ಆ್ಯಪ್ನಗರ

ಐಎಂಎನಂತೆ ಯಲ್ಲೋ ವಂಚನೆ: ಕ್ಯಾಬ್‌ ಖರೀದಿಯ ವ್ಯವಹಾರ ತನಿಖೆ ಸಿಐಡಿಗೆ

ಐಎಂಎ ಪ್ರಕರಣದ ನಂತರ ನೆಲಮಂಗಲದಲ್ಲಿಯೆಲ್ಲೋ ಎಕ್ಸ್‌ಪ್ರೆಸ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ ಜನರಿಗೆ ಕ್ಯಾಬ್‌ ಖರೀದಿ ಹೆಸರಲ್ಲಿವಂಚಿಸುತ್ತಿರುವ ...

Vijaya Karnataka 26 Sep 2019, 5:00 am
ಬೆಂಗಳೂರು: ಐಎಂಎ ಪ್ರಕರಣದ ನಂತರ ನೆಲಮಂಗಲದಲ್ಲಿಯೆಲ್ಲೋ ಎಕ್ಸ್‌ಪ್ರೆಸ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ ಜನರಿಗೆ ಕ್ಯಾಬ್‌ ಖರೀದಿ ಹೆಸರಲ್ಲಿವಂಚಿಸುತ್ತಿರುವ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ,'' ಎಂದು ಸಚಿವ ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.
Vijaya Karnataka Web ashok r


''ನೆಲಮಂಗಲದ ಯೆಲ್ಲೋ ಎಕ್ಸ್‌ಪ್ರೆಸ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ ಜತೆಗೆ ಯೆಲ್ಲೋ ಫೈನಾನ್ಸ್‌, ಲಾಗಿನ್‌ ಇಂಡಿಯಾ ಫೈನಾನ್ಸ್‌ ಆ್ಯಂಡ್‌ ಅರ್ನಿಂಗ್‌, ಯೆಲ್ಲೋ ಎಕ್ಸ್‌ಪ್ರೆಸ್‌ ಲಾಜಿಸ್ಟಿಕ್‌, ಲಕ್ಷಿತ್ರ್ಮ ಕಾರ್ಜೋಲ್‌ ಪ್ರೈ. ಹೆಸರಿನಲ್ಲಿಆರ್ಥಿಕ ವ್ಯವಹಾರ ನಡೆಸುತ್ತಿರುವುದು ಕಂಡು ಬಂದಿದೆ. ಪ್ರತಿ ಹೂಡಿಕೆದಾರರ ಹೆಸರಲ್ಲಿ ಕ್ಯಾಬ್‌ ಖರೀದಿಸುವುದಕ್ಕೆ 2 ರಿಂದ 2.5 ಲಕ್ಷ ರೂ. ಸಂಗ್ರಹಿಸುತ್ತಿತ್ತು,''ಎಂದು ವಿವರಿಸಿದರು.

''ಖರೀದಿಸಿದ ಈ ಕ್ಯಾಬ್‌ಗಳನ್ನು ಉಬರ್‌ಗೆ ಬಾಡಿಗೆಗೆ ನೀಡಿ ಮಾಸಿಕ 10 ರಿಂದ 25 ಸಾವಿರ ರೂ. ಕೊಡಿಸುವ ಭರವಸೆ ನೀಡಲಾಗಿತ್ತು. ಆದರೆ ಕ್ಯಾಬ್‌ನ್ನು ಹೂಡಿಕೆದಾರರ ಹೆಸರಿಗೆ ಬದಲಾಗಿ ಸಂಸ್ಥೆಯ ಮಾಲೀಕರ ಹೆಸರಿನಲ್ಲಿನೋಂದಾಯಿಸಲಾಗಿದೆ. ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಸೇರಿದಂತೆ ಸುಮಾರು 2000 ಕ್ಕೂ ಹೆಚ್ಚು ಜನರಿಂದ ಸುಮಾರು 40 ರಿಂದ 60 ಕೋಟಿ ಸಂಗ್ರಹಿಸಲಾಗಿದೆ. 240 ಕಾರುಗಳನ್ನು ಖರೀದಿಸಿದ್ದು, 63 ಕ್ಯಾಬ್‌ಗಳನ್ನು ಉಬರ್‌ಗೆ ಬಾಡಿಗೆಗೆ ನೀಡಲಾಗಿದೆ,''ಎಂದು ತಿಳಿಸಿದರು.

''ಯೆಲ್ಲೋ ಎಕ್ಸ್‌ಪ್ರೆಸ್‌ ಇಂಡಿಯಾಪ್ರೈವೆಟ್‌ ಲಿಮಿಟೆಡ್‌ 2018ರ ಅಕ್ಟೋಬರ್‌ 20 ರಂದು ಅಸ್ತಿತ್ವಕ್ಕೆ ಬಂದಿದೆ. ಯಶವಂತಪುರ ವಿಳಾಸದಲ್ಲಿಸ್ಥಾಪನೆಯಾಗಿದೆ. ಇದರಲ್ಲಿರೆಮಿತ್‌ ಮಲ್ಹೋತ್ರಾ, ಜೋಜು ಥಾಮಸ್‌, ನಾಡಿ ನಾಯರ್‌, ಲಕ್ಷಿತ್ರ್ಮ ಸುರೇಖಾ, ಆಯಿಷಾ ಸಿದ್ಧಿಕಿ, ಮನು ಕುಟ್ಟಾ, ರಶ್ಮಿ ಮಾಚಯ್ಯ ಅವರ ಹೆಸರುಗಳು ಕೇಳಿ ಬಂದಿದ್ದು, ಕೇರಳದಲ್ಲಿ ಮುಖ್ಯ ಕಚೇರಿ ತೆರೆದಿರುವುದು ಗೊತ್ತಾಗಿದೆ,'' ಎಂದರು.

ರವಿ ಚನ್ನಣ್ಣನವರ್‌ರಿಂದ ಒಳ್ಳೆ ಕೆಲಸ

ಭರವಸೆ ನೀಡಿದಂತೆ ಮಾಸಿಕ 10 ರಿಂದ 25 ಸಾವಿರ ರೂ. ಬಾಡಿಗೆ ಹಣ ನೀಡಲು ಎರಡರಿಂದ ಮೂರು ಕೋಟಿ ರೂ. ಬೇಕಾಗುತ್ತದೆ. ಆದರೆ 10 ರಿಂದ 15 ಲಕ್ಷ ರೂ. ನಷ್ಟು ಮಾತ್ರ ಹಣ ಬರುತ್ತಿದೆ. ಮುಗ್ಧ ಜನರನ್ನು ವಂಚಿಸುತ್ತಿದ್ದ ಬಗ್ಗೆ ದೂರುಗಳು ಬಂದಾಗ ತನಿಖೆ ನಡೆಸಲಾಗಿತ್ತು. ಆಗ ಕಂಪನಿ ಐಎಂಎ ರೀತಿಯಲ್ಲಿವಂಚಿಸುತ್ತಿರುವುದನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಎಸ್‌ಪಿ ರವಿ ಚನ್ನಣ್ಣನವರ್‌ ಪತ್ತೆ ಹಚ್ಚಿ ಒಳ್ಳೆಯ ಕೆಲಸ ಮಾಡಿದ್ದಾರೆ,''ಎಂದು ಹೇಳಿದರು.

ಐಎಂಎ ಸಂಸ್ಥೆಗೆ ಸೇರಿ 21 ಕೋಟಿ ಮೌಲ್ಯದ ಆಸ್ತಿ ವಶ

ಐಎಂಎ ಸಂಸ್ಥೆಯ ಚರ ಮತ್ತು ಸ್ಥಿರ ಆಸ್ತಿ ಮುಟ್ಟುಗೋಲಿಗೆ ಆದೇಶಿಸಲಾಗಿದ್ದು, ಬೆಂಗಳೂರು ನಗರದಲ್ಲಿಸುಮಾರು 21 ಕೋಟಿ ರೂ. ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

''ಐಎಂಎ ಸಂಸ್ಥೆಯ 17ಆಸ್ತಿಗಳನ್ನು ವಶಕ್ಕೆ ಪಡೆಯಲು ಆದೇಶಿಸಲಾಗಿದೆ. 81 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. 50 ಸಾವಿರಕ್ಕೂ ಹೆಚ್ಚು ನಕಲಿ ಚಿನ್ನದ ಗಟ್ಟಿಗಳನ್ನು ತೋರಿಸಿ ವಂಚಿಸಲಾಗಿತ್ತು. ಇದರ ಒಟ್ಟು ತೂಕ 33 ಕೆ.ಜಿಯಷ್ಟಿತ್ತು,'' ಎಂದು ಸುದ್ದಿಗೋಷ್ಠಿಯಲ್ಲಿಬುಧವಾರ ತಿಳಿಸಿದ್ದಾರೆ.

''ರಾಜ್ಯಾದ್ಯಂತ ವಿಸ್ತರಿಸಿರುವ ಆರ್ಥಿಕವಾಗಿ ಮೋಸ ಮಾಡುವ ಜಾಲವನ್ನು ಮಟ್ಟ ಹಾಕಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆರ್ಥಿಕ ಚಟುವಟಿಕೆ ನಡೆಸುವ ಮಾಫಿಯಾ ತಂಡದ ಬಗ್ಗೆ ವರದಿ ನೀಡುವಂತೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ