ಆ್ಯಪ್ನಗರ

ಕಾಸರಗೋಡಲ್ಲಿ ಮದುವೆ ದಿಬ್ಬಣ ಬಸ್ ಅಪಘಾತ: ಇಬ್ಬರು ಮಕ್ಕಳ ಸಹಿತ 7 ಮಂದಿ ಮೃತ!

ಕರ್ನಾಟಕದ ಸುಳ್ಯದಿಂದ ಕಾಸರಗೋಡು ಪಾಣತ್ತೂರಿನ ಎಳ್ಳುಕೊಚ್ಚಿಗೆ ಮದುವೆ ದಿಬ್ಬಣದೊಂದಿಗೆ ತೆರಳುತ್ತಿದ್ದ ಬಸ್ ಮಗುಚಿ ಬಿದ್ದು ಇಬ್ಬರು ಮಕ್ಕಳ ಸಹಿತ 7 ಮಂದಿ ಮೃತಪಟ್ಟಿದ್ದಾರೆ. 15ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.

Vijaya Karnataka Web 3 Jan 2021, 4:39 pm
ಕಾಸರಗೋಡು: ಕರ್ನಾಟಕದ ಸುಳ್ಯದಿಂದ ಕಾಸರಗೋಡು ಪಾಣತ್ತೂರಿನ ಎಳ್ಳುಕೊಚ್ಚಿಗೆ ಮದುವೆ ದಿಬ್ಬಣದೊಂದಿಗೆ ತೆರಳುತ್ತಿದ್ದ ಬಸ್ ಮಗುಚಿ ಬಿದ್ದು ಇಬ್ಬರು ಮಕ್ಕಳ ಸಹಿತ 7 ಮಂದಿ ಮೃತಪಟ್ಟಿದ್ದಾರೆ.
Vijaya Karnataka Web kasaragodu accident


ಮದುವೆಗೆಂದು ತೆರಳುತ್ತಿದ್ದ ಬಸ್‌ ಪೆರಿಯಾರಂ ಎಂಬಲ್ಲಿನ ತಿರುವು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಮನೆಯ ಮೇಲೆ ಮಗುಚಿ ಭೀಕರ ಅಪಘಾತ ನಡೆದಿದೆ. ಇದರ ಪರಿಣಾಮ ಇಬ್ಬರು ಮಕ್ಕಳ ಸಹಿತ 7 ಮಂದಿ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಬಸ್‌ನಲ್ಲಿದ್ದವರು ಎಲ್ಲರೂ ಸುಳ್ಯ, ಪುತ್ತೂರು, ಈಶ್ವರಮಂಗಲದ ಪ್ರದೇಶದವರಾಗಿದ್ದಾರೆ. 15 ಮಂದಿ ಗಾಯಾಳುಗಳ ಪೈಕಿ 8 ಮಂದಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಸರಗೋಡಲ್ಲಿ ಚರಂಡಿ ನಿರ್ಮಿಸುವಾಗ ಗೋಚರಿಸಿತು ಬೃಹತ್‌ ಗುಹೆ!

ಸಣ್ಣಪುಟ್ಟ ಗಾಯಗೊಂಡವರನ್ನು ಕಾಞಂಗಾಡಿನ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಸ್‌ನಲ್ಲಿ ಸುಮಾರು 50ಕ್ಕಿಂತಲೂ ಅಧಿಕ ಮಂದಿ ಸಂಚರಿಸುತ್ತಿದ್ದರು ಎನ್ನಲಾಗಿದೆ.

ಮೃತಪಟ್ಟವರಲ್ಲಿ ಸುಳ್ಯ ನಿವಾಸಿಗಳಾದ ಶ್ರೇಯಾಸ್(13), ರವಿಚಂದ್ರನ್(40), ರಾಜೇಶ್ (45), ಸುಮತಿ (50), ಜಯಲಕ್ಷ್ಮೀ (39) ಇವರ ಮೃತದೇಹವನ್ನು ಪನತ್ತಡಿಯ ಪುಡಂಕಲ್ಲು ತಾಲೂಕು ಆಸ್ಪತ್ರೆಯಲ್ಲೂ, ಆದಶ್(12) ಎಂಬವರ ಮೃತದೇಹವನ್ನು ಕಾಞಂಗಾಡು ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದೆ. ಮಂಗಳೂರಿಗೆ ಕೊಂಡೊಯ್ಯುವ ಮಧ್ಯೆ ಮೃತಪಟ್ಟವನ್ನು ಶಶಿ(35) ಎಂದು ಗುರುತಿಸಲಾಗಿದೆ.

ಸುಳ್ಯದಿಂದ ಪಾಣತ್ತೂರಿಗೆ ತೆರಳುತ್ತಿದ್ದ ಬಸ್ ಪೆರಿಯಾರಂ ಎಂಬಲ್ಲಿ ನಿಯಂತ್ರಣ ತಪ್ಪಿ ಪರಿಣಾಮ ಜೋಸ್ ಎಂಬವರ ಮನೆಯ ಮೇಲೆ ಬಿದ್ದಿರುವ ಪರಿಣಾಮ ಮನೆ ಭಾಗಶಃ ಜಖಂ ಆಗಿದೆ.

ಕಾಸರಗೋಡಿನಲ್ಲಿ ಬಾರ್‌ಗಳನ್ನು ತೆರೆಯಲು ಆದೇಶ

ಮನೆಯೊಳಗೆ ಯಾರೂ ಇರಲಿಲ್ಲ. ಭಾನುವಾರ ಮಧ್ಯಾಹ 12ಗಂಟೆಯ ಸುಮಾರಿಗೆ ಘಟನೆ ನಡೆದಿರುವುದು.
ಅಪಘಾತ ನಡೆದ ಕೂಡಲೇ ಕುತ್ತಿಕೋಳ್, ಕಾಞಂಗಾಡು ಎಂಬೀಡೆಗಳಿಂದ ಅಗ್ನಿಶಾಮಕದಳ ಹಾಗೂ ಆಂಬುಲೆನ್ಸ್ ಸಹಾಯದೊಂದಿಗೆ ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲು ಸಾಧ್ಯವಾಗಿದೆ.

ಬಸ್ ಅಪಘಾತದಲ್ಲಿ ಮೃತಪಟ್ಟವರ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದು, ಸೂಕ್ತ ಚಿಕಿತ್ಸೆ ನೀಡುವುದಕ್ಕೆ ನಿರ್ದೇಶನ ನೀಡಿದ್ದಾರೆ. ಬಸ್ ಅಪಘಾತದ ಬಗ್ಗೆ ಪ್ರಾಥಮಿಕ ವರದಿ ನೀಡುವಂತೆ ಕಾಞಂಗಾಡು ಉಪಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗಿದೆ.

ಕೊಚ್ಚಿ- ಮಂಗಳೂರು ಗ್ಯಾಸ್ ಪೈಪ್‍ಲೈನ್‍ಗೆ ಜ. 5ರಂದು ಪ್ರಧಾನಿ ಚಾಲನೆ

ಪಾಣತ್ತೂರು ಬಸ್ ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಎಲ್ಲಾ ವ್ಯವಸ್ಥೆಯನ್ನು ಕಾಞಂಗಾಡು ಜಿಲ್ಲಾಸ್ಪತ್ರೆಯಲ್ಲಿ ಸಜ್ಜುಗೊಳಿಸಲಾಗಿದೆ. ಇನ್ನು ಹೆಚ್ಚಿನ ಚಿಕಿತ್ಸೆ ಸೌಲಭ್ಯಕ್ಕಾಗಿ ಕಾಸರಗೋಡು ಜಿಲ್ಲಾಕಾರಿಗೆ ನಿರ್ದೇಶ ನೀಡಲಾಗಿದೆ.
-ಇ.ಚಂದ್ರಶೇಖರನ್, ಕೇರಳ ರಾಜ್ಯ ಕಂದಾಯ ಖಾತೆ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ