ಕಾಸರಗೋಡು: ರಾಜ್ಯದಲ್ಲಿ ಮಧ್ಯಾಹ್ನದೂಟ ಯೋಜನೆ ಉನ್ನತ ಗುಣಮಟ್ಟದ ಯೋಜನೆಯಾಗಿದೆ. ಸುಮಾರು 12738 ಶಾಲೆಗಳಲ್ಲಿ 26 ಲಕ್ಷಗಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಸಂಪೂರ್ಣವಾಗಿ ಕೇಂದ್ರ ಸರಕಾರದ ಸಹಾಯದಿಂದ ಜಾರಿಗೊಳಿಸುವ ಈ ಯೋಜನೆ ಫಲಪ್ರದವಾಗಿ ನಡೆಸಲು ಮತ್ತು ಇದರ ಮೇಲ್ನೋಟಕ್ಕಾಗಿ ಸೂಪರ್ವೈಸರ್ಗಳನ್ನು ತಕ್ಷಣ ನೇಮಿಸಬೇಕು ಎಂದು ಎನ್ಜಿಒ ಯೂನಿಯನ್ ಸಂಯುಕ್ತ ಸಮಿತಿ ಅಧ್ಯಕ್ಷ ವಿ.ಸಿ. ಮ್ಯಾಥ್ಯೂ ಹೇಳಿದರು.
ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ ನೌಕರರ ಸಂಯುಕ್ತ ಸಮಿತಿ ಗುರುವಾರ ಶಿಕ್ಷಣ ನಿರ್ದೇಶಕರ ಕಚೇರಿ ಎದುರು ಧರಣಿ ಉದ್ಘಾಟಿಸಿ ಅವರು ಮಾತನಾಡಿದರು. ಪಠ್ಯಪುಸ್ತಕ ಕಚೇರಿಗಳನ್ನು ರದ್ದುಗೊಳಿಸುವ ತೀರ್ಮಾನವನ್ನು ಕೈಬಿಡಬೇಕು, ಮಧ್ಯಾಹ್ನದೂಟದ ಮೇಲ್ನೋಟ ವಹಿಸುವುದಕ್ಕಾಗಿ ಎಇಒ-ಡಿಇಒ ಕಚೇರಿಗಳಲ್ಲಿ ಸೂಪರ್ವೈಸರ್ ಹುದ್ದೆಯನ್ನು ಸೃಷ್ಟಿಸಬೇಕು ಮುಂತಾದ ಬೇಡಿಕೆಗಳನ್ನು ಮಂದಿಟ್ಟುಕೊಂಡು ಧರಣಿ ನಡೆಯಿತು.
ರಾಜ್ಯದಲ್ಲಿ ಪಠ್ಯಪುಸ್ತಕ ವಿತರಣೆಗಾಗಿರುವ ಪಠ್ಯಪುಸ್ತಕ ಕಚೇರಿಯನ್ನು ರದ್ದುಗೊಳಿಸುವ ಕೇರಳ ಸರಕಾರದ ತೀರ್ಮಾನ ಖಂಡನೀಯವಾಗಿದೆ. ಇದರಿಂದಾಗಿ ಈ ವಲಯದಲ್ಲಿ ದುಡಿಯುತ್ತಿರುವವ ರಿಗೆ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಎಲ್ಲಾ ಆದೇಶಗಳನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು. ರಾಜ್ಯ ಸಮಿತಿ ಕಾರ್ಯಕಾರಿ ಸದಸ್ಯ ಕೆ.ರವೀಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಎನ್ಜಿಒ ಯೂನಿಯನ್ ಸಮಿತಿ ಸದಸ್ಯ ಪಿತಾಂಬರನ್, ಸಂಯುಕ್ತ ಸಮಿತಿ ಜಿಲ್ಲಾಧ್ಯಕ್ಷ ಟಿ.ವಿ.ಸುರೇಶ್ ಮಾತನಾಡಿದರು. ಸಯುಂಕ್ತ ಸಮಿತಿ ಜತೆ ಕಾರ್ಯದರ್ಶಿ ಎ.ಸಲೀಂ ಸ್ವಾಗತಿಸಿದರು.
ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ ನೌಕರರ ಸಂಯುಕ್ತ ಸಮಿತಿ ಗುರುವಾರ ಶಿಕ್ಷಣ ನಿರ್ದೇಶಕರ ಕಚೇರಿ ಎದುರು ಧರಣಿ ಉದ್ಘಾಟಿಸಿ ಅವರು ಮಾತನಾಡಿದರು. ಪಠ್ಯಪುಸ್ತಕ ಕಚೇರಿಗಳನ್ನು ರದ್ದುಗೊಳಿಸುವ ತೀರ್ಮಾನವನ್ನು ಕೈಬಿಡಬೇಕು, ಮಧ್ಯಾಹ್ನದೂಟದ ಮೇಲ್ನೋಟ ವಹಿಸುವುದಕ್ಕಾಗಿ ಎಇಒ-ಡಿಇಒ ಕಚೇರಿಗಳಲ್ಲಿ ಸೂಪರ್ವೈಸರ್ ಹುದ್ದೆಯನ್ನು ಸೃಷ್ಟಿಸಬೇಕು ಮುಂತಾದ ಬೇಡಿಕೆಗಳನ್ನು ಮಂದಿಟ್ಟುಕೊಂಡು ಧರಣಿ ನಡೆಯಿತು.
ರಾಜ್ಯದಲ್ಲಿ ಪಠ್ಯಪುಸ್ತಕ ವಿತರಣೆಗಾಗಿರುವ ಪಠ್ಯಪುಸ್ತಕ ಕಚೇರಿಯನ್ನು ರದ್ದುಗೊಳಿಸುವ ಕೇರಳ ಸರಕಾರದ ತೀರ್ಮಾನ ಖಂಡನೀಯವಾಗಿದೆ. ಇದರಿಂದಾಗಿ ಈ ವಲಯದಲ್ಲಿ ದುಡಿಯುತ್ತಿರುವವ ರಿಗೆ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಎಲ್ಲಾ ಆದೇಶಗಳನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು. ರಾಜ್ಯ ಸಮಿತಿ ಕಾರ್ಯಕಾರಿ ಸದಸ್ಯ ಕೆ.ರವೀಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಎನ್ಜಿಒ ಯೂನಿಯನ್ ಸಮಿತಿ ಸದಸ್ಯ ಪಿತಾಂಬರನ್, ಸಂಯುಕ್ತ ಸಮಿತಿ ಜಿಲ್ಲಾಧ್ಯಕ್ಷ ಟಿ.ವಿ.ಸುರೇಶ್ ಮಾತನಾಡಿದರು. ಸಯುಂಕ್ತ ಸಮಿತಿ ಜತೆ ಕಾರ್ಯದರ್ಶಿ ಎ.ಸಲೀಂ ಸ್ವಾಗತಿಸಿದರು.