ಆ್ಯಪ್ನಗರ

ಪಂಚಮಸಾಲಿ ಮೀಸಲಾತಿ ಬೇಡಿಕೆ: ಸದನದ ಬಾವಿಗಿಳಿದು ಧರಣಿಗೆ ಮುಂದಾದ ಯತ್ನಾಳ್, ಲಕ್ಷ್ಮೀ ಹೆಬ್ಬಾಳ್ಕರ್

ರಾಜ್ಯದಲ್ಲಿ ಮೀಸಲಾತಿ ವಿಚಾರವಾಗಿ ಗಂಭೀರ ಚರ್ಚೆ ಆಗುತ್ತಿದೆ. ಅನೇಕ ಸಮುದಾಯದಗಳು ಬೇಡಿಕೆ ಇಟ್ಟಿವೆ. ಪರಿಶಿಷ್ಟ ಜಾತಿ ಪಂಗಡ ಮೀಸಲಾತಿ ಹೆಚ್ಚಳ ಹಾಗೂ ವಾಲ್ಮೀಕಿ ಸಮುದಾಯವೂ ಮೀಸಲಾತಿಬೇಡಿಕೆ ಮುಂದಿಟ್ಟು ಹೋರಾಟ ನಡೆಸುತ್ತಿವೆ. ಇದರ ಜೊತೆ ಎಸ್ಟಿ ಜನಾಂಗದಲ್ಲಿ ಹಾಲುಮತ ಕುರುಬ, ಗೊಲ್ಲ ಸಮಾಜ ಸೇರ್ಪಡೆ ಹಾಗೂ ಎಸ್ಸಿಯಲ್ಲಿ ಮಡಿವಾಳ ಹಾಗೂ ಹಡಪ ಸಮಾಜ ಸೇರ್ಪಡೆ ವಿಚಾರವಾಗಿಯೂ ಬೇಡಿಕೆ ಇದೆ ಎಂದು ಬಿಜೆಪಿ‌ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ರು.

Authored byಇರ್ಷಾದ್ ಉಪ್ಪಿನಂಗಡಿ | Vijaya Karnataka Web 20 Sep 2022, 1:57 pm
ಬೆಂಗಳೂರು: ಪಂಚಮಸಾಲಿ ಮೀಸಲಾತಿ ಸೇರಿದಂತೆ ಇನ್ನಿತರ ಮೀಸಲಾತಿ ಹೋರಾಟಗಳ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಬಸವರಾಜ ಬೊಮ್ಮಾಯಿ ಉತ್ತರಕ್ಕೆ ತೃಪ್ತಿಯಾಗದೆ ಸದನದ ಬಾವಿಗಿಳಿದು ಧರಣಿಗೆ ಮುಂದಾದ ಪ್ರಸಂಗ ನಡೆಯಿತು.
Vijaya Karnataka Web ವಿಧಾನಸಭೆ ಅಧಿವೇಶನ (1).
ಸಂಗ್ರಹ ಚಿತ್ರ


ಮಂಗಳವಾರ ವಿಧಾನಸಭೆಯಲ್ಲಿ ಈ ವಿಚಾರವನ್ನು ಶೂನ್ಯವೇಳೆಯಲ್ಲಿ ವಿಚಾರ ಪ್ರಸ್ತಾಪ ಮಾಡಿದ ಬಿಜೆಪಿ‌ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯದಲ್ಲಿ ಮೀಸಲಾತಿ ವಿಚಾರವಾಗಿ ಗಂಭೀರ ಚರ್ಚೆ ಆಗುತ್ತಿದೆ. ಅನೇಕ ಸಮುದಾಯದಗಳು ಬೇಡಿಕೆ ಇಟ್ಟಿವೆ. ಪರಿಶಿಷ್ಟ ಜಾತಿ ಪಂಗಡ ಮೀಸಲಾತಿ ಹೆಚ್ಚಳ ಹಾಗೂ ವಾಲ್ಮೀಕಿ ಸಮುದಾಯವೂ ಮೀಸಲಾತಿ ಬೇಡಿಕೆ ಮುಂದಿಟ್ಟು ಹೋರಾಟ ನಡೆಸುತ್ತಿವೆ. ಇದರ ಜೊತೆ ಎಸ್ಟಿ ಜನಾಂಗದಲ್ಲಿ ಹಾಲುಮತ ಕುರುಬ, ಗೊಲ್ಲ ಸಮಾಜ ಸೇರ್ಪಡೆ ಹಾಗೂ ಎಸ್ಸಿಯಲ್ಲಿ ಮಡಿವಾಳ ಹಾಗೂ ಹಡಪ ಸಮಾಜ ಸೇರ್ಪಡೆ ವಿಚಾರವಾಗಿಯೂ ಬೇಡಿಕೆ ಇದೆ.

Karnataka Legislative Assembly | ಕಾಂಗ್ರೆಸ್, ಬಿಜೆಪಿ ಸದಸ್ಯರಿಂದ ಬಿತ್ತಿಪತ್ರ ಸಮರ, ವಿಧಾನಸಭೆಯಲ್ಲಿ ಗದ್ದಲ ಕೋಲಾಹಲ
ಕುಲ ಶಾಸ್ತ್ರೀಯ ಅಧ್ಯಯನ ಈ ಬಗ್ಗೆ ನಡೆದಿದೆ. ಕಳೆದ ಅಧಿವೇಶನದಲ್ಲಿ, ವೀರಶೈವ ಲಿಂಗಾಯತ, ಪಂಚಮಸಾಲಿ, ಗೌಡ ಲಿಂಗಾಯತ, ಮಲಯ ಗೌಡ, ದೀಕ್ಷ ಲಿಂಗಾಯತ ಸಮುದಾಯಗಳನ್ನು ಹಿಂದುಳಿಗ ವರ್ಗಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಎಲ್ಲ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಎಸ್ಟಿ,‌ ಎಸ್ಸಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಬಗ್ಗೆ ಭರವಸೆ ನೀಡಿದ್ದರು. ಆದರೆ, ಸರ್ಕಾರ ಈವರೆಗೆ ಹಿಂದುಳಿದ ಆಯೋಗದಿಂದ ವರದಿ ತರಿಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಎಂ ಕ್ಷೇತ್ರದಲ್ಲಿ ದೊಡ್ದ ಹೋರಾಟ ‌ನಡೆಯುತ್ತಿದೆ. ಹಾಲುಮತ ಗೊಲ್ಲ ಸಮುದಾಯದಿಂದಲೂ ಹೋರಾಟ ‌ನಡೆಯುತ್ತಿದೆ. ವಾಲ್ಮೀಕಿ ಸಮುದಾಯವೂ ಹೋರಾಟ ನಡೆಸುತ್ತಿದೆ. ಈ ಬಗ್ಗೆ ಸರ್ಕಾರದ ನಿಲುವು ಏನು? ಮೀಸಲಾತಿ ಕೊಡುವ ಪ್ರಾಮಾಣಿಕ ಉದ್ದೇಶ ಇದ್ಯಾ?ಈ ಬಗ್ಗೆ ಸಿಎಂ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಉತ್ತರ ನೀಡಿ, ಸದನದಲ್ಲಿಮೀಸಲಾತಿ ಮೂರನೇ ಬಾರಿ ಚರ್ಚೆಗೆ ಬಂದಿದೆ. ಯಾವುದೇ ವರ್ಗಕ್ಕೆ ಮೀಸಲಾತಿ ಹೆಚ್ಚಿಸಬೇಕು ಅಂದ್ರೆ ಅದರದ್ದೇ ಆದ ಕಾನೂನಿದೆ. ಸುಪ್ರೀಂ ಕೋರ್ಟ್ ಕೂಡ ಮಧ್ಯಪ್ರವೇಶ ಮಾಡಿ ತೀರ್ಪು ನೀಡಿದೆ. ಯಾವುದೇ ಮೀಸಲಾತಿ 50% ಗಿಂತ ಹೆಚ್ಚಾಗಬಾರದು ಅಂತ ಇಂದಿರಾ ಸಹಾನಿ ಕೇಸ್‌ನಲ್ಲಿ ತಿಳಿಸಿದೆ. ಕರ್ನಾಟಕದಲ್ಲಿ ಈಗಾಗಲೇ 50% ಮೀಸಲಾತಿ ಆಗಿದೆ. ಬ್ಯಾಕ್ ವರ್ಡ್ ಕ್ಲಾಸ್‌ಗೆ 33% ಕೊಟ್ಟಿದ್ದೇವೆ. ಎಸ್ಸಿ, ಎಸ್ಟಿ 7.5% ಹೆಚ್ಚು ಮಾಡಬೇಕು ಅಂತಿದ್ದಾರೆ. ಬೇರೆ-ಬೇರೆ ಸಮುದಾಯಗಳು ಬೇರೆ ಮೀಸಲಾತಿ ಹೋಗಲು ಕೇಳ್ತಿದ್ದಾರೆ ಎಂದು ವಿವರಿಸಿದರು.

ಶಾಸಕರಿಗೆ ಚುನಾವಣಾ ಜ್ವರ ಶುರು; ಯಾರಿಗೆ ಹೇಳೋಣ ನಮ್ ಪ್ರಾಬ್ಲಂ ಅಂತಿದ್ದಾರೆ ಜನಪ್ರತಿನಿಧಿಗಳು!
ಹಿಂದುಳಿದ ವರ್ಗದಲ್ಲಿ ಇಲ್ಲದವರು, ಈ ವರ್ಗಕ್ಕೆ ಬರಲು ಪ್ರಯತ್ನಿಸ್ತಿದ್ದಾರೆ. ಯಾರೆಲ್ಲಾ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರೋದಕ್ಕೆ ಕೊಡಲು ಅವಕಾಶ ಇದೆ. ಇದೆಲ್ಲಾ ಕಾಲ ಕಾಲಕ್ಕೆ ತೀರ್ಮಾನ ಮಾಡಲಾಗಿದೆ. ಹಿಂದೆ ಕಳಿಸಿದ ವರದಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಮೊದಲು ಕೆಲಸ, ಶಿಕ್ಷಣ ಎಲ್ಲಾ ಸಮುದಾಯಕ್ಕೆ ಬೇಕು ಅಂತ ಇಚ್ಚೆ ಇತ್ತು. ಎಲ್ಲಾ ಸಮುದಾಯ ಮುಂದೆ ಬರಬೇಕು ಅನ್ನೋದು ನಮ್ಮ ಇಚ್ಚೆ ಎಂದರು.

ಪಂಚಮಸಾಲಿ 3ಬಿ ಯಿಂದ2ಎಗೆ ಬರಬೇಕು ಅಂತ ಕೇಳಿದ್ದಾರೆ. ಎಸ್ಟಿ ಸಮುದಾಯ ಬಂದಾಗ ಚರ್ಚೆ ಮಾಡಲು ಹೇಳಿದ್ದೇನೆ. ಈಗಾಗಲೇ ಎರಡು ಸಮಿತಿ ರಚನೆಯಾಗಿದೆ. ಎಲ್ಲಾ ಸಮುದಾಯಗಳಲ್ಲಿ ಹಕ್ಕುಗಳನ್ನು ಕೊಡುವಾಗ, ಇತರೆ ಸಮುದಾಯಕ್ಕೆ ಅನ್ಯಾಯ ಆಗಬಾರದು. ಇದೊಂದು ಸೂಕ್ಷ್ಮವಾಗಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಎಸ್ಸಿ, ಎಸ್ಟಿ ಅಂತ ಬಂದಾಗ ನಾನು ಉತ್ತರ ಕೊಡಲು ಸಿದ್ದ. ಆದ್ರೆ ಪಂಚಮಸಾಲಿ ವಿಚಾರ ಬಂದಾಗ ಕುಲಶಾಸ್ತ್ರಿಯ ಅಧ್ಯಯನ ಆಗಬೇಕು. ಎಲ್ಲಾ ವಿಚಾರ ಚರ್ಚೆ ಮಾಡಬೇಕು.

ಇದನ್ನು ಪಾರದರ್ಶಕವಾಗಿ ನೋಡಬೇಕಿದೆ. ನಮ್ಮ ಸರ್ಕಾರ ಇದೆ, ಹೆಚ್ಚಿನ ಜವಾಬ್ದಾರಿ ಇದೆ. ಹಿಂದಿನ ಸರ್ಕಾರ ಕೂಡ ಕೆಲ ಕ್ರಮ ತೆಗೆದುಕೊಂಡಿದೆ. ಈಗ ನಮ್ಮ ಕೆಲಸವೂ ಮಾಡಬೇಕಿದೆ ಎಂದರು.

ಇನ್ನೊಬ್ಬರಿಗೆ ಅನ್ಯಾಯ ಆಗದಂತೆ ನಿಭಾಯಿಸ್ತೇವೆ. ಈಗ ಹೋರಾಟ ಮಾಡ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಲು ಅವಕಾಶ ಇದೆ. ಅದಕ್ಕೆ ಆಕ್ಷೇಪ ಇಲ್ಲ. ವೈಜ್ಞಾನಿಕವಾಗಿ ಮಾಡಿದಾಗ, ಮತ್ತೆ ಸಮಸ್ಯೆ ಆಗೋದು ಬೇಡ. ಹಿಂದುಳಿದ ವರ್ಗಗಳ ಆಯೋಗ ವರದಿ ನೀಡಿದ ಬಳಿಕಕ್ರಮ ಕೈಗೊಳ್ಳೋದಾಗಿ ಸಿಎಂ ಭರವಸೆ ನೀಡಿದರು.

ಇದಕ್ಕೆ ತೃಪ್ತಿಯಾಗದ ಯತ್ನಾಳ್ ಸದನದ ಬಾವಿಗಿಳಿದು ಧರಣಿಗೆ ಮುಂದಾದರು.‌ ಇದಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಾಥ್ ನೀಡಿದರು. ಬಳಿಕ ಸ್ಪೀಕರ್ ಕಾಗೇರಿ ಮನವಿ ಮೇರೆಗೆ ವಾಪಸ್ ತೆರಳಿದರು.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ