾನದ 18,808, ಜಾರ್ಖಂಡ್‌ನ 16,304 ಹಾಗೂ ಕೇರಳದ 12 ಸಾವಿರ ಮಂದಿ ತಮ್ಮ ರಾಜ್ಯಕ್ಕೆ ತೆರಳಲು ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ,'' ಎಂದು ಹೇಳಿದರು.

ಬಿಎಸ್‌ವೈ ವಿಶೇಷ ಪ್ಯಾಕೇಜ್‌: ಯಾವ ವರ್ಗಕ್ಕೆ ಎಷ್ಟು ಪರಿಹಾರ ಮೊತ್ತ ಸಿಗುತ್ತಿದೆ? ಇಲ್ಲಿದೆ ವಿವರ

ಅಧಿವೇಶನ ಬೇಕಿಲ್ಲ: ಈ ಮಧ್ಯೆ ಕೊರೊನಾ ನಿರ್ವಹಣೆ ಚರ್ಚೆಗೆ ವಿಶೇಷ ಅಧಿವೇಶನ ಕರೆಯಬೇಕೆಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಎಂ ಬಿ.ಎಸ್‌.ಯಡಿಯೂರಪ್ಪ, ''ಅಧಿವೇಶನದ ಅಗತ್ಯವಿಲ್ಲ. ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ ಮುಖಂಡರ ಸಭೆ ನಡೆಸಲಾಗುವುದು. ಅವರು ಬಂದು ಸಲಹೆ ನೀಡಲಿ,'' ಎಂದಿದ್ದಾರೆ.

ಕ್ವಾರಂಟೈನ್‌ಗೆ ರೂಮ್‌ ಕೊಡುವ ವಿಚಾರ: ಅಡ್ಡಕತ್ತರಿಗೆ ಸಿಲುಕಿದ ಹೊಟೇಲ್‌ ಮಾಲೀಕರು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ