ಆ್ಯಪ್ನಗರ

ಕಣ್ಣೂರಿನಿಂದ ಗಲ್ಫ್‌ಗೆ ಹೆಚ್ಚುವರಿ ವಿಮಾನ ಸೇವೆ

ಕಣ್ಣೂರಿನಿಂದ ಗಲ್ಫ್‌ಗೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಹೆಚ್ಚುವರಿ ವಿಮಾನ ಸೇವೆ ಘೋಷಿಸಿದೆ.

Vijaya Karnataka 25 Jan 2019, 5:00 am
ಕಾಸರಗೋಡು: ಕಣ್ಣೂರಿನಿಂದ ಗಲ್ಫ್‌ಗೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಹೆಚ್ಚುವರಿ ವಿಮಾನ ಸೇವೆ ಘೋಷಿಸಿದೆ.
Vijaya Karnataka Web additional air service to gulf from kannur
ಕಣ್ಣೂರಿನಿಂದ ಗಲ್ಫ್‌ಗೆ ಹೆಚ್ಚುವರಿ ವಿಮಾನ ಸೇವೆ


ಮಸ್ಕತ್‌ನಿಂದ ಬಹರೈನ್‌ ಮೂಲಕ ಕುವೈಟ್‌ನಿಂದ ಕಣ್ಣೂರಿಗೆ ನೂತನ ಸೇವೆಗಳನ್ನು ಆರಂಭಿಸಲಾಗುವುದು. ಕಣ್ಣೂರು-ಶಾರ್ಜಾ ಸರ್ವಿಸ್‌ ಪ್ರತಿದಿನ ಇರಲಿದೆ. ಕಣ್ಣೂರಿನಿಂದ ಅಬುಧಾಬಿ, ದೋಹಾಕ್ಕೆ ಇರುವ ಸರ್ವಿಸ್‌ಗಳನ್ನು ಹೆಚ್ಚಿಸಲಾಗುವುದು ಎಂದು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಸಿಇಒ ಕೆ. ಶ್ಯಾಮ್‌ಪ್ರಸಾದ್‌ ತಿಳಿಸಿದ್ದಾರೆ.

ಮಾ.31ರಿಂದ ನೂತನ ಸರ್ವಿಸ್‌ಗಳನ್ನು ಆರಂಭಿಸಲಾಗುವುದು. ಕಣ್ಣೂರು-ಮಸ್ಕತ್‌ ರೂಟ್‌ನಲ್ಲಿ ಮಂಗಳವಾರ, ಶುಕ್ರವಾರ, ಭಾನುವಾರಗಳಂದು ಸೇವೆ ಇರಲಿದೆ. ಸಂಜೆ 5.35ಕ್ಕೆ ಕಣ್ಣೂರಿನಿಂದ ಹೊರಟ ವಿಮಾನ ಒಮಾನ್‌ ಸಮಯ 7.50ಕ್ಕೆ ಮಸ್ಕತ್‌ಗೆ ತಲುಪಲಿದೆ. ರಾತ್ರಿ 8.50ಕ್ಕೆ ಹಿಂತಿರುಗುವ ವಿಮಾನ ಮರುದಿನ ಮುಂಜಾನೆ 2.05ಕ್ಕೆ ಕಣ್ಣೂರಿಗೆ ತಲುಪಲಿದೆ.

ಬುಧವಾರ, ಶನಿವಾರಗಳಂದು ಬಹರೈನ್‌ ಮೂಲಕ ಕಣ್ಣೂರು-ಕುವೈಟ್‌ ಮಧ್ಯೆ ಸಂಚಾರ ನಡೆಯಲಿದೆ. ಬೆಳಗ್ಗೆ 7.10ಕ್ಕೆ ಕಣ್ಣೂರಿನಿಂದ ಹೊರಡುವ ವಿಮಾನ ಪ್ರಾದೇಶಿಕ ಸಮಯ 9.10ಕ್ಕೆ ಬಹರೈನ್‌ಗೆ ತಲುಪಲಿದೆ. ಅಲ್ಲಿಂದ ಬೆಳಗ್ಗೆ 10.10ಕ್ಕೆ ಕುವೈಟ್‌ಗೆ ತಲುಪಲಿದೆ. ಮಧ್ಯಾಹ್ನ 12.10ಕ್ಕೆ ಕುವೈಟ್‌ನಿಂದ ಹಿಂತಿರುಗಿ ರಾತ್ರಿ 7.10ಕ್ಕೆ ಕಣ್ಣೂರಿಗೆ ತಲುಪಲಿದೆ. ದೋಹಾ-ಕಣ್ಣೂರು ರೂಟ್‌ನಲ್ಲಿ ಶುಕ್ರವಾರ ಇನ್ನು ಸರ್ವಿಸ್‌ ಇರಲಿದೆ. ಇದರಿಂದ ದೋಹಾಕ್ಕೆ ಕಣ್ಣೂರಿನಿಂದ ವಾರದಲ್ಲಿ ಐದು ವಿಮಾನ ಸೇವೆಗಳು ಇರಲಿವೆ.

ಪ್ರಸ್ತುತ ಕಣ್ಣೂರಿನಿಂದ ಶಾರ್ಜಾಕ್ಕೆ ವಾರದಲ್ಲಿ ನಾಲ್ಕು ದಿನ ನಡೆಸುವ ಸರ್ವಿಸ್‌ನ್ನು ಎಲ್ಲ ದಿನ ನಡೆಸಲಾಗುವುದು. ಅಬುಧಾಬಿಗೆ ಸೋಮವಾರ, ಶುಕ್ರವಾರಗಳಂದು ಸರ್ವಿಸ್‌ ಆರಂಭಿಸಲಾಗುವುದು. ಇದರಿಂದ ಕಣ್ಣೂರು-ಅಬುಧಾಬಿ ವಿಮಾನ ಸರ್ವಿಸ್‌ ವಾರದಲ್ಲಿ ಐದು ದಿನ ಇರಲಿದೆ. ಇದರಿಂದ ಕಣ್ಣೂರು-ಗಲ್ಫ್‌ ಸೆಕ್ಟರ್‌ನಲ್ಲಿ ಇರುವ 14 ಸರ್ವಿಸ್‌ಗಳು 24ಕ್ಕೇರಲಿವೆ. ಶುಕ್ರವಾರದಂದು ಕೋಝಿಕ್ಕೋಡು-ರಿಯಾದ್‌ ಮಧ್ಯೆ ಸರ್ವಿಸ್‌ ಆರಂಭಿಸಲು ತೀರ್ಮಾನಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ