ಆ್ಯಪ್ನಗರ

ಪ್ರವಾಹದ ಹೆಸರಲ್ಲಿ ಕಳೆದ ವರ್ಷ ನೀಡಿದ್ದ ಭರವಸೆಗಳು ಏನಾದವು? ರಾಜ್ಯ ಸರ್ಕಾರದ ವಿರುದ್ಧ ಖಂಡ್ರೆ ಕಿಡಿ

ಪ್ರವಾಹದ ಹೆಸರಲ್ಲಿ ಕಳೆದ ವರ್ಷ ನೀಡಿದ್ದ ಭರವಸೆಗಳು ಏನಾದವು? ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಟ್ವಿಟ್ಟರ್‌ ನಲ್ಲಿ ಸರ್ಕಾರವನ್ನು ಅವರು ತರಾಟೆಗೆ ತೆಗೆದುಕೊಂಡಿದ್ದು ಹೀಗೆ

Vijaya Karnataka Web 9 Aug 2020, 3:11 pm
ಬೆಂಗಳೂರು : ಪ್ರವಾಹದ ಹೆಸರಲ್ಲಿ ಕಳೆದ ವರ್ಷ ನೀಡಿದ್ದ ಭರವಸೆಗಳು ಏನಾದವು ಎಂದು ರಾಜ್ಯ ಸರ್ಕಾರವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಪ್ರಶ್ನಿಸಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್‌ ಬೆನ್ನಲ್ಲೇ ಈಶ್ವರ್‌ ಖಂಡ್ರೆ ಕೂಡಾ ಟ್ವೀಟ್ ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Vijaya Karnataka Web ishwar kandre


ಹೌದು.ಪ್ರವಾಹದ ಹೆಸರಲ್ಲಿ ಕಳೆದ ವರ್ಷ ರಾಜ್ಯ ಬಿಜೆಪಿ ಸರ್ಕಾರ ನೀಡಿದ್ದ ಭರವಸೆಗಳು ಏನಾದವು? ಅದೆಷ್ಟು ಜನರಿಗೆ ಮನೆ ಕಟ್ಟಿಸಿಕೊಟ್ಟಿದ್ದೀರಾ? ರೈತನ ಬೆಳೆಗೆ ಎಷ್ಟು ಪರಿಹಾರ ಕೊಟ್ಟಿದ್ದೀರಾ? ಕೊಚ್ಚಿ ಹೋದ ಅದೆಷ್ಟು ರಸ್ತೆ ಸೇತುವೆಗಳನ್ನ ಪುನರ್ ನಿರ್ಮಾಣ ಮಾಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ಮಹಾಮಳೆ: ಕೊಡಗು ಜಿಲ್ಲೆಗೆ ಭೇಟಿ ನೀಡಿ ನೆರೆ ನಿರಾಶ್ರಿತರ ಸಮಸ್ಯೆ ಆಲಿಸಿದ ಡಿಕೆಶಿ


ಸೋರುತ್ತಿದ್ದ ಅದೆಷ್ಟು ಶಾಲೆಗಳ ಕೋಣೆಗಳಿಗೆ ಛಾವಣಿ ಹಾಕಿದ್ದೀರಾ? ಹೊಸ ಪರಿಹಾರ ಘೋಷಿಸುವ ಮುನ್ನ ಹಳೇ ಲೆಕ್ಕ ಕೊಡಿ. ಬರೀ ಬಾಯಿ ಮಾತಿನ ಸಾಂತ್ವನ ಬೇಡ. ಈ ಬಾರಿಯಾದ್ರೂ ತತಕ್ಷಣ ಪರಿಹಾರ ನೀಡಿ. ನೆರ ಪೀಡಿತರ ಬದುಕು ಕಟ್ಟಿಕೊಡಿ. ಉತ್ತರಿಸಿ ಎಂದು ಆಗ್ರಹಿಸಿದ್ದಾರೆ.


ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಪ್ರವಾಹ ಸೃಷ್ಟಿಯಾಗಿದೆ. ಮಡಿಕೇರಿಯಲ್ಲಿ ಗುಡ್ಡ ಕುಸಿತದಿಂದ ಭಾರೀ ಪ್ರಮಾಣದ ಹಾನಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿಸುತ್ತಿದ್ದಾರೆ. ಪ್ರವಾಹ ನಿರ್ವಹಣೆಯಲ್ಲಿ ಸರ್ಕಾರ ಎಡವುತ್ತಿದೆ ಎಂದು ಆರೋಪಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ