ಆ್ಯಪ್ನಗರ

ಕೊಂಡೆವೂರಿನ ಸೋಮಯಾಗಕ್ಕೆ ಮಣ್ಣಿನ ಕುಂಭ ತಯಾರಿಯ ಮುಹೂರ್ತ

ಕೊಂಡೆವೂರಿನ ಶೀ ನಿತ್ಯಾನಂದ ಯೋಗಾಶ್ರಮದಲ್ಲಿ ಫೆ.18ರಿಂದ 24ರ ವರೆಗೆ ನಡೆಯಲಿರುವ ವಿಶ್ವಜಿತ್‌ ಅತಿರಾತ್ರ ಸೋಮಯಾಗಕ್ಕೆ ಬೇಕಾದ ಮಣ್ಣಿನ ನಾನಾ ರೀತಿಯ ಪಾತ್ರೆಗಳು ಮತ್ತು ಅರುಣ ಕೇತುಕ ಚಯನಕ್ಕೆ ಬೇಕಾದ 1200 ಸಣ್ಣಗಾತ್ರದ ಮಣ್ಣಿನ ಪಾತ್ರೆಗಳನ್ನು ತಯಾರಿಸುವ ಮುಹೂರ್ತವನ್ನು ಇತ್ತೀಚೆಗೆ ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿಯವರ, ಕೊಂಡೆವೂರಿನ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಪೈವಳಿಕೆಯ ಕಾಯರಕಟ್ಟೆ-ಲಾಲ್‌ಭಾಗ್‌ನ ಕುಲಾಲ ಸಮಾಜ ಮಂದಿರದಲ್ಲಿ ನಡೆಸಿದರು.

Vijaya Karnataka 2 Jan 2019, 10:00 pm
ಉಪ್ಪಳ : ಕೊಂಡೆವೂರಿನ ಶೀ ನಿತ್ಯಾನಂದ ಯೋಗಾಶ್ರಮದಲ್ಲಿ ಫೆ.18ರಿಂದ 24ರ ವರೆಗೆ ನಡೆಯಲಿರುವ ವಿಶ್ವಜಿತ್‌ ಅತಿರಾತ್ರ ಸೋಮಯಾಗದಲ್ಲಿ ಉಪಯೋಗಿಸಲಿರುವ ನಾನಾ ವಸ್ತುಗಳನ್ನು ಹಿಂದೂ ಸಮಾಜದ ವಿವಿಧ ಸಮುದಾಯಗಳವರು ತಮ್ಮ ಕುಲವೃತ್ತಿಯಂತೆ ತಯಾರಿ ಮಾಡುವ ಮುಹೂರ್ತ ನಡೆಯುತ್ತಿದ್ದು ಅದರಂತೆ ಕುಲಾಲ ಸಮುದಾಯದವರು ಯಾಗಕ್ಕೆ ಬೇಕಾದ ಮಣ್ಣಿನ ನಾನಾ ರೀತಿಯ ಪಾತ್ರೆಗಳು ಮತ್ತು ಅರುಣ ಕೇತುಕ ಚಯನಕ್ಕೆ ಬೇಕಾದ 1200 ಸಣ್ಣಗಾತ್ರದ ಮಣ್ಣಿನ ಪಾತ್ರೆಗಳನ್ನು ತಯಾರಿಸುವ ಮುಹೂರ್ತವನ್ನು ಇತ್ತೀಚೆಗೆ ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿಯವರ, ಕೊಂಡೆವೂರಿನ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಪೈವಳಿಕೆಯ ಕಾಯರಕಟ್ಟೆ-ಲಾಲ್‌ಭಾಗ್‌ನ ಕುಲಾಲ ಸಮಾಜ ಮಂದಿರದಲ್ಲಿ ನಡೆಸಿದರು. ಈ ವೇಳೆ ಕುಲಾಲ ಸಮಾಜ ಬಾಂಧವರೊಂದಿಗೆ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ನಡೆಸಿದರು. ನಂತರ ಪೂಜೆ, ಮತ್ತು ಯತಿದ್ವಯರು ಸತ್ಸಂಗಗಳನ್ನು ನೆರವೇರಿಸಿದರು.
Vijaya Karnataka Web
ಕೊಂಡೆವೂರಿನ ಸೋಮಯಾಗಕ್ಕೆ ಮಣ್ಣಿನ ಕುಂಭ ತಯಾರಿಯ ಮುಹೂರ್ತ


ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ರವೀಂದ್ರ ಮುನ್ನಿಪ್ಪಾಡಿ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ಕುಂಬಳೆಯ ವೇದಮೂರ್ತಿ ಹರಿನಾರಾಯಣ ಮಯ್ಯ, ಪೈವಳಿಕೆ ಗ್ರಾ.ಪಂ. ಸದಸ್ಯ ಹರೀಶ್‌ ಬೊಟ್ಟಾರಿ, ಹರಿಶ್ಚಂದ್ರ ಮಂಜೇಶ್ವರ, ಬಾಲಕೃಷ್ಣ ದೀಕ್ಷಾ ಕುಂಜತ್ತೂರುಪದವು, ಕಾಸರಗೋಡು ಜಿಲ್ಲಾ ಕುಲಾಲ ಮಹಿಳಾ ಘಟಕದ ಅಧ್ಯಕ್ಷೆ ಗಿರಿಜಾ ಎಸ್‌. ಬಂಗೇರ, ಕುಲಾಲ ಸಂಘ ಕಾಸರಗೋಡು ಜಿಲ್ಲೆ, ಪೈವಳಿಕೆ ಶಾಖೆ ಅಧ್ಯಕ್ಷ ಪೂವಪ್ಪ ಮುನ್ನಿಪ್ಪಾಡಿ, ಕುಲಾಲ ಸಮುದಾಯದ ಪ್ರಮುಖರಾದ ಶ್ರೀನಿವಾಸ್‌ ಕೋರಿಕ್ಕಾರ್‌, ಪಾಣಾಜೆ ಬಾಬು ಮತ್ತು ಪ್ರಮೀಳಾ ಮಾಧವ ಉಪಸ್ಥಿತರಿದ್ದರು.

ದೀಪ್ತಿ ಮತ್ತು ಬಳಗದವರ ಪ್ರಾರ್ಥನೆಯಿಂದ ಆರಂಭಗೊಂಡ ಕಾರ್ಯಕ್ರಮವನ್ನು ಮೀಯಪದವು ದಾಮೋದರ ಮಾಸ್ತರ್‌ ಸ್ವಾಗತಿಸಿದರು. ಸದಾನಂದ ಅಮ್ಮೇರಿ ಕಾರ್ಯಕ್ರಮ ನಿರ್ವಹಿಸಿ, ವಿಶ್ವನಾಥ ಮಾಣಿಪ್ಪಾಡಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ