ಆ್ಯಪ್ನಗರ

ಕಾಸರಗೋಡು: ದುಬೈನಿಂದ ತಂದ 1.2ಕೆಜಿ ಚಿನ್ನ ವಶ, ಇಬ್ಬರ ಬಂಧನ

ವಿದೇಶದಿಂದ ತಂದ ಸುಮಾರು 35 ಲಕ್ಷ ರೂ. ಮೌಲ್ಯದ 1.20 ಕೆ.ಜಿ. ಚಿನ್ನವನ್ನು ಮತ್ತೊಬ್ಬರಿಗೆ ಹಸ್ತಾಂತರಿಸುವ ಸಂದರ್ಭ ಕಾಸರಗೋಡು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು, ಇಬ್ಬರನ್ನು ಬಂಧಿಸಿದ ಘಟನೆ ಸೋಮವಾರ ನಡೆದಿದೆ.

Vijaya Karnataka 4 Sep 2018, 7:27 am
ಕಾಸರಗೋಡು: ವಿದೇಶದಿಂದ ತಂದ ಸುಮಾರು 35 ಲಕ್ಷ ರೂ. ಮೌಲ್ಯದ 1.20 ಕೆ.ಜಿ. ಚಿನ್ನವನ್ನು ಮತ್ತೊಬ್ಬರಿಗೆ ಹಸ್ತಾಂತರಿಸುವ ಸಂದರ್ಭ ಕಾಸರಗೋಡು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು, ಇಬ್ಬರನ್ನು ಬಂಧಿಸಿದ ಘಟನೆ ಸೋಮವಾರ ನಡೆದಿದೆ.
Vijaya Karnataka Web Gold


ನಗರದ ನೆಲ್ಲಿಕುಂಜೆ ನಿವಾಸಿ ಅಬ್ದುಲ್‌ ಶಾಹಿದ್‌ (28) ಹಾಗೂ ವಿದ್ಯಾನಗರ ಚಾಲ ನಿವಾಸಿ ಶಮೀರ್‌ (30) ಬಂಧಿತರು.

ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣ ಮೂಲಕ ಆಗಮಿಸಿದ ಆರೋಪಿ ಅಬ್ದುಲ್‌ ಶಾಹಿದ್‌ ಈ ಚಿನ್ನವನ್ನು ಕಾಸರಗೋಡಿಗೆ ತಂದು ನಗರದ ಹೊಸ ಬಸ್‌ ನಿಲ್ದಾಣ ಬಳಿ ಶಮೀರ್‌ಗೆ ಹಸ್ತಾಂತರಿಸುವ ವೇಳೆ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

ದುಬೈನಲ್ಲಿಯ ಚಿನ್ನ ಸಾಗಾಟದಾರರು ಅಬ್ದುಲ್‌ ಶಾಹಿದ್‌ಗೆ ಚಿನ್ನವನ್ನು ನೀಡಿದ್ದು, ಆತ ಕ್ಯಾರಿಯರ್‌ ಆಗಿ ಅದನ್ನು ಕಾಸರಗೋಡಿಗೆ ತಂದಿರುವ ಬಗ್ಗೆ ಶಂಕೆಗಳಿವೆ. ಹೀಗೆ ಕ್ಯಾರಿಯರ್‌ ತರುವ ಏಜೆಂಟರಿಗೆ ಕಳ್ಳ ಸಾಗಾಟದಾರರು ಉಚಿತವಾಗಿ ಟಿಕೆಟ್‌ ಮತ್ತು ಕಮಿಷನ್‌ ಹಣವನ್ನು ನೀಡುತ್ತಾರೆ.

ಫ್ಲಾಸ್ಕ್‌ನೊಳಗೆ ಚಿಕ್ಕ ಕಂಬಿಗಳಂತೆ ಮತ್ತು ಟಿನ್‌ಶಿಟ್‌ಗಳ ರೀತಿಯಲ್ಲಿ ಚಿನ್ನವನ್ನು ಅಡಗಿಸಿಡಲಾಗಿತ್ತು. ಈ ಬಗ್ಗೆ ಗುಪ್ತ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಬಳಿಕ ಜಾಮೀನಿನಲ್ಲಿ ಬಿಡಲಾಯಿತು. ಚಿನ್ನವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ