ಆ್ಯಪ್ನಗರ

ಕೇರಳ: ಆಗಸ್ಟ್‌ನಿಂದ ಅಂಚೆ ಬ್ಯಾಂಕಿಂಗ್‌

ಎಲ್ಲ ಜಿಲ್ಲೆಗಳಲ್ಲಿ ತಲಾ ಒಂದರಂತೆ ಅಂಚೆ ಇಲಾಖೆಯ 14 ಪೇಮೆಂಟ್ಸ್‌ ಬ್ಯಾಂಕ್‌ಗಳು ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (ಐಪಿಪಿಬಿ) ಆಗಸ್ಟ್‌ನಲ್ಲಿ ಕೇರಳ ರಾಜ್ಯದಲ್ಲಿ ...

ವಿಕ ಸುದ್ದಿಲೋಕ 21 Jul 2018, 5:00 am
ಕಾಸರಗೋಡು: ಎಲ್ಲ ಜಿಲ್ಲೆಗಳಲ್ಲಿ ತಲಾ ಒಂದರಂತೆ ಅಂಚೆ ಇಲಾಖೆಯ 14 ಪೇಮೆಂಟ್ಸ್‌ ಬ್ಯಾಂಕ್‌ಗಳು ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (ಐಪಿಪಿಬಿ) ಆಗಸ್ಟ್‌ನಲ್ಲಿ ಕೇರಳ ರಾಜ್ಯದಲ್ಲಿ ಕಾರಾರ‍ಯರಂಭಗೊಳ್ಳಲಿವೆ. ಭಾರತದಾದ್ಯಂತ 650 ಶಾಖೆಗಳನ್ನು ಆರಂಭಿಸಲಾಗುವುದು.
Vijaya Karnataka Web
ಕೇರಳ: ಆಗಸ್ಟ್‌ನಿಂದ ಅಂಚೆ ಬ್ಯಾಂಕಿಂಗ್‌


ರಾಜ್ಯದಲ್ಲಿ 26 ಶಾಖೆಗಳನ್ನು ಆರಂಭಿಸಲು ತೀರ್ಮಾನಿಸಲಾಗಿತ್ತಾದರೂ ಮೊದಲ ಹಂತದಲ್ಲಿ 14 ಬ್ಯಾಂಕ್‌ಗಳು ಇರಲಿವೆ. ಎರ್ನಾಕುಳದ ಇಡಪ್ಪಳ್ಳಿಯಲ್ಲಿ ರಾಜ್ಯದ ಮೊದಲ ಶಾಖೆ ಆರಂಭವಾಗಲಿದೆ.

ಒಬ್ಬರಿಂದ ಒಂದು ಲಕ್ಷ ರೂ. ವರೆಗೆ ಠೇವಣಿ ಸ್ವೀಕರಿಸುತ್ತಿದ್ದು, ಕರೆಂಟ್‌ ಸೇವಿಂಗ್‌, ಸ್ಯಾಲರಿ ಅಕೌಂಟ್‌ಗಳು ಲಭ್ಯಗೊಳಿಸುವ ಬ್ಯಾಂಕ್‌ ಇದಾಗಿದೆ. ಡೆಬಿಟ್‌ ಕಾರ್ಡ್‌, ಇಂಟರ್‌ನೆಟ್‌, ಎಸ್‌ಎಂಎಸ್‌, ಮೊಬೈಲ್‌ ಬ್ಯಾಂಕಿಂಗ್‌ ಸೇವೆಗಳು ಇರಲಿವೆ. ಅಂಚೆ ಇಲಾಖೆಯ ಎಟಿಎಂಗಳನ್ನು ಈಗಾಗಲೇ ಬ್ಯಾಂಕಿಂಗ್‌ ಶೃಂಖಲೆಯೊಂದಿಗೆ ಜೋಡಿಸಿದ್ದು, ವ್ಯವಹಾರಗಳು ಸುಲಭವಾಗಲಿವೆ.

ಐಪಿಪಿಬಿಗಳ ಮ್ಯಾನೇಜ್‌ ಮೆಂಟ್‌, ಮಾರ್ಕೆಟಿಂಗ್‌ ನೌಕರಿಗಳಿಗಾಗಿ ಅಂಚೆ ಇಲಾಖೆ ಪ್ರತ್ಯೇಕ ರಿಕ್ರೂಟ್‌ಮೆಂಟ್‌ ನಡೆಸಿದೆ. ಡೋರ್‌ ಟು ಡೋರ್‌ ಆರ್ಥಿಕ ವ್ಯವಹಾರಗಳು, ಸೇವೆಗಳನ್ನು ನೀಡುವುದು ಈಗಿರುವ ಪೋಸ್ಟ್‌ಮ್ಯಾನ್‌ಗಳು, ಗ್ರಾಮೀಣ್‌ ಡಾಕ್‌ ಸೇವಕರು ಆಗಿರುವರು.

ಬಯೋಮೆಟ್ರಿಕ್‌ ರೀಡರ್‌, ಪ್ರಿಂಟರ್‌, ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ರೀಡರ್‌ ಹೀಗೆ ಸಜ್ಜೀಕರಣಗಳಿರುವ ಮೈಕ್ರೋ ಎಟಿಎಂಗಳನ್ನು ಇದಕ್ಕಾಗಿ ಪೋಸ್ಟ್‌ಮ್ಯಾನ್‌ಗಳಿಗೆ ನೀಡಲಾಗುವುದು. ಇದಕ್ಕಾಗಿ 2 ಲಕ್ಷದಷ್ಟು ಆಧುನಿಕ ಉಪಕರಣಗಳನ್ನು ಖರೀದಿಸಲಾಗುವುದು. ನೌಕರರಿಗಿರುವ ತರಬೇತಿಯೂ ಅಂತಿಮ ಹಂತದಲ್ಲಿದೆ. ಪೋಸ್ಟ್‌ಮ್ಯಾನ್‌, ಜಿಡಿಎಸ್‌ ನೌಕರರನ್ನು ಬಳಿಕ ಬ್ಯಾಂಕ್‌ನ ಭಾಗವನ್ನಾಗಿಸಲು ಆಲೋಚಿಸಲಾಗಿದೆ.

ಭಾರತದಾದ್ಯಂತ 3.250 ಕಲೆಕ್ಷನ್‌ ಕೇಂದ್ರಗಳಿರಲಿವೆ. 5 ವರ್ಷಗಳಲ್ಲಿ 1.55ಲಕ್ಷ ಅಂಚೆ ಕಚೇರಿಗಳಿಗೆ ಬ್ಯಾಂಕಿಂಗ್‌ ವಲಯ ವಿಸ್ತರಿಸಲು ತಿರ್ಮಾನಿಸಲಾಗಿದೆ. ಆಯ್ದ 10 ಸಾವಿರ ಕೇಂದ್ರಗಳಲ್ಲಿ ಮೊದಲ ಹಂತದಲ್ಲಿ ಮನೆಬಾಗಿಲಿಗೆ ಸೇವೆ ತಲುಪಲಿದೆ.

ಪೋಸ್ಟ್‌ಮ್ಯಾನ್‌ಗಳು ಮನೆಗೆ ಬಂದು ಖಾತೆ ತೆರೆಯಲು ಸಹಾಯ ಮಾಡುವರು. ಆಧಾರ್‌ -ಆರ್ಥಿಕ ವ್ಯವಹಾರಗಳನ್ನು ನೇರವಾಗಿ ಹಸ್ತಾಂತರಿಸಲಾಗುವುದು. 24 ಗಂಟೆಗಳ ಕಾಲ ಹಣ ಪಾವತಿಸಲು, ಎಲ್‌ಪಿಜಿ, ವಿದ್ಯುತ್‌ ಬಿಲ್‌ಗಳನ್ನು ಪಾವತಿಸಲಿರುವ ಸೌಕರ್ಯ ಕಲ್ಪಿಸಲಾಗುವುದು. ಮಲೆಯಾಳ ಮೊದಲಾದ ಭಾಷೆಗಳಲ್ಲಿ 24 ಗಂಟೆಗಳ ಕಾಲ ಕಸ್ಟಮರ್‌ ಕೇರ್‌ ಪ್ರೋತ್ಸಾಹ ಇರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ