ಆ್ಯಪ್ನಗರ

ವಲಿಯಪರಂಬದಲ್ಲಿ 40 ಕೋಟಿ ರೂ.ನ ಯೋಜನೆ

ಪ್ರಕೃತಿ ವಿಕೋಪ ಎದುರಿಸುತ್ತಿರುವ ವಲಿಯಪರಂಬ ದ್ವೀಪದಲ್ಲಿ ಸಣ್ಣ ಬೋಟು ಲಂಗರು ಇಡುವ ಸ್ಥಳಗಳನ್ನು ನಿರ್ಮಿಸಲು 40 ಕೋಟಿ ರೂ.ನ ಯೋಜನೆಯನ್ನು ಸರಕಾರಕ್ಕೆ ಸಲ್ಲಿಸಿರುವುದಾಗಿ ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ಬಾಬು ತಿಳಿಸಿದ್ದಾರೆ.

Vijaya Karnataka 16 Jul 2019, 5:00 am
ಕಾಸರಗೋಡು: ಪ್ರಕೃತಿ ವಿಕೋಪ ಎದುರಿಸುತ್ತಿರುವ ವಲಿಯಪರಂಬ ದ್ವೀಪದಲ್ಲಿ ಸಣ್ಣ ಬೋಟು ಲಂಗರು ಇಡುವ ಸ್ಥಳಗಳನ್ನು ನಿರ್ಮಿಸಲು 40 ಕೋಟಿ ರೂ.ನ ಯೋಜನೆಯನ್ನು ಸರಕಾರಕ್ಕೆ ಸಲ್ಲಿಸಿರುವುದಾಗಿ ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ಬಾಬು ತಿಳಿಸಿದ್ದಾರೆ.
Vijaya Karnataka Web 40 crore plan at valiyaparamba
ವಲಿಯಪರಂಬದಲ್ಲಿ 40 ಕೋಟಿ ರೂ.ನ ಯೋಜನೆ


ನಿರ್ಮಾಣ ಹಂತದಲ್ಲಿರುವ ಮಾವಿಲಕಡಪ್ಪುರದ ಬೋಟ್‌ ಟರ್ಮಿನಲ್‌, ಪ್ರಕೃತಿ ವಿಕೋಪ ಎದುರಿಸುತ್ತಿರುವ ವಲಿಯಪರಂಬ ಕರಾವಳಿ ಪ್ರದೇಶವನ್ನು ಸಂದರ್ಶಿಸಲು ಅವರು ತಲುಪಿದ್ದರು. ಪ್ರಕೃತಿ ವಿಕೋಪದಿಂದ ಪ್ರತಿ ವರ್ಷ ದಡವನ್ನು ಸಮುದ್ರ ನುಗ್ಗುತ್ತಿದೆ. ಸಮುದ್ರದಿಂದ 150 ಮೀಟರ್‌ ಬಿಟ್ಟು ನಿರ್ಮಿಸಿದ ಕರಾವಳಿ ರಸ್ತೆ, ಸಮುದ್ರ ಪರಸ್ಪರ ಈಗಲೂ 20 ಮೀಟರ್‌ಗಿಂತ ಕಡಿಮೆ ದೂರವಾಗಿದೆ. ಪ್ರಕೃತಿ ವಿಕೋಪದಿಂದ ಹಲವಾರು ತೆಂಗಿನಮರಗಳು ಈ ಬಾರಿ ಸಮುದ್ರ ಪಾಲಾಗಿವೆ. ಈ ಹಿನ್ನಲೆಯಲ್ಲಿ ಮಾವಿಲಕಡಪ್ಪ್ಪುರದಿಂದ ಏಯಿಮಲ ತೀರದ ವರೆಗೆ ಸಣ್ಣ ಬೋಟು ಲಂಗರು ಇಡುವ ಸ್ಥಳಗಳನ್ನು ನಿರ್ಮಿಸಲಿರುವ ಯೋಜನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ.

ಬೋಟು ಲಂಗರು ಇಡುವ ಸ್ಥಳವನ್ನು ನಿರ್ಮಿಸಿದರೆ ಕಡಲ್ಕೊರೆತವನ್ನು ಇಲ್ಲವಾಗಿಸಬಹುದಾದುದರಿಂದ ಯೋಜನೆ ತಯಾರಿಸಲಾಗಿದೆ. ವಲಿಯಪರಂಬದಲ್ಲಿ ಕೇಂದ್ರ ಸಹಾಯದೊಂದಿಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಜಾರಿಗೊಳಿಸುವ ಮಾದರಿ ಪ್ರವಾಸೋದ್ಯಮ ಯೋಜನೆಯ ಅಂಗವಾಗಿ ಮಾವಿಲಕಡಪ್ಪುರದಲ್ಲಿ 3.27 ಕೋಟಿ ರೂ. ವಿನಿಯೋಗಿಸಿ ನಿರ್ಮಿಸುವ ಆಧುನಿಕ ವಿಧಾನದಲ್ಲಿರುವ ಬೋಟ್‌ ಟರ್ಮಿನಲ್‌ನ ನಿರ್ಮಾಣ ಕಾಮಗಾರಿಯನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು.

ಹಂತ ಹಂತವಾಗಿ ನಿರ್ಮಾಣ ಕಾಮಗಾರಿ ಪೂರ್ತಿಗೊಳಿಸಿ ಪ್ರವಾಸಿಗಳಿಗೆ ತೆರೆದು ನೀಡಲಿರುವ ಕಾರ್ಯಾಚರಣೆಗೆ ಆದ್ಯತೆ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ವಲಿಯಪರಂಬ ದ್ವೀಪದಲ್ಲಿ ನಡೆಯುವ ಅನಧಿಕೃತವಾಗಿ ಮರಳುಗಾರಿಕೆ ನಡೆಸುವ ಪ್ರದೇಶಗಳು, ಮರಳುಗಾರಿಕೆಯಿಂದ ಸಂಭವಿಸುವ ಸಮಸ್ಯೆಗಳನ್ನು ನಾಗರಿಕರು ಜಿಲ್ಲಾಧಿಕಾರಿಯ ಗಮನಕ್ಕೆ ತಂದರು. ಅನಧಿಕೃತ ಮರಳುಗಾರಿಕೆ ಸಂಬಂಧಿಸಿ ಜಿಲ್ಲಾಧಿಕಾರಿ ಕಳೆದ ವಾರ ಸಂಬಂಧಪಟ್ಟವರ ಸಭೆಯನ್ನು ನಡೆಸಿದ್ದರು. ವಲಿಯಪರಂಬ ಗ್ರಾಮ ಪಂಚಾಯಿತಿ ಗ್ರಾಮ ಅಧ್ಯಕ್ಷ ಎಂ.ಟಿ. ಅಬ್ದುಲ್‌ ಜಬ್ಬಾರ್‌, ಇನ್‌ಲ್ಯಾಂಡ್‌ ನೇವಿಗೇಶನ್‌ ಸಹಾಯಕ ಎಂಜಿನಿಯರ್‌, ಜಿಲ್ಲಾ ಪ್ರವಾಸೋದ್ಯಮ ಭಡ್ತಿ ಸಮಿತಿ ಕಾರ್ಯದರ್ಶಿ ಜಿಲ್ಲಾಧಿಕಾರಿಗಳೊಂದಿಗೆ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ