ಬೆಂಗಳೂರು : ಜಿಂದಾಲ್ಗೆ ಭೂಮಿ ನೀಡುವ ಸರಕಾರದ ನಿರ್ಧಾರದ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಯಲಿದೆ. ಈ ಸಂಬಂಧ ಚರ್ಚಿಸಲು ವಿಶೇಷ ಅಧಿವೇಶನ ಕರೆಯಲಿ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಈ ವಿಚಾರದಲ್ಲಿ ಮಿತ್ರಪಕ್ಷಗಳ ಮುಖಂಡರಾದ ಎಚ್.ಕೆ.ಪಾಟೀಲ್, ಎಚ್.ವಿಶ್ವನಾಥ್, ಹೊರಟ್ಟಿ ಅಂಥವರೇ ಆಕ್ಷೇಪಿಸಿದ್ದಾರೆ. ತಮ್ಮಲ್ಲಿನ ಈ ಬಿರುಕು ಸರಿಪಡಿಸಿಕೊಳ್ಳುವ ಬದಲು ಯಡಿಯೂರಪ್ಪ ವಿರುದ್ಧ ಸಿಎಂ ಎಚ್.ಡಿ.ಕುಮಾರಸ್ವಾಮಿ ಅನಗತ್ಯ ಆರೋಪ ಮಾಡಿದ್ದಾರೆ. ಬಿಎಸ್ವೈ ಅವರಿಗೆ ಸಂಬಂಧಿಸಿದ್ದ ಪ್ರಕರಣ ಕೋರ್ಟ್ನಲ್ಲಿ ವಜಾ ಆಗಿದೆ. ಇದನ್ನು ಸಿಎಂ ಅರ್ಥ ಮಾಡಿಕೊಳ್ಳಲಿ,'' ಎಂದು ಎಂದರು.
''ಸಚಿವರಾದ ಜಾರ್ಜ್,ಡಿ.ಕೆ. ಶಿವಕುಮಾರ್ ಮತ್ತು ಸಿಎಂ ಹೊರತು ಪಡಿಸಿ ಸಂಪುಟದ ಇತರರೂ ಜಿಂದಾಲ್ಗೆ ಭೂಮಿ ನೀಡುವುದರ ವಿರುದ್ಧವಿದ್ದಾರೆ. ಹಾಗಾಗಿ ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಸಂಪುಟ ಉಪ ಸಮಿತಿ ಮೇಲೆ ನಮಗೆ ನಂಬಿಕೆಯಿಲ್ಲ. ಸಮಿತಿ ವರದಿಯನ್ನೂ ನಾವು ಒಪ್ಪುವುದಿಲ್ಲ,'' ಎಂದರು.
ಟ್ವೀಟ್...
ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಹೊಣೆಗೇಡಿತನದಿಂದ ಮಾತನಾಡುವುದು ಸರಿಯಲ್ಲ. ಸಿಬಿಐ ನ್ಯಾಯಾಲಯ ನನ್ನನ್ನು ಎಲ್ಲ ಆರೋಪದಿಂದ ಖುಲಾಸೆಗೊಳಿಸಿದೆ. ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವಂತೆ ಹಗುರವಾಗಿ ಮಾತಾಡಬೇಡಿ. ನಿಮ್ಮ ವೈಫಲ್ಯ ಮುಚ್ಚಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಬೇಡಿ.
-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಮುಖ್ಯಮಂತ್ರಿಗಳೇ ಸಿಬಿಐ ನ್ಯಾಯಾಲಯ ಖುಲಾಸೆ ಮಾಡಿರುವ ಪ್ರಕರಣವನ್ನು ಮತ್ತೆ ಎಳೆದು ತಂದು ನ್ಯಾಯಾಲಯಕ್ಕೆ ಅಗೌರವ ತರುವುದು ನಿಮ್ಮ ಸ್ಥಾನದ ಗೌರವವಲ್ಲ. ಅಂದಹಾಗೆ ದೇವೇಗೌಡರ ರೈತ ಪರ ನೈಸ್ ಹೋರಾಟ ಏನಾಯಿತು? ನಿಮ್ಮದೇ ಸರಕಾರವಿದೆ. ನೀವೇ ಸಿಎಂ. ನಿಮ್ಮ ಸಹೋದರ ಪಿಡಬ್ಲ್ಯುಡಿ ಮಂತ್ರಿ. ಮತ್ತೆ ತನಿಖೆ ಮಾಡಿಸಿ.
-ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ
ಗಣಿಧಣಿಗಳ ವಿರುದ್ಧ ಹೋರಾಟ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈಗ ಏನು ಮಾಡುತ್ತಿದ್ದಾರೆ. ಪಾದಯಾತ್ರೆ ಮಾಡಿದ್ದು ಏಕೆ, ಮೌನ ತಾಳಿರುವುದು ಏಕೆ. ಉಪ ಸಮಿತಿ ಮಾಡಿದ ತಕ್ಷಣ ಭೂಮಿ ವಾಪಸ್ ಬಂತಾ ?
-ಎಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಈ ವಿಚಾರದಲ್ಲಿ ಮಿತ್ರಪಕ್ಷಗಳ ಮುಖಂಡರಾದ ಎಚ್.ಕೆ.ಪಾಟೀಲ್, ಎಚ್.ವಿಶ್ವನಾಥ್, ಹೊರಟ್ಟಿ ಅಂಥವರೇ ಆಕ್ಷೇಪಿಸಿದ್ದಾರೆ. ತಮ್ಮಲ್ಲಿನ ಈ ಬಿರುಕು ಸರಿಪಡಿಸಿಕೊಳ್ಳುವ ಬದಲು ಯಡಿಯೂರಪ್ಪ ವಿರುದ್ಧ ಸಿಎಂ ಎಚ್.ಡಿ.ಕುಮಾರಸ್ವಾಮಿ ಅನಗತ್ಯ ಆರೋಪ ಮಾಡಿದ್ದಾರೆ. ಬಿಎಸ್ವೈ ಅವರಿಗೆ ಸಂಬಂಧಿಸಿದ್ದ ಪ್ರಕರಣ ಕೋರ್ಟ್ನಲ್ಲಿ ವಜಾ ಆಗಿದೆ. ಇದನ್ನು ಸಿಎಂ ಅರ್ಥ ಮಾಡಿಕೊಳ್ಳಲಿ,'' ಎಂದು ಎಂದರು.
''ಸಚಿವರಾದ ಜಾರ್ಜ್,ಡಿ.ಕೆ. ಶಿವಕುಮಾರ್ ಮತ್ತು ಸಿಎಂ ಹೊರತು ಪಡಿಸಿ ಸಂಪುಟದ ಇತರರೂ ಜಿಂದಾಲ್ಗೆ ಭೂಮಿ ನೀಡುವುದರ ವಿರುದ್ಧವಿದ್ದಾರೆ. ಹಾಗಾಗಿ ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಸಂಪುಟ ಉಪ ಸಮಿತಿ ಮೇಲೆ ನಮಗೆ ನಂಬಿಕೆಯಿಲ್ಲ. ಸಮಿತಿ ವರದಿಯನ್ನೂ ನಾವು ಒಪ್ಪುವುದಿಲ್ಲ,'' ಎಂದರು.
ಟ್ವೀಟ್...
ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಹೊಣೆಗೇಡಿತನದಿಂದ ಮಾತನಾಡುವುದು ಸರಿಯಲ್ಲ. ಸಿಬಿಐ ನ್ಯಾಯಾಲಯ ನನ್ನನ್ನು ಎಲ್ಲ ಆರೋಪದಿಂದ ಖುಲಾಸೆಗೊಳಿಸಿದೆ. ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವಂತೆ ಹಗುರವಾಗಿ ಮಾತಾಡಬೇಡಿ. ನಿಮ್ಮ ವೈಫಲ್ಯ ಮುಚ್ಚಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಬೇಡಿ.
-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಮುಖ್ಯಮಂತ್ರಿಗಳೇ ಸಿಬಿಐ ನ್ಯಾಯಾಲಯ ಖುಲಾಸೆ ಮಾಡಿರುವ ಪ್ರಕರಣವನ್ನು ಮತ್ತೆ ಎಳೆದು ತಂದು ನ್ಯಾಯಾಲಯಕ್ಕೆ ಅಗೌರವ ತರುವುದು ನಿಮ್ಮ ಸ್ಥಾನದ ಗೌರವವಲ್ಲ. ಅಂದಹಾಗೆ ದೇವೇಗೌಡರ ರೈತ ಪರ ನೈಸ್ ಹೋರಾಟ ಏನಾಯಿತು? ನಿಮ್ಮದೇ ಸರಕಾರವಿದೆ. ನೀವೇ ಸಿಎಂ. ನಿಮ್ಮ ಸಹೋದರ ಪಿಡಬ್ಲ್ಯುಡಿ ಮಂತ್ರಿ. ಮತ್ತೆ ತನಿಖೆ ಮಾಡಿಸಿ.
-ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ
ಗಣಿಧಣಿಗಳ ವಿರುದ್ಧ ಹೋರಾಟ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈಗ ಏನು ಮಾಡುತ್ತಿದ್ದಾರೆ. ಪಾದಯಾತ್ರೆ ಮಾಡಿದ್ದು ಏಕೆ, ಮೌನ ತಾಳಿರುವುದು ಏಕೆ. ಉಪ ಸಮಿತಿ ಮಾಡಿದ ತಕ್ಷಣ ಭೂಮಿ ವಾಪಸ್ ಬಂತಾ ?
-ಎಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ