ಆ್ಯಪ್ನಗರ

ಭೀಕರ ಮಳೆ: ಜಿಲ್ಲೆಯಲ್ಲಿ ಅಪಾರ ನಾಶನಷ್ಟ

rain: more loss in kasaragodu district

Vijaya Karnataka 22 Jul 2019, 5:00 am
ಕಾಸರಗೋಡು: ಭೀಕರ ಮಳೆಗೆ ಕಾಸರಗೋಡು ಜಿಲ್ಲೆಯಲ್ಲಿ ಅಪಾರ ನಾಶನಷ್ಟ ಉಂಟಾಗಿದೆ. ಹಲವಾರು ಪ್ರದೇಶಗಳಲ್ಲಿ ಗುಡ್ಡ ಜರಿತ ಭೀತಿ ನೆಲೆನಿಂತಿದೆ.
Vijaya Karnataka Web
ಭೀಕರ ಮಳೆ: ಜಿಲ್ಲೆಯಲ್ಲಿ ಅಪಾರ ನಾಶನಷ್ಟ


ಹೊಳೆಗಳು, ತೋಡುಗಳು ಮಿತಿಮೀರಿ ಹರಿಯುತ್ತಿದ್ದು ನೀರು ಸಮೀಪ ಪ್ರದೇಶಗಳಿಗೆ ವಿಸ್ತರಿಸಿದೆ. ಇದರಿಂದ ಪ್ರವಾಹ ಭೀತಿ ಎದುರಾಗಿದೆ. ಭೀಕರ ಮಳೆ ಕಾರಣ ಕಿನಾನೂರು-ಕರಿಂದಳ ಕುಂಬಳಪಳ್ಳಿ ಪೆರಿಯಂಗಾನದಲ್ಲಿ ಗುಡ್ಡ ಜರಿದಿದೆ. ಸಮೀಪದ ಗುಡ್ಡ ಜರಿದು ಮಣ್ಣು ಕೆಳಗೆ ಬಿದ್ದಿದೆ. ಯಾರಿಗೂ ಗಾಯಗಳಾಗಿಲ್ಲ. ಮಲೆನಾಡು ಪ್ರದೇಶಗಳಲ್ಲಿ ಗುಡ್ಡ ಜರಿತ ಭೀತಿ ಎದುರಿಸುತ್ತಿರುವ ಪ್ರದೇಶಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಬಾರಿ ಪ್ರದೇಶದ ಜನರು ಅತೀವ ಜಾಗ್ರತೆಯಲ್ಲಿದ್ದಾರೆ. ಬೋವಿಕ್ಕಾನದಲ್ಲಿ ಹಾಗೂ ಚೆರುವತ್ತೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಜರಿತ ಉಂಟಾಗಿದೆ. ಜಿಲ್ಲೆಯ 24 ಗ್ರಾಮಗಳಲ್ಲಿ ಮಳೆಹಾನಿಗಳು ತೀವ್ರವಾಗಿವೆ. 163 ವಿದ್ಯುತ್‌ ಕಂಬಗಳು, ಎರಡು ವಿದ್ಯುತ್‌ ಸ್ಥಾವರಗಳು ಹಾನಿಗೀಡಾಗಿವೆ. ಮಿಕ್ಕ ಪ್ರದೇಶಗಳಲ್ಲಿ ವಿದ್ಯುತ್‌ ಸಂಪರ್ಕ ಅಲ್ಲೋಲ ಕಲ್ಲೋಲಗೊಂಡಿದೆ.

ಬಂದ್ಯೋಡಿನಲ್ಲಿ ಬಾವಿ ಕುಸಿದು ಭೀತಿ ಸೃಷ್ಟಿಸಿದೆ. ಬಂದ್ಯೋಡು ಕೊಕ್ಕೆಚ್ಚಾಲಿನ ಶಂಸುದ್ದೀನ್‌ ಅವರ ಮನೆಯ ಬಾವಿ ಸಂಪೂರ್ಣವಾಗಿ ಕುಸಿದು ಭೂಮಿಯಡಿ ಸೇರಿದೆ.

ಬದಿಯಡ್ಕ ಚೆನ್ನರ್‌ಕಟ್ಟೆಯ ವಿಶ್ವನಾಥ ರೈಯವರ ಮನೆಗೆ ಗುಡ್ಡ ಕುಸಿದು ಬಿದ್ದು ಹಾನಿಯುಂಟಾಗಿದೆ. ಶನಿವಾರ ರಾತ್ರಿ 7.30ಕ್ಕೆ ಘಟನೆ ನಡೆದಿದೆ. ಅಡುಗೆಕೋಣೆಯಲ್ಲಿದ್ದ ಪತ್ನಿ ಹೊರಗೆ ಓಡಿ ಹೋಗಿ ಪಾರಾಗಿದ್ದಾರೆ. ಬದಿಯಡ್ಕ-ಪೆರ್ಲ ರಸ್ತೆಯಲ್ಲಿ ಕರಿಂಬಿಲದಲ್ಲಿ ಭಾನುವಾರ ಬೆಳಿಗ್ಗೆ ಮರ ಮುರಿದು ಬಿದ್ದು ಒಂದು ಗಂಟೆ ಕಾಲ ಸಂಚಾರ ಸ್ಥಗಿತಗೊಂಡಿದೆ. ನಾಗರಿಕರು ಮರ ಮುರಿದು ತೆರವುಗೊಳಿಸಿರುವುದರಿಂದ ತಾತ್ಕಾಲಿಕ ಸಂಚಾರ ಆರಂಭಿಸಲಾಯಿತು. ಬಳಿಕ ಅಗ್ನಿಶಾಮಕದಳ ತಲುಪಿ ಮರ ಸಂಪೂರ್ಣವಾಗಿ ತೆರವುಗೊಳಿಸಿತು. ಶನಿವಾರ ಸಂಜೆ ಉಕ್ಕಿನಡ್ಕದಲ್ಲೂ ರಸ್ತೆಗೆ ಮರ ಬಿದ್ದ ಘಟನೆ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ