ಆ್ಯಪ್ನಗರ

ಗೆಲುವಿನ ಬಗ್ಗೆ ಯೋಗೇಶ್ವರ್‌ ಶಂಕೆ

'ಡಿಕೆಶಿ ಸಹೋದರರು ಕಾಂಗ್ರೆಸ್‌ ಅಭ್ಯರ್ಥಿಯ ಪರವಾಗಿ ಹಣದ ಹೊಳೆಯನ್ನೇ ಹರಿಸಿದರು...

Vijaya Karnataka 15 May 2018, 4:00 am
ರಾಮನಗರ: 'ಡಿಕೆಶಿ ಸಹೋದರರು ಕಾಂಗ್ರೆಸ್‌ ಅಭ್ಯರ್ಥಿಯ ಪರವಾಗಿ ಹಣದ ಹೊಳೆಯನ್ನೇ ಹರಿಸಿದರು. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ನಾನು ಗೆಲ್ಲುವ ಬಗ್ಗೆ ಅನುಮಾನವಿದೆ,' ಎಂದು ಚನ್ನಪಟ್ಟಣ ಬಿಜೆಪಿ ಆಭ್ಯರ್ಥಿ ಸಿಪಿ ಯೋಗೇಶ್ವರ್‌ ಹೇಳಿದರು.
Vijaya Karnataka Web yogeshwar self doubt
ಗೆಲುವಿನ ಬಗ್ಗೆ ಯೋಗೇಶ್ವರ್‌ ಶಂಕೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,'ಇದೊಂದು ವಿಚಿತ್ರ ಸನ್ನಿವೇಶದಲ್ಲಿ ನಡೆದ ಚುನಾವಣೆಯಾಗಿದೆ. ಎದುರಾಳಿ ಅಭ್ಯರ್ಥಿ ಒಬ್ಬರಾದರೆ ಅವರ ಹಿಂದೆ ನಿಂತು ಕೆಲಸ ಮಾಡಿದವರು ಬಹಳಷ್ಟು ಜನ. ಬಹುಶಃ ನನ್ನನ್ನು ಸೋಲಿಸಲೇಬೇಕೆಂದು ಸಾಕಷ್ಟು ರಣತಂತ್ರಗಳನ್ನು ಹೆಣೆದ ಚುನಾವಣೆ ಇದು. ಕುಮಾರಸ್ವಾಮಿಯವರು ನೇರ ಸ್ಪರ್ಧಿಯಾಗಿದ್ದರು. ರೇವಣ್ಣನವರು ನೆಪಮಾತ್ರದ ಅಭ್ಯರ್ಥಿಯಾಗಿದ್ದರು. ಆದರೆ ಅದರ ಹಿಂದಿನ ಶಕ್ತಿ ಬೇರೆಯವರಾಗಿದ್ದರು,'ಎಂದು ಸ್ಪಷ್ಟಪಡಿಸಿದರು. 'ಚನ್ನಪಟ್ಟಣದಲ್ಲಿ ಚುನಾವಣೆಗೆ ಎರಡು ದಿನಗಳಿರುವಂತೆ ನಡೆದ ವಿದ್ಯಮಾನಗಳು ರೇವಣ್ಣ ಪರವಾಗಿ ನಡೆದ ಹಲವಾರು ತಿರುವುಗಳು ಫಲಿತಾಂಶದ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗದ ಸ್ಥಿತಿಗೆ ತಂದು ನಿಲ್ಲಿಸಿದೆ. ನಾವ್ಯಾರೂ ಊಹಿಸದ ರೀತಿಯಲ್ಲಿ ಚನ್ನಪಟ್ಟಣದಲ್ಲಿ ಡಿಕೆಶಿವಕುಮಾರ್‌ ಹರಿಸಿದ ಹಣದ ಹೊಳೆ ಕೆಲಸ ಮಾಡಿದ್ದರೆ ಈ ಚುನಾವಣೆ ನನಗೆ ಗೆಲ್ಲಲು ಕಷ್ಟವಾಗಲಿದೆ. ನನ್ನ ಸಾಧನೆ , ಹೋರಾಟ ನೀರಾವರಿಯ ನನ್ನ ಶ್ರಮಕ್ಕೆ ಬೆಲೆ ಸಿಕ್ಕಿದರೆ ಕಡಿಮೆ ಅಂತರದಲ್ಲಿ ಗೆಲ್ಲುತ್ತೇನೆ,' ಎಂಬ ಆಶಾಭಾವ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ