ಆ್ಯಪ್ನಗರ

ಸಚಿವ ಸಿ ಟಿ ರವಿ ಮನೆಹಾಳು ಹೇಳಿಕೆಗೆ ಸಾಹಿತಿಗಳ ಆಕ್ರೋಶ; ಕ್ಷಮೆಗೆ ಆಗ್ರಹ

ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಜೆ. ಲೋಕೇಶ್‌, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, ಪತ್ರಕರ್ತೆ, ಲೇಖಕಿ ವಿಜಯಮ್ಮ, ರಂಗ ನಿರ್ದೇಶಕ ರಮೇಶ್‌ ಮೈಸೂರು, ಬರಹಗಾರ ಶಶಿಧರ್‌ ಭಾರಿಘಾಟ್‌ ಹೀಗೆ ಹಲವರು ಸಚಿವರ ಕ್ಷಮೆ ಯಾಚನೆಗೆ ಒತ್ತಾಯಿಸಿದ್ದಾರೆ.

Vijaya Karnataka 20 Oct 2019, 10:07 am
ಬೆಂಗಳೂರು: ಅಕಾಡೆಮಿಗಳಿಗೆ ಅಧ್ಯಕ್ಷರು, ಸದಸ್ಯರ ಆಯ್ಕೆಯಲ್ಲಿ'ಈ ಬಾರಿ ಮನೆಹಾಳು ಜನರಿಗೆ ಅವಕಾಶ ನೀಡಿಲ್ಲ. ಅವರನ್ನು ದೂರ ಇಟ್ಟಿದ್ದೇವೆ' ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಅವರು ನೀಡಿದ ಹೇಳಿಕೆಗೆ ರಾಜ್ಯಾದ್ಯಂತ ಕಲಾವಿದರು, ಸಾಹಿತಿಗಳು, ಬರಹಗಾರರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಹಾಗಿದ್ದರೆ ಈವರೆಗೆ ಅಕಾಡೆಮಿ ಮತ್ತು ಪ್ರಾಕಾರಿಗಳಿಗೆ ಆಯ್ಕೆಯಾಗಿ ಸೇವೆ ಸಲ್ಲಿಸಿದ ಮಹನೀಯರು (ಕಾರಂತರು, ಕಂಬಾರರು, ಕಾರ್ನಾಡ್‌ ಮತ್ತಿತರರು) ಮನೆ ಹಾಳರೇ? ಇದು ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಕ್ಕೆ ಮಾಡಿದ ಅಪಮಾನ. ಸಚಿವರು ಕೂಡಲೇ ಕ್ಷಮೆಯಾಚಿಸದಿದ್ದರೆ ಹೋರಾಟದ ರೂಪುರೇಷೆ ಸಿದ್ಧಪಡಿಸೋಣ ಎಂದು ರಂಗಕರ್ಮಿಗಳು, ಮಾಜಿ ಅಧ್ಯಕ್ಷರು, ಸದಸ್ಯರು, ಸಾಹಿತಿಗಳು ಪಣ ತೊಟ್ಟಿದ್ದಾರೆ.
Vijaya Karnataka Web C T Ravi


ಈ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದೆ. ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಜೆ. ಲೋಕೇಶ್‌, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, ಪತ್ರಕರ್ತೆ, ಲೇಖಕಿ ವಿಜಯಮ್ಮ, ರಂಗ ನಿರ್ದೇಶಕ ರಮೇಶ್‌ ಮೈಸೂರು, ಬರಹಗಾರ ಶಶಿಧರ್‌ ಭಾರಿಘಾಟ್‌ ಹೀಗೆ ಹಲವರು ಸಚಿವರ ಕ್ಷಮೆ ಯಾಚನೆಗೆ ಒತ್ತಾಯಿಸಿದ್ದಾರೆ. ಪರಸ್ಪರ ವಾಟ್ಸ್‌ಆ್ಯಪ್‌ ಗ್ರೂಪ್‌, ಫೇಸ್‌ಬುಕ್‌, ಟ್ವಿಟರ್‌ಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಮನೆಹಾಳು ಕೆಲಸಗಳು ಸಿಟಿ ರವಿ ಅವರ ಹುಟ್ಟುಗುಣ. ಸಾಹಿತಿ ಕಲಾವಿದರಿಗೆ ಅದೆಲ್ಲಿಂದ ಬರಬೇಕು' ಎಂದು ಕಲಾವಿದ ಪಿಚ್ಚಳ್ಳಿ ಶ್ರೀನಿವಾಸ್‌ ಆರೋಪಿಸಿದರೆ, 'ವಿವೇಚನೆಯಿಂದ ಮಾತನಾಡಿ ಎಂಬ ಎಚ್ಚರಿಕೆ ಕೊಡುವ ಹಾಗೂ ಮೊದಲು ಎಲ್ಲಾಜಿಲ್ಲೆಗಳಿಂದ ಮುಖ್ಯಮಂತ್ರಿಯವರಿಗೆ ಪತ್ರಗಳು ಹೋಗಲಿ. ಬೆಂಗಳೂರಿನಲ್ಲೂಸಹಿ ಸಂಗ್ರಹಿಸಬೇಕು. ಸಭ್ಯತೆ ಪ್ರದರ್ಶಿಸಿ, ಕ್ಷಮಾಪಣೆ ಕೇಳಿ ಎಂದು ಒತ್ತಾಯಿಸೋಣ. ಆನಂತರ ಬಹಿರಂಗ ಪ್ರತಿಭಟನೆ ಮಾಡೋಣ' ಎಂದು ಲೇಖಕಿ ವಿಜಯಮ್ಮ ನುಡಿದಿದ್ದಾರೆ.

'ಕನ್ನಡ ಅಭಿವೃದ್ಝಿ ಪ್ರಾಧಿಕಾರಕ್ಕೆ ಇದೀಗ ಟಿ.ಎಸ್‌. ನಾಗಾಭರಣ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರೊಬ್ಬ ಕಲಾವಿದರಾಗಿದ್ದರೂ ಸಚಿವರು ಸಾಮೂಹಿಕವಾಗಿ ಕಲಾವಿದ, ಸಾಹಿತಿಗಳ ಬಗ್ಗೆ ಅವಮಾನಕರ ರೀತಿಯಲ್ಲಿಮಾತನಾಡಿದರೂ ನಾಗಾಭರಣ ಅವರು ಮೌನವಾಗಿದ್ದಾರೆ. ಸಚಿವರು ನಿಂದಿಸಿರುವ ಮನೆಹಾಳರ ಪಟ್ಟಿಯಲ್ಲಿನಾಗಾಭರಣ ಅವರು ಪೂಜಿಸುವ ಬಿ.ವಿ. ಕಾರಂತ, ಕಾರ್ನಾಡ್‌ ಸಹ ಇದ್ದಾರೆಯೇ ಎಂಬುದನ್ನು ಸಚಿವರಿಂದ ಸ್ಪಷ್ಟನೆ ಕೊಡಿಸಲಿ' ಎಂದು ರಂಗ ಕಲಾವಿದ ಮೋಹನ್‌ ರಾಮ್‌ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ