ಆ್ಯಪ್ನಗರ

ಕರಿಪುರ್ ವಿಮಾನ ದುರಂತ : ಕಣ್ಣೂರಿನಲ್ಲಿಳಿದ ವಿಮಾನ ಪ್ರಯಾಣಿಕರಿಗೆ ಯುವಕರ ತಂಡದಿಂದ ಫ್ರೀ ಫುಡ್‌ ಸೇವೆ..!

ಆಹಾರ ಸಿದ್ಧಪಡಿಸುತ್ತಿರುವ ಈ ಯುವಕರ ತಂಡದ ಫೊಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ. ಅಲಿಂಡಾ ಮೆರ್ರಿ ಜಾನ್‌ ಎಂಬವರು ತನ್ನ ಟ್ವಿಟರ್‌ನಲ್ಲಿಈ ಫೊಟೋ ಜತೆಗೆ ಅಪಘಾತ ನಡೆದ ಸಂದರ್ಭ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡವರ ಫೊಟೋವನ್ನು ಕೂಡ ಪೋಸ್ಟ್‌ ಮಾಡಿದ್ದಾರೆ.

Vijaya Karnataka Web 11 Aug 2020, 1:40 pm
ಕಾಸರಗೋಡು: ವಂದೇ ಭಾರತ್‌ ಮಿಷನ್‌ನಡಿ ದುಬೈಯಿಂದ ಕೇರಳದ ಕರಿಪೂರ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ರನ್‌ವೇಯಿಂದ ಜಾರಿ ಅಪಘಾತಗೊಂಡು ಇಬ್ಭಾಗವಾಗಿ ಇಬ್ಬರು ಪೈಲಟ್‌ ಸಹಿತ 18 ಮಂದಿ ಮೃತಪಟಿದ್ದರು.
Vijaya Karnataka Web Youths of Kannur


ಮಗಳ ಮದುವೆಗೆ ಕೂಡಿಟ್ಟಿದ್ದ 1 ಲಕ್ಷ ಹಣವನ್ನು ಸಿಎಂ ನಿಧಿಗೆ ನೀಡಿದ ಕಾಸರಗೋಡಿನ ವ್ಯಕ್ತಿ

ಈ ಹಿನ್ನೆಲೆಯಲ್ಲಿ ಕರಿಪೂರ್‌ಗೆ ಶೆಡ್ಯೂಲ್‌ ಆಗಿದ್ದ ಎಲ್ಲ ವಿಮಾನಗಳು ಇದೀಗ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿವೆ. ಕೊರೊನಾ ಹಿನ್ನೆಲೆಯಲ್ಲಿ ಹೋಟೆಲ್‌ಗಳು ಕಾರ್ಯಾಚರಿಸದೇ, ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗದ ಪ್ರಯಾಣಿಕರಿಗಾಗಿ ಕಣ್ಣೂರಿನಲ್ಲಿ ಯುವಕರ ತಂಡವೊಂದು ಆಹಾರ ಸಿದ್ಧಪಡಿಸುತ್ತಿದೆ.

ತಮ್ಮ ಸೀರೆಯನ್ನೇ ಬಿಚ್ಚಿ ಡ್ಯಾಂನಲ್ಲಿ ಮುಳುಗುತ್ತಿದ್ದ ಯುವಕರಿಗೆಸೆದು ಪ್ರಾಣ ಕಾಪಾಡಿದ ಮೂವರು

ಆಹಾರ ಸಿದ್ಧಪಡಿಸುತ್ತಿರುವ ಈ ಯುವಕರ ತಂಡದ ಫೊಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ. ಅಲಿಂಡಾ ಮೆರ್ರಿ ಜಾನ್‌ ಎಂಬವರು ತನ್ನ ಟ್ವಿಟರ್‌ನಲ್ಲಿಈ ಫೊಟೋ ಜತೆಗೆ ಅಪಘಾತ ನಡೆದ ಸಂದರ್ಭ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡವರ ಫೊಟೋವನ್ನು ಕೂಡ ಪೋಸ್ಟ್‌ ಮಾಡಿದ್ದಾರೆ.

ಮಂಗಳೂರಿನ ಭಯಾನಕ ವಿಮಾನ ದುರಂತವನ್ನು ನೆನಪಿಸಿದ ಕೇರಳದ ವಿಮಾನ ಅಪಘಾತ..!

ಟೇಬಲ್‌ ಟಾಪ್‌ ಏರ್‌ಪೋರ್ಟ್‌ ಆಗಿರುವ ಕರಿಪೂರ್‌ನಲ್ಲಿ ದುರಂತ ನಡೆದಿರುವುದರಿಂದ ಅಲ್ಲಿಇಳಿಯಬೇಕಾಗಿದ್ದ ಎಲ್ಲ ವಿಮಾನಗಳು ಕಣ್ಣೂರಿನಲ್ಲಿಇಳಿಯುತ್ತಿವೆ. ಹಾಗಾಗಿ ವಿಮಾನಗಳು ಸಮಯಕ್ಕೆ ಸರಿಯಾಗಿ ತಲುಪುವ ಸಾಧ್ಯತೆ ಇಲ್ಲದ್ದರಿಂದ ಕಣ್ಣೂರಿನ ಮಟ್ಟನ್ನೂರಿನ ಯುವಕರು ಪ್ರಯಾಣಿಕರಿಗಾಗಿ ಆಹಾರ ವ್ಯವಸ್ಥೆ ಮಾಡುವಲ್ಲಿ ನಿರತರಾಗಿದ್ದಾರೆ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ತಿಳಿಸುವ ಈ ಟ್ವೀಟ್‌ ಇದೀಗ ವೈರಲ್‌ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ