ಆ್ಯಪ್ನಗರ

ಮುಚ್ಚುಗಡೆಗೊಂಡ ಎಬಿಸಿ ಕೇಂದ್ರ

ಬೀದಿನಾಯಿಗಳ ಉಪಟಳವನ್ನು ನಿಯಂತ್ರಿಸಲು ಅಧಿಕಾರಿಗಳು ಬಹು ಘೋಷಣೆಯೊಂದಿಗೆ ಆರಂಭಿಸಿದ ಎಬಿಸಿ ಕೇಂದ್ರಗಳನ್ನು ಮುಚ್ಚುಗಡೆಗೊಳಿಸಿರುವುದು ಜನರನ್ನು ಸಮಸ್ಯೆಗೊಳಪಡಿಸಿದೆ.

Vijaya Karnataka 15 Jul 2019, 5:00 am
ಕಾಸರಗೋಡು: ಬೀದಿನಾಯಿಗಳ ಉಪಟಳವನ್ನು ನಿಯಂತ್ರಿಸಲು ಅಧಿಕಾರಿಗಳು ಬಹು ಘೋಷಣೆಯೊಂದಿಗೆ ಆರಂಭಿಸಿದ ಎಬಿಸಿ ಕೇಂದ್ರಗಳನ್ನು ಮುಚ್ಚುಗಡೆಗೊಳಿಸಿರುವುದು ಜನರನ್ನು ಸಮಸ್ಯೆಗೊಳಪಡಿಸಿದೆ.
Vijaya Karnataka Web abc centre locked
ಮುಚ್ಚುಗಡೆಗೊಂಡ ಎಬಿಸಿ ಕೇಂದ್ರ


ಸಂತಾನ ಶಕ್ತಿ ಹರಣ ಚಿಕಿತ್ಸೆಯ ಮೂಲಕ ಬೀದಿನಾಯಿಗಳ ಸಂತಾನಾಭಿವೃದ್ಧಿಯನ್ನು ನಿಯಂತ್ರಿಸಬಹುದು ಎಂದು ಉದ್ದೇಶಿಸಿದ್ದರೂ ಎಬಿಸಿ ಕೇಂದ್ರಗಳು ಮುಚ್ಚುಗಡೆಗೊಂಡಿರುವುದರಿಂದ ಜಿಲ್ಲೆಯಲ್ಲಿ ಮತ್ತೆ ಬೀದಿನಾಯಿಗಳ ಉಪಟಳ ಹೆಚ್ಚುತ್ತಿದೆ. ಜಿಲ್ಲೆಯ ನಾನಾ ಭಾಗಗಳಲ್ಲಿ ಕಳೆದ ಒಂದು ತಿಂಗಳಲ್ಲಿ 92 ಮಂದಿ ನಾಯಿ ಕಡಿತಕ್ಕೊಳಗಾಗಿದ್ದಾರೆ.

ಜಿಲ್ಲೆಯಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಿರುವುದರಿಂದ ಇದನ್ನು ನಿಯಂತ್ರಿಸುವುದಕ್ಕಾಗಿ ಕಾಸರಗೋಡು ಹಾಗೂ ತೃಕರಿಪುರದಲ್ಲಿ ಎಬಿಸಿ ಕೇಂದ್ರಗಳು ಆರಂಭಗೊಂಡಿದ್ದವು. ಆದರೆ ಆರಂಭಗೊಂಡ ಬೆನ್ನಲ್ಲೇ ಕಳೆದ ಡಿಸೆಂಬರ್‌ನಲ್ಲಿ ಕಾಸರಗೋಡು ಹಾಗೂ ತೃಕರಿಪುರದಲ್ಲಿ ಎಬಿಸಿ ಕೇಂದ್ರಗಳನ್ನು ಮುಚ್ಚುಗಡೆಗೊಳಿಸಲಾಯಿತು. ಸರಿಯಾದ ಯೋಜನೆ ಇಲ್ಲದಿರುವುದು ಇದನ್ನು ಮುಚ್ಚಲು ಕಾರಣ ಎಂಬ ಆರೋಪ ಕೇಳಿಬರುತ್ತಿದೆ.

ಈ ಎರಡು ಕೇಂದ್ರಗಳಲ್ಲಿ ಜಿಲ್ಲಾ ಪಂಚಾಯಿತಿ ಮುಂದೆ ಬಂದು 5410 ನಾಯಿಗಳನ್ನು ಸಂತಾನ ಶಕ್ತಿ ಹರಣ ಚಿಕಿತ್ಸೆಗೊಳಪಡಿಸಲಾಗಿತ್ತು. ಇದೇ ಸಂದರ್ಭ ಕರ್ಕಾಟಕ ತಿಂಗಳಲ್ಲಿ ನಾಯಿಗಳ ಪ್ರಜನನ ಕಾಲ ಆರಂಭಗೊಳ್ಳುವುದರೊಂದಿಗೆ ಬೀದಿ ನಾಯಿಗಳ ವಿಹಾರ ಕೇಂದ್ರವಾಗಿ ಜಿಲ್ಲೆ ಮಾರ್ಪಾಡುಗೊಳ್ಳಲಿದೆ ಎಂಬ ಆತಂಕ ಜನರದ್ದಾಗಿದೆ.

ಈ ವರ್ಷ ಇದುವರೆಗೆ ಜಿಲ್ಲೆಯಲ್ಲಿ 1742 ಮಂದಿ ನಾಯಿಗಳ ಕಡಿತಕ್ಕೊಳಗಾಗಿದ್ದಾರೆ. ಕಳೆದ ದಿನ ಮಾತ್ರ ಜಿಲ್ಲೆಯ ನಾನಾ ಪ್ರದೇಶಗಳಲ್ಲಿ 19 ಮಂದಿ ನಾಯಿಗಳ ಕಡಿತಕ್ಕೊಳಗಾಗಿದ್ದಾರೆ. ಬೋವಿಕ್ಕಾನ ಮುಳಿಯಾರು ಭಾಗಗಳಲ್ಲಿ ನಾಲ್ಕು ಮಂದಿಗೆ, ಕಾಞಂಗಾಡು, ಪನತ್ತಡಿ ಭಾಗಗಳಲ್ಲಿ ತಲಾ ಒಬ್ಬರಿಗೆ ನಾಯಿ ಕಡಿತ ಉಂಟಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ