ಆ್ಯಪ್ನಗರ

Cyber Fraud - ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ವ್ಯಕ್ತಿಯಿಂದ ಮಹಿಳೆಗೆ 7 ಲಕ್ಷ ರೂ. ಪಂಗನಾಮ!

ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯಗೊಂಡ ವ್ಯಕ್ತಿಯೊಬ್ಬ ಕಾಸರಗೋಡಿನ ಮಹಿಳೆಯೊಬ್ಬರಿಗೆ 7 ಲಕ್ಷಕ್ಕೂ ಅಧಿಕ ಹಣ ಪಂಗನಾಮ ಹಾಕಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಉತ್ತರಪ್ರದೇಶ ರಾಯ್‌ ಬರೇಲಿ ನಿವಾಸಿ ಮೊಹಮ್ಮದ್‌ ಶಾರೀಕ್‌ (19) ಎಂಬ ಆರೋಪಿಯ ಎಲ್ಲ ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಪೊಲೀಸರು , ವಂಚನಾ ಜಾಲದಲ್ಲಿ ನೈಜೀರಿಯದ ಆನ್‌ಲೈನ್‌ ವಂಚಕರ ತಂಡ ಒಳಗೊಂಡಿರುವ ಸಂಶಯ ವ್ಯಕ್ತಪಡಿಸಿದ ಪೊಲೀಸರು ಈ ನಿಟ್ಟಿನಲ್ಲೂ ತನಿಖೆ ಆರಂಭಿಸಿದ್ದಾರೆ.

Edited byGanesh | Vijaya Karnataka Web 26 Nov 2022, 10:16 pm

ಹೈಲೈಟ್ಸ್‌:

  • ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯಗೊಂಡ ವ್ಯಕ್ತಿಯೊಬ್ಬ ಕಾಸರಗೋಡಿನ ಮಹಿಳೆಯೊಬ್ಬರಿಗೆ 7 ಲಕ್ಷಕ್ಕೂ ಅಧಿಕ ಹಣ ಪಂಗನಾಮ
  • ಉತ್ತರಪ್ರದೇಶ ರಾಯ್‌ ಬರೇಲಿ ನಿವಾಸಿ ಮೊಹಮ್ಮದ್‌ ಶಾರೀಕ್‌ (19) ಎಂಬ ಆರೋಪಿಯ ಎಲ್ಲ ಬ್ಯಾಂಕ್‌ ಖಾತೆ ಮುಟ್ಟುಗೋಲು
  • ಹರಿಯಾಣದಲ್ಲಿ ಒಂದೇ ಆಧಾರ್‌ ಕಾರ್ಡ್‌ ಬಳಸಿ 8 ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದ ಮೊಹಮ್ಮದ್‌ ಶಾರೀಕ್‌
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Cyber crime
ಪ್ರಾತಿನಿಧಿಕ ಚಿತ್ರ
ಕಾಸರಗೋಡು: ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯ ಮಾಡಿಕೊಂಡು ಮಹಿಳೆಯೊಬ್ಬರಿಂದ 7 ಲಕ್ಷ ರೂ. ಲಪಟಾಯಿಸಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯಿಂದ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಉತ್ತರಪ್ರದೇಶ ರಾಯ್‌ ಬರೇಲಿ ನಿವಾಸಿ ಮೊಹಮ್ಮದ್‌ ಶಾರೀಕ್‌ (19) ಎಂಬ ಆರೋಪಿಯ ಎಲ್ಲ ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಪೊಲೀಸರು , ವಂಚನಾ ಜಾಲದಲ್ಲಿ ನೈಜೀರಿಯದ ಆನ್‌ಲೈನ್‌ ವಂಚಕರ ತಂಡ ಒಳಗೊಂಡಿರುವ ಸಂಶಯ ವ್ಯಕ್ತಪಡಿಸಿದ ಪೊಲೀಸರು ಈ ನಿಟ್ಟಿನಲ್ಲೂ ತನಿಖೆ ಆರಂಭಿಸಿದ್ದಾರೆ.
ಆರೋಪಿ ಮೊಹಮ್ಮದ್‌ ಶಾರೀಕ್‌ ಹರಿಯಾಣದಲ್ಲಿಒಂದೇ ಆಧಾರ್‌ ಕಾರ್ಡ್‌ ಬಳಸಿ ಎಂಟು ಬ್ಯಾಂಕ್‌ ಖಾತೆಗಳನ್ನು ಹೊಂದಿರುವುದು ಪೊಲೀಸ್‌ ತನಿಖೆಯಲ್ಲಿ ತಿಳಿದುಬಂದಿದೆ. ದೂರುದಾರಳಾದ ಯುವತಿ ಕಳುಹಿಸಿದ ಹಣ ಆತನ ಖಾತೆಯಲ್ಲಿ ಜಮಾ ಆಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿಆರೋಪಿಯ ಎಲ್ಲ ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಸಹಾಯಕನಿಗೆ ಶೋಧ

ಪ್ರಕರಣದಲ್ಲಿಇನ್ನೊಬ್ಬ ಆರೋಪಿ ಭಾಗಿಯಾಗಿರುವುದು ಸೈಬರ್‌ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಬರೇಲಿ ನಿವಾಸಿ ನುಸ್ರತ್‌ ಎಂಬಾತನೂ ಈ ಪ್ರಕರಣದಲ್ಲಿದ್ದು, ನನ್ನ ನಕಲಿ ಇನ್‌ಸ್ಟಾಗ್ರಾಮ್‌ ಖಾತೆಯಿಂದ ಯುವತಿಗೆ ಇಂಗ್ಲಿಷ್‌ನಲ್ಲಿಮೆಸೇಜ್‌ ಮಾಡಿರುವುದು ಈತನೇ ಆಗಿದ್ದಾನೆ ಎಂದು ಮೊಹಮ್ಮದ್‌ ಶಾರೀಕ್‌ ಬಾಯ್ಬಿಟ್ಟಿದ್ದಾನೆ.

ಮೊಹಮ್ಮದ್‌ ಶಾರೀಕ್‌ಗೆ ಹಿಂದಿ ಭಾಷೆ ಮಾತ್ರ ತಿಳಿದಿದ್ದು, ಇಂಗ್ಲಿಷ್‌ ಬರೆಯಲು ತಿಳಿದಿಲ್ಲ. ಇದಕ್ಕಾಗಿ ಈತ ಯುವತಿ ಜತೆ ಇಂಗ್ಲಿಷ್‌ನಲ್ಲಿ ಚಾಟ್‌ ಮಾಡಲು ನುಸ್ರತ್‌ನನ್ನು ಬಳಸಿಕೊಂಡಿದ್ದ.

ಘಟನೆ ಹಿನ್ನೆಲೆ:

ಮಧೂರು ಗ್ರಾಪಂ ವ್ಯಾಪ್ತಿಯ ಸ್ನಾತಕೋತ್ತರ ಪದವೀಧರೆಯಾದ 36ರ ಹರೆಯದ ಮಹಿಳೆಗೆ ಉದ್ಯೋಗ ಲಭಿಸಿರಲಿಲ್ಲ. ಈಕೆಯ ಪತಿ ಕೂಲಿ ಕಾರ್ಮಿಕನಾಗಿದ್ದು, ದಂಪತಿಗೆ ಮಕ್ಕಳಿರಲಿಲ್ಲ. ಇದರಿಂದ ಯುವತಿ ಮಾನಸಿಕವಾಗಿ ನೊಂದಿದ್ದಳು. ಈ ಮಧ್ಯೆ ಯುವತಿಯ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಯುವತಿಯೊಬ್ಬಳ ಹೆಸರಿನಲ್ಲಿ ಸಹಪಾಠಿ ಎಂದು ಹೇಳಿ ಆರೋಪಿ ಮೊಹಮ್ಮದ್‌ ಶಾರೀಕ್‌ ಪರಿಚಯಗೊಂಡಿದ್ದ. ಪ್ಲಸ್‌ ಟುವಿನಲ್ಲಿ ಜತೆಗೆ ಕಲಿತಿರುವುದಾಗಿ ತಿಳಿಸಿ ನಕಲಿ ಖಾತೆಯಲ್ಲಿಆಕೆಯನ್ನು ನಿರಂತರವಾಗಿ ಸಂಪರ್ಕಿಸಿದ್ದ.

Cyber Crime - ಬೆತ್ತಲೆ ವೀಡಿಯೋ ಕಾಲ್ ಕಾಟ:ಸೈಬರ್ ಕಳ್ಳರಿಂದ 10 ಲಕ್ಷ ರೂ.ಗೆ ಮಕ್ಮಲ್ ಟೋಪಿ

ಇನ್‌ಸ್ಟಾಗ್ರಾಮ್‌ ಚಾಟ್‌ ಮಧ್ಯೆ ಯುವತಿ, ತನಗೆ ಗರ್ಭಿಣಿಯಾಗಲು ಸಾಧ್ಯವಾಗುತ್ತಿಲ್ಲಎಂಬುದಾಗಿ ತಿಳಿಸಿದ್ದಳು. ಅಮೆರಿಕದಲ್ಲಿ ತನಗೆ ತಿಳಿದಿರುವ ತಜ್ಞ ವೈದ್ಯರಿದ್ದು, ಅವರಿಗೆ ತಿಳಿಸಿ ಔಷಧ ಕಳುಹಿಸಿ ಕೊಡುವೆ ಎಂದು ಚಾಟ್‌ನಲ್ಲಿ ತಿಳಿಸಲಾಗಿತ್ತು.

ಅಮೆರಿಕದ ವೈದ್ಯರ ಹೆಸರಿನಲ್ಲಿ ಯುವತಿಯನ್ನು ಸಂಪರ್ಕಿಸಿದ ವ್ಯಕ್ತಿ ಔಷಧ ಕಳುಹಿಸಿ ಕೊಡುವುದಾಗಿ ತಿಳಿಸಿದ್ದ. ಈ ಮಧ್ಯೆ ಆಕೆ ಗರ್ಭಿಣಿಯಾಗಿದ್ದು, ಇದನ್ನು ಇನ್‌ಸ್ಟಾಗ್ರಾಂನಲ್ಲಿ ಆರೋಪಿ ಹಾಗೂ ವಾಟ್ಸ್ಯಾಪ್‌ನಲ್ಲಿ ವೈದ್ಯನೆಂದು ತಿಳಿಸಿದ್ದ ವ್ಯಕ್ತಿಗೆ ತಿಳಿಸಿದ್ದಳು.

ಇದಕ್ಕೆ ಉತ್ತರಿಸಿದ ವೈದ್ಯ ಈ ಸಂತೋಷದಿಂದ 15 ಸಾವಿರ ಪೌಂಡ್‌ (49 ಲಕ್ಷ ರೂ.)ನ ಪಾರ್ಸೆಲ್‌ನ್ನು ಕಳುಹಿಸಿ ಕೊಡುವೆ ಎಂದು ತಿಳಿಸಿದ್ದ. ಇದಾದ ಕೆಲವು ದಿನಗಳಲ್ಲಿ ಪಾರ್ಸೆಲ್‌ ಸಂಸ್ಥೆಯ ಹೆಸರಲ್ಲಿ ಯುವತಿಗೆ ಸಂದೇಶ ಬಂದಿದ್ದು, ಪಾರ್ಸೆಲ್‌ ಪಡೆಯಲು 5 ಲಕ್ಷ ರೂ. ಪಾವತಿಸುವಂತೆ ತಿಳಿಸಲಾಗಿತ್ತು. ಯುವತಿ 2.5 ಲಕ್ಷ ರೂ. ಪಾವತಿಸಿ ನಂತರ ಬಾಕಿ ಹಣ ಕಳುಹಿಸಿ ಕೊಡುವೆ ಎಂದು ತಿಳಿಸಿದ್ದಳು.

Cyber Crime: ಜಾರ್ಖಂಡ್‌ನ 'ಜಮ್‌ತಾರಾ' ಜಿಲ್ಲೆ ದೇಶದ ಸೈಬರ್ ಕ್ರೈಂ ರಾಜಧಾನಿ!

ಕಸ್ಟಮ್ಸ್‌ ಕ್ಲಿಯರೆನ್ಸ್‌ಗಾಗಿ 5 ಲಕ್ಷ ರೂ. ಪಾವತಿಸುವಂತೆ ಮತ್ತೆ ಯುವತಿಗೆ ತಿಳಿಸಲಾಗಿದ್ದು, ವೈದ್ಯನೆನ್ನಲಾದ ವ್ಯಕ್ತಿಯನ್ನು ಸಂಪರ್ಕಿಸಿದಾಗ 5 ಲಕ್ಷ ರೂ. ಪಾವತಿಸಿ ಪಾರ್ಸಲ್‌ ಪಡೆಯುವಂತೆ ತಿಳಿಸಿದ್ದ. ಯುವತಿ ತನ್ನಲ್ಲಿದ್ದ ಚಿನ್ನದ ಒಡವೆ ಇತ್ಯಾದಿ ಅಡವಿರಿಸಿ 5 ಲಕ್ಷ ರೂ. ಕಳುಹಿಸಿಕೊಟ್ಟಿದ್ದ. ಇದರೊಂದಿಗೆ ಯುವತಿ ಒಟ್ಟು 7,00,500 ರೂ. ಕಳಿಸಿದ್ದಳು.

ಇದಾದ ಬಳಿಕ ಇನ್‌ಸ್ಟಾಗ್ರಾಮ್‌, ವಾಟ್ಸ್ಯಾಪ್‌ ಖಾತೆಗಳು ಬ್ಲಾಕ್‌ ಆಗಿದ್ದು, ಆರೋಪಿಗಳನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ವಂಚನೆಗೊಳಗಾಗಿರುವುದು ಅರಿವಾಗಿದ್ದು, ಯುವತಿ ಸೈಬರ್‌ಸೆಲ್‌ಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿದ ಸೈಬರ್‌ಸೆಲ್‌ ಪೊಲೀಸರು ತನಿಖೆ ನಡೆಸಿ ಆರೋಪಿಯ ಗುರುತು ಪತ್ತೆಹಚ್ಚಿ ಬಂಧಿಸಿದ್ದಾರೆ.
ಲೇಖಕರ ಬಗ್ಗೆ
Ganesh

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ