ಕಾಸರಗೋಡು: ಕೇರಳದಲ್ಲಿ ನಾನೂರರಷ್ಟು ಅನಾಥಾಲಯಗಳು ಮುಚ್ಚುವ ಭೀತಿಯಲ್ಲಿವೆ. ರಾಜ್ಯದಲ್ಲಿ ಬಾಲ ಹಕ್ಕು ಕಾನೂನು ಜಾರಿಗೊಳಿಸುವುದರ ಅಂಗವಾಗಿ ವ್ಯವಸ್ಥೆಗಳನ್ನು ಕಟ್ಟುನಿಟ್ಟುಗೊಳಿಸಿದ ಹಿನ್ನೆಲೆಯಲ್ಲಿ ಅನಾಥಾಶ್ರಮಗಳನ್ನು ನಡೆಸಲು ಸಾಧ್ಯವಾಗದ ಕಾರಣ ಮುಚ್ಚಲು ತೀರ್ಮಾಸಲಾಗಿದೆ.
ಮಾರ್ಚ್ ಕೊನೆಯಲ್ಲಿ ಈ ವರ್ಷದ ಶೈಕ್ಷ ಣಿಕ ಅಧ್ಯಯನ ಮುಕ್ತಾಯಗೊಳ್ಳುವಾಗ ಅನೇಕ ಅನಾಥಾಶ್ರಮಗಳು ಈಗಾಗಲೇ ಆರ್ಫನೇಜ್ ಕಂಟ್ರೋಲ್ ಬೋರ್ಡ್ ಹಾಗೂ ಸರಕಾರಕ್ಕೆ ಲಿಖಿತವಾಗಿ ತಿಳಿಸಲಾಗಿದೆ. ಬೇಸಿಗೆ ರಜೆಯಲ್ಲಿ ತೆರಳುವ ವಿದ್ಯಾರ್ಥಿಗಳು ತಿರುಗಿ ಅನಾಥಾಶ್ರಮಕ್ಕೆ ಬರುವುದು ಬೇಡ ಎಂದು ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
ಬಾಲಹಕ್ಕು ಕಾನೂನು ಅನುಷ್ಠಾನಗೊಳಿಸುವ ಸಲುವಾಗಿ ಉಂಟಾಗುವ ಪ್ರಾಯೋಗಿಕ ಸಮಸ್ಯೆಗಳನ್ನು ಪರಿಹರಿಸಲು ನಿಯಮಗಳನ್ನು ರಚಿಸಲು ಸಾಮಾಜಿಕ ನ್ಯಾಯ ಇಲಾಖೆ ಈ ಮೊದಲೇ ಭರವಸೆ ನೀಡಿದರೂ ಈ ತನಕ ಅದನ್ನು ಪಾಲಿಸಿಲ್ಲ. ಮಕ್ಕಳ ಹಕ್ಕು ಕಾನೂನು ಪ್ರಕಾರ ನೋಂದಾಯಿಸಿದ ಸಂಸ್ಥೆಗಳಿಗೆ ಭರವಸೆ ನೀಡಿದ ಆರ್ಥಿಕ ಸಹಾಯವನ್ನೂ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅನಾಥಾಶ್ರಮ ನಡೆಸುವ ಸಂಸ್ಥೆಗಳು ಇನ್ನು ಮುಚ್ಚುವುದಲ್ಲದೆ ಬೇರೆ ದಾರಿ ಕಾಣದೆ ಮುಂದಿನ ಶೈಕ್ಷ ಣಿಕ ವರ್ಷದಿಂದ ಇಲ್ಲಿಗೆ ಬಾರದಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ.
ಸಮಸ್ತ ಸಂಘಟನೆ ನೀಡಿದ ಕೇಸ್ನಲ್ಲಿ ಸುಪ್ರೀಂ ಕೋರ್ಟ್ ಯಥಾ ಸ್ಥಿತಿಯನ್ನು ಮುಂದುವರಿಸುವಂತೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮುಸ್ಲಿಂ ಯತೀಂಖಾನಗಳಿಗೆ ತಾತ್ಕಾಲಿಕವಾಗಿ ಯಾವುದೇ ಸಮಸ್ಯೆ ಇಲ್ಲ. ಆದರೆ ಉಳಿದ ಸುಮಾರು ನಾನೂರರಷ್ಟು ಅನಾಥಾಶ್ರಮಗಳು ಮುಚ್ಚುವ ಭೀತಿ ಎದುರಿಸುತ್ತಿವೆ. ಕಳೆದ ಒಂದು ವರ್ಷದಲ್ಲಿ ಸುಮಾರು 334 ಅನಾಥಾಶ್ರಮಗಳು ಮುಚ್ಚಿವೆ. ಆ ಮೂಲಕ ಸಾವಿರಾರು ವಿದ್ಯಾರ್ಥಿಗಳು ಸಮಸ್ಯೆಗೊಳಗಾಗಿದ್ದಾರೆ. ಆದರೆ ಸರಕಾರ ಈ ತನಕ ಈ ವಿಷಯವನ್ನು ಅಷ್ಟು ಗೌರವವಾಗಿ ತೆಗೆದುಕೊಂಡಿಲ್ಲ.
ಮಾರ್ಚ್ ಕೊನೆಯಲ್ಲಿ ಈ ವರ್ಷದ ಶೈಕ್ಷ ಣಿಕ ಅಧ್ಯಯನ ಮುಕ್ತಾಯಗೊಳ್ಳುವಾಗ ಅನೇಕ ಅನಾಥಾಶ್ರಮಗಳು ಈಗಾಗಲೇ ಆರ್ಫನೇಜ್ ಕಂಟ್ರೋಲ್ ಬೋರ್ಡ್ ಹಾಗೂ ಸರಕಾರಕ್ಕೆ ಲಿಖಿತವಾಗಿ ತಿಳಿಸಲಾಗಿದೆ. ಬೇಸಿಗೆ ರಜೆಯಲ್ಲಿ ತೆರಳುವ ವಿದ್ಯಾರ್ಥಿಗಳು ತಿರುಗಿ ಅನಾಥಾಶ್ರಮಕ್ಕೆ ಬರುವುದು ಬೇಡ ಎಂದು ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
ಬಾಲಹಕ್ಕು ಕಾನೂನು ಅನುಷ್ಠಾನಗೊಳಿಸುವ ಸಲುವಾಗಿ ಉಂಟಾಗುವ ಪ್ರಾಯೋಗಿಕ ಸಮಸ್ಯೆಗಳನ್ನು ಪರಿಹರಿಸಲು ನಿಯಮಗಳನ್ನು ರಚಿಸಲು ಸಾಮಾಜಿಕ ನ್ಯಾಯ ಇಲಾಖೆ ಈ ಮೊದಲೇ ಭರವಸೆ ನೀಡಿದರೂ ಈ ತನಕ ಅದನ್ನು ಪಾಲಿಸಿಲ್ಲ. ಮಕ್ಕಳ ಹಕ್ಕು ಕಾನೂನು ಪ್ರಕಾರ ನೋಂದಾಯಿಸಿದ ಸಂಸ್ಥೆಗಳಿಗೆ ಭರವಸೆ ನೀಡಿದ ಆರ್ಥಿಕ ಸಹಾಯವನ್ನೂ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅನಾಥಾಶ್ರಮ ನಡೆಸುವ ಸಂಸ್ಥೆಗಳು ಇನ್ನು ಮುಚ್ಚುವುದಲ್ಲದೆ ಬೇರೆ ದಾರಿ ಕಾಣದೆ ಮುಂದಿನ ಶೈಕ್ಷ ಣಿಕ ವರ್ಷದಿಂದ ಇಲ್ಲಿಗೆ ಬಾರದಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ.
ಸಮಸ್ತ ಸಂಘಟನೆ ನೀಡಿದ ಕೇಸ್ನಲ್ಲಿ ಸುಪ್ರೀಂ ಕೋರ್ಟ್ ಯಥಾ ಸ್ಥಿತಿಯನ್ನು ಮುಂದುವರಿಸುವಂತೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮುಸ್ಲಿಂ ಯತೀಂಖಾನಗಳಿಗೆ ತಾತ್ಕಾಲಿಕವಾಗಿ ಯಾವುದೇ ಸಮಸ್ಯೆ ಇಲ್ಲ. ಆದರೆ ಉಳಿದ ಸುಮಾರು ನಾನೂರರಷ್ಟು ಅನಾಥಾಶ್ರಮಗಳು ಮುಚ್ಚುವ ಭೀತಿ ಎದುರಿಸುತ್ತಿವೆ. ಕಳೆದ ಒಂದು ವರ್ಷದಲ್ಲಿ ಸುಮಾರು 334 ಅನಾಥಾಶ್ರಮಗಳು ಮುಚ್ಚಿವೆ. ಆ ಮೂಲಕ ಸಾವಿರಾರು ವಿದ್ಯಾರ್ಥಿಗಳು ಸಮಸ್ಯೆಗೊಳಗಾಗಿದ್ದಾರೆ. ಆದರೆ ಸರಕಾರ ಈ ತನಕ ಈ ವಿಷಯವನ್ನು ಅಷ್ಟು ಗೌರವವಾಗಿ ತೆಗೆದುಕೊಂಡಿಲ್ಲ.