ಆ್ಯಪ್ನಗರ

ಶವ ಸಂಸ್ಕಾರಕ್ಕೆ ಭೂಮಿ ಬಿಟ್ಟು ಕೊಟ್ಟ ದಾನಿ

ಮಹಾಪ್ರಳಯದಲ್ಲಿ ಮೃತಪಟ್ಟವರ ಸಂಸ್ಕಾರ ನಡೆಸಲು ಸೌಕರ‍್ಯವಿಲ್ಲವರಿಗೆ ತನ್ನ ಭೂಮಿಯನ್ನೇ ಬಿಟ್ಟುಕೊಟ್ಟ ವ್ಯಕ್ತಿಯ ಬಗ್ಗೆ ಸೋಶಿಯಲ್‌ ಮೀಡಿಯಾಗಳಲ್ಲಿ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.

Vijaya Karnataka 21 Aug 2018, 5:00 am
ಕಾಸರಗೋಡು: ಮಹಾಪ್ರಳಯದಲ್ಲಿ ಮೃತಪಟ್ಟವರ ಶವ ಸಂಸ್ಕಾರ ನಡೆಸಲು ಸೌಕರ‍್ಯವಿಲ್ಲವರಿಗೆ ತನ್ನ ಭೂಮಿಯನ್ನೇ ಬಿಟ್ಟುಕೊಟ್ಟ ವ್ಯಕ್ತಿಯ ಬಗ್ಗೆ ಸೋಶಿಯಲ್‌ ಮೀಡಿಯಾಗಳಲ್ಲಿ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.
Vijaya Karnataka Web
ಶವ ಸಂಸ್ಕಾರಕ್ಕೆ ಭೂಮಿ ಬಿಟ್ಟು ಕೊಟ್ಟ ದಾನಿ


ಪತ್ತನಂತಿಟ್ಟ ಜಿಲ್ಲೆಯ ಅಡೂರಿನ ಕುರುವಿಳ ಸಾಮ್ಯೂವೆಲ್‌ ಎಂಬವರು ಘಟನೆಯಲ್ಲಿ ಮೃತಪಟ್ಟವರ ಶವ ಸಂಸ್ಕಾರ ಮಾಡುಲು ಜಾಗ ನೀಡಲು ಮುಂದೆ ಬಂದಿದ್ದಾರೆ. ಅಡೂರಿನಲ್ಲಿ ತನ್ನ ಮಾಲಕತ್ವದಲ್ಲಿರುವ ಸ್ಥಳದಲ್ಲಿ ಜಾತಿ-ಮತ ಬೇಧವಿಲ್ಲದೇ ಮೃತದೇಹಗಳನ್ನು ಸಂಸ್ಕಾರ ನಡೆಸಲು ಅನುಮತಿ ನೀಡಿದ್ದಾರೆ.

ಅಡೂರು ಪೇಟೆಯಿಂದ ಮೂರು ಕಿಲೋ ಮೀಟರ್‌ ದೂರದಲ್ಲಿ 25 ಸೆಂಟ್ಸ್‌ ಸ್ಥಳವನ್ನು ಪ್ರಳಯದಲ್ಲಿ ಮೃತಪಟ್ಟವರ ಸಂಸ್ಕಾರ ನಡೆಸಲು ಬಿಟ್ಟು ಕೊಟ್ಟಿದ್ದಾರೆ.

ತಗ್ಗು ಪ್ರದೇಶಗಳಲ್ಲಿ ಜಲಾವೃತಗೊಂಡ ಹಿನ್ನೆಲೆಯಲ್ಲಿ ಮೃತಪಟ್ಟವರ ಅಂತ್ಯ ಸಂಸ್ಕಾರ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಶವಗಾರದಲ್ಲಿರುವ ಮೃತದೇಹಗಳನ್ನು ಎಷ್ಟು ಸಮಯ ತನಕ ಹೀಗೆ ಇಟ್ಟುಕೊಳ್ಳಲು ಸಾಧ್ಯ ಎಂಬ ಬಗ್ಗೆ ಚಿಂತೆಗೀಡಾಗಿದ್ದ ಸಂದರ್ಭದಲ್ಲಿ ಪತ್ತನಂತಿಟ್ಟ ಜಿಲ್ಲೆಯ ಅಡೂರು ನಗರಸಭೆಯ ನಿವಾಸಿ ಹಾಗೂ ದೆಹಲಿಯಲ್ಲಿರುವ ಕುರಿವಿಳ ಸ್ಯಾಮುವೆಲ್‌ ಎಂಬವರು ಫೇಸ್‌ಬುಕ್‌ ಮೂಲಕ ಮೃತದೇಹ ಸಂಸ್ಕಾರ ನಡೆಸಲು ಸಾಧ್ಯವಾಗದವರು ತನ್ನ ಭೂಮಿಯನ್ನು ಉಪಯೋಗಿಸಬಹುದು. ಅಲ್ಲದೇ ಯಾವುದಾದರೂ ಕಾನೂನು ತೊಡಕು ಇದ್ದರೆ ಅಡೂರು ನಗರಸಭೆಯನ್ನು ಸಂಪರ್ಕಿಸಬಹುದು ಎಂದು ಸ್ಯಾಮುವೆಲ್‌ ಫೇಸ್‌ಬುಕ್‌ಲೈವ್‌ ಮೂಲಕ ತಿಳಿಸಿದ್ದಾರೆ.

ಆನೇಕ ಮಂದಿ ಅವರ ಫೇಸ್‌ಬುಕ್‌ ಲೈವ್‌ ಲೈಕ್‌ ಮಾಡಿದ್ದಲ್ಲದೇ ಶೇರ್‌ ಮಾಡಿಕೊಂಡಿದ್ದಾರೆ. ಈ ಮೂಲಕ ಆನೇಕ ಮಂದಿ ಸ್ಯಾಮುವೆಲ್‌ನ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿರುವ ಇವರು ಊರಿನಲ್ಲಿರುವ 25 ಸೆಂಟ್ಸ್‌ ಸ್ಥಳವನ್ನು ಮೃತದೇಹ ಸಂಸ್ಕಾರಕ್ಕಾಗಿ ಬಳಸಬಹುದು ಎಂಬುದಾಗಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ