ಆ್ಯಪ್ನಗರ

ಕೇರಳದಲ್ಲಿಒಂದು ವರ್ಷ ಕಾಲ ಸರಕಾರಿ ಆಚರಣೆಗಳಿಗೆ ಬ್ರೇಕ್‌

ಕೇರಳದಲ್ಲಿ ಮಹಾಪ್ರವಾಹದ ಹಿನ್ನೆಲೆಯಲ್ಲಿ ಸರಕಾರದ ನಿಧಿ ಉಪಯೋಗಿಸಿ ನಡೆಸುವ ಎಲ್ಲ ಆಚರಣೆಗಳು, ...

Vijaya Karnataka 6 Sep 2018, 9:25 pm
ಕಾಸರಗೋಡು: ಕೇರಳದಲ್ಲಿ ಮಹಾಪ್ರವಾಹದ ಹಿನ್ನೆಲೆಯಲ್ಲಿ ಸರಕಾರದ ನಿಧಿ ಉಪಯೋಗಿಸಿ ನಡೆಸುವ ಎಲ್ಲ ಆಚರಣೆಗಳು, ಕಾರ‍್ಯಕ್ರಮಗಳನ್ನು ಒಂದು ವರ್ಷದ ಮಟ್ಟಿಗೆ ರದ್ದುಗೊಳಿಸಲಾಗಿದೆ. ಇದರಂತೆ ಶಾಲಾ ಕಲೋತ್ಸವ, ಚಲನಚಿತ್ರ ಫೆಸ್ಟಿವಲ್‌, ಪ್ರವಾಸೋದ್ಯಮ ಇಲಾಖೆಗಳ ಸಹಿತ ಎಲ್ಲ್ಲ ಇಲಾಖೆಗಳ ಆಚರಣೆಗಳನ್ನು ರದ್ದುಗೊಳಿಸಲಾಗುವುದು.
Vijaya Karnataka Web
ಕೇರಳದಲ್ಲಿಒಂದು ವರ್ಷ ಕಾಲ ಸರಕಾರಿ ಆಚರಣೆಗಳಿಗೆ ಬ್ರೇಕ್‌


ಇದಕ್ಕಾಗಿ ಮೀಸಲಿಟ್ಟ ಎಲ್ಲ ಹಣವನ್ನು ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ನೀಡಲು ನಾನಾ ಇಲಾಖೆಗಳಿಗೆ ನಿರ್ದೇಶಿಸಲಾಗಿದೆ. ಸಾರ್ವಜನಿಕ ಸಂಪರ್ಕ ಇಲಾಖೆಯು ಈ ಬಗ್ಗೆ ಸುತ್ತೋಲೆ ಹೊರಡಿಸಿದೆ.

ಈ ಬಾರಿ ರಾಜ್ಯಮಟ್ಟದ ಶಾಲಾ ಕಲೋತ್ಸವ ನಡೆಯಬೇಕಾಗಿದ್ದ ಆಲಪ್ಪುಯ ಜಿಲ್ಲೆಯಲ್ಲಿ ಪ್ರಳಯದಿಂದಾಗಿ ಭಾರಿ ನಷ್ಟ ಉಂಟಾಗಿದ್ದು, ಅದ್ದರಿಂದ ಅದನ್ನು ರದ್ದುಪಡಿಸಲಾಗಿದೆ. ಅಲ್ಲದೇ ಸರಕಾರದ ವತಿಯಿಂದ ನಡೆಯುವ ಓಣಂ ಆಚರಣೆಯನ್ನು ರದ್ದುಪಡಿಸಲಾಗಿತ್ತು.

ನಷ್ಟ ಪರಿಹಾರಕ್ಕೆ ನಿಖರ ಮಾನದಂಡಬೇಕು: ಪ್ರವಾಹ ಬಾಧಿತರಿಗೆ ನಷ್ಟ ಪರಿಹಾರ ನೀಡುವಾಗ ನಿಖರವಾದ ಮಾನದಂಡವನ್ನು ಅನುಸರಿಸಬೇಕು ಎಂದು ಕೇರಳ ಹೈಕೋರ್ಟ್‌ ತಿಳಿಸಿದೆ. ಯಾರೆಲ್ಲ ಅರ್ಹರಾಗಿದ್ದಾರೆ ಎಂಬುದನ್ನು ಪರಿಶೀಲಿಸಲು ಪರಿಣಿತರ ಸಮಿತಿ ರಚಿಸಬೇಕು. ಕಡಿಮೆ ನಷ್ಟ ಪರಿಹಾರ ನಾಲ್ಕು ಲಕ್ಷ ರೂ. ಎಂಬುದು ಯಾವ ಆಧಾರದಲ್ಲಿ ನಿಶ್ಚಿಯಿಸಿರುವುದು ಎಂಬುದಾಗಿ ಹೈಕೋರ್ಟ್‌ ಪ್ರಶ್ನಿಸಿತ್ತು.

ನಷ್ಟ ಪರಿಹಾರ ನೀಡಲು ಯಾವ ಮಾನದಂಡ ಅನುಸರಿಸಲಾಗಿದೆ ಎಂಬುದನ್ನು ಸೆ.19ರೊಳಗೆ ಹೈಕೋರ್ಟ್‌ಗೆ ತಿಳಿಸಬೇಕೆಂದು ನಿರ್ದೇಶಿಸಿದೆ. ಕಂದಾಯ ಅಧಿಕಾರಿಗಳ ಮೂಲಕ ನಷ್ಟ ಪರಿಹಾರ ಲೆಕ್ಕಾಚರ ನಡೆಸಿದರೆ ಅದು ತುಂಬ ವಿಳಂಬ ಹಾಗೂ ಸ್ವಜನಪಕ್ಷ ಪಾತ ನೀತಿ ಉಂಟಾಗಬಹುದು. ಭ್ರಷ್ಟಾಚಾರ ನಡೆಯದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ