ಆ್ಯಪ್ನಗರ

ಧರಣಿ ಸ್ಥಳದಲ್ಲೇ ಯೋಗಾಸನ, ಪ್ರಾಣಾಯಾಮ ಮಾಡಿದ ಬಿಜೆಪಿ ನಾಯಕರು

ಜಿಂದಾಲ್‌ಗೆ ಭೂಮಿ ಹಂಚಿಕೆ ಮಾಡಿರುವುದನ್ನು ವಿರೋಧಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ ನಾಯಕರು ಶನಿವಾರ ಮುಂಜಾನೆ ಎದ್ದು ರೇಸ್‌ಕೋರ್ಸ್‌ ರಸ್ತೆಯಲ್ಲೇ ವಾಕಿಂಗ್‌ ಮಾಡಿದರು. ನಂತರ ಧರಣಿ ನಡೆಸುತ್ತಿರುವ ಪೆಂಡಾಲ್‌ನಲ್ಲೇ ಯೋಗಾಸನ, ಸೂರ್ಯ ನಮಸ್ಕಾರ ಹಾಗೂ ಪ್ರಾಣಾಯಾಮ ಮಾಡಿ ಗಮನಸೆಳೆದರು.

Vijaya Karnataka 16 Jun 2019, 5:00 am
ಬೆಂಗಳೂರು : ಜಿಂದಾಲ್‌ಗೆ ಭೂಮಿ ಹಂಚಿಕೆ ಮಾಡಿರುವುದನ್ನು ವಿರೋಧಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ ನಾಯಕರು ಶನಿವಾರ ಮುಂಜಾನೆ ಎದ್ದು ರೇಸ್‌ಕೋರ್ಸ್‌ ರಸ್ತೆಯಲ್ಲೇ ವಾಕಿಂಗ್‌ ಮಾಡಿದರು. ನಂತರ ಧರಣಿ ನಡೆಸುತ್ತಿರುವ ಪೆಂಡಾಲ್‌ನಲ್ಲೇ ಯೋಗಾಸನ, ಸೂರ್ಯ ನಮಸ್ಕಾರ ಹಾಗೂ ಪ್ರಾಣಾಯಾಮ ಮಾಡಿ ಗಮನಸೆಳೆದರು.
Vijaya Karnataka Web 1506-2-2-000 (3)


ಧರಣಿ ಸ್ಥಳದಲ್ಲಿ ಮಲಗಿದ್ದ ಯಡಿಯೂರಪ್ಪ ಅವರು ಮುಂಜಾನೆ 5ಕ್ಕೆ ಎದ್ದು ಮನೆಗೆ ಹೋಗಿ ಸ್ನಾನ ಪೂಜೆ ಮುಗಿಸಿ ಮರಳಿ ಬಂದು ರೇಸ್‌ಕೋರ್ಸ್‌ ರಸ್ತೆಯಲ್ಲಿ ವಾಕಿಂಗ್‌ ಮಾಡಿದರು. ಮಾಜಿ ಡಿಸಿಎಂ ಆರ್‌.ಅಶೋಕ್‌, ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಪ್ರಭು ಚೌಹಾಣ್‌ ಮೊದಲಾದವರು ರೇಸ್‌ಕೋಸ್‌ ರಸ್ತೆ ಹಾಗೂ ಶೇಷಾದ್ರಿರಸ್ತೆಯಲ್ಲಿ ವಾಕಿಂಗ್‌ ಮಾಡಿದರು. ಲಘು ವ್ಯಾಯಾಮ ಮಾಡಿದರು. ಬಳಿಕ ರೇಣುಕಾಚಾರ್ಯ, ಪ್ರಭುಚೌಹಾಣ್‌ ಹಾಗೂ ಇತರ ಕಾರ್ಯಕರ್ತರು ಪೆಂಡಾಲ್‌ನಲ್ಲಿ ಕುಳಿತು ಯೋಗಾಸನ ಹಾಗೂ ಪ್ರಾಣಾಯಾಮ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ