ಆ್ಯಪ್ನಗರ

ಗಗನಕ್ಕೇರಿದ ಎಳನೀರು ಬೆಲೆ

ಎಳನೀರಿನ ಬೆಲೆ ಗಗನಕ್ಕೇರಿದೆ ಸುಡುವ ಬಿಸಿಲು ಹಾಗೂ ರಮ್ಜಾನ್‌ ವ್ರತಾಚಾರಣೆ ಹಿನ್ನೆಲೆಯಲ್ಲಿ ಎಳನೀರು ಬೆಲೆಯಲ್ಲಿ ಭಾರಿ ಏರಿಕೆ ಉಂಟಾಗಿದೆ...

Vijaya Karnataka 3 Jun 2019, 5:00 am
ಕಾಸರಗೋಡು: ಎಳನೀರಿನ ಬೆಲೆ ಗಗನಕ್ಕೇರಿದೆ. ಸುಡುವ ಬಿಸಿಲು ಹಾಗೂ ರಮ್ಜಾನ್‌ ವ್ರತಾಚಾರಣೆ ಹಿನ್ನೆಲೆಯಲ್ಲಿ ಎಳನೀರು ಬೆಲೆಯಲ್ಲಿ ಭಾರಿ ಏರಿಕೆ ಉಂಟಾಗಿದೆ. ವ್ಯಾಪಾರಿಗಳು ಒಂದು ಸಿಯಾಳಕ್ಕೆ 40 ರೂ. ವಸೂಲಿ ಮಾಡುತ್ತಿದ್ದಾರೆ.
Vijaya Karnataka Web
ಗಗನಕ್ಕೇರಿದ ಎಳನೀರು ಬೆಲೆ


ಇನ್ನೂರೈವತ್ತು ಎಂಎಲ್‌ ಎಳನೀರು ಜ್ಯೂಸ್‌ಗೆ 50 ರೂ. ವಸೂಲಿ ಮಾಡುತ್ತಾರೆ. ಎಳನೀರು ಕೆಳಗಿಳಿಸಲು ಕಾರ್ಮಿಕರು ಸಿಗದಿರುವುದು, ಹಗ್ಗ ಬಳಸಿ ಎಳನೀರು ಕೆಳಗಿಳಿಸಬೇಕು ಎಂಬುದು ಬೆಲೆ ಏರಿಕೆಗೆ ಕಾರಣ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ತರಕಾರಿ ಬೆಲೆ ಕೂಡ ಇದೇ ರೀತಿ ಇದೆ. ಟೊಮೇಟೋಗೆ ಕಿಲೋಗೆ 40 ರೂ.ಗೇರಿದೆ.

ಅಲಸಂಡೆ, ಬೆಂಡೆಕಾಯಿ, ಬೀನ್ಸ್‌, ಕ್ಯಾರಟ್‌, ಬೀಟ್‌ರೂಟ್‌, ಪಪ್ಪಾಯ ಮೊದಲಾದುವುಗಳಿಗೆಲ್ಲ ಒಂದೇ ವಾರದಲ್ಲಿ ಗಣನೀಯ ಬೆಲೆ ಏರಿಕೆ ಉಂಟಾಗಿದೆ. ಕಳೆದ ವಾರ ಟೊಮೇಟೋ ಬೆಲೆ 20 ರೂ. ಆಗಿತ್ತು. ಕಾಯಿಮೆಣಸಿನ ಬೆಲೆ ಕೂಡ ಗಣನೀಯವಾಗಿ ಏರಿಕೆಯಾಗಿದೆ. ಹಣ್ಣುಹಂಪಲುಗಳ ಬೆಲೆ ಕೂಡ ಏರಿಕೆಯಾಗಿದೆ. ಗಂಟೆಗಳೊಳಗೆ ಬೆಲೆ ಏರಿಕೆಯಾಗುತ್ತಿದೆ. ನೇಂದ್ರ ಬಾಳೆಹಣ್ಣಿಗೆ ಹಾಗೂ ಕಲ್ಲಂಗಡಿಗೆ ದಿನಂಪ್ರತಿ ಬೆಲೆ ಏರಿಕೆಯಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ