ಆ್ಯಪ್ನಗರ

ಮಂಗಳೂರಿನಿಂದ ತಿರುವನಂತಪುರಕ್ಕೆ ಸಿಗ್ನಲ್ ಫ್ರೀ ಮೂಲಕ ಸಾಗಿದ ಆಂಬುಲೆನ್ಸ್

ಸಿಗ್ನಲ್ ಫ್ರೀ ವ್ಯವಸ್ಥೆಗಾಗಿ ಮಗುವಿನ ಕುಟುಂಬಸ್ಥರು ಎನ್‌ಜಿಒ ನೆರವಿನೊಂದಿಗೆ ಸಾಮಾಜಿಕ ತಾಣದಲ್ಲಿ ಪ್ರಚಾರ ಮಾಡಿದ್ದು, ಜನರು ಸಹಕಾರ ನೀಡಿದ್ದಾರೆ.

Vijaya Karnataka Web 16 Apr 2019, 3:26 pm
ಕಾಸರಗೋಡು: ಅನಾರೋಗ್ಯಕ್ಕೀಡಾಗಿದ್ದ 16 ದಿನದ ಮಗುವನ್ನು ಆಂಬುಲೆನ್ಸ್ ಮೂಲಕ ಸಿಗ್ನಲ್ ಫ್ರೀ ವ್ಯವಸ್ಥೆಯಲ್ಲಿ ಮಂಗಳೂರಿನಿಂದ ತಿರುವನಂತಪುರಕ್ಕೆ ಕರೆದೊಯ್ಯಲಾಗಿದೆ.
Vijaya Karnataka Web Ambulance


ಆಂಬುಲೆನ್ಸ್ ಚಾಲಕ ಹಸನ್ ಕೇವಲ ಎಂಟು ಗಂಟೆಯಲ್ಲಿ ರಸ್ತೆಯ ಮೂಲಕ ಮಂಗಳೂರಿನಿಂದ ಹೊರಟು ತಿರುವನಂತಪುರಂ ತಲುಪಿದ್ದಾರೆ. ಸಿಗ್ನಲ್ ಫ್ರೀ ವ್ಯವಸ್ಥೆಗಾಗಿ ಮಗುವಿನ ಕುಟುಂಬಸ್ಥರು ಎನ್‌ಜಿಒ ನೆರವಿನೊಂದಿಗೆ ಸಾಮಾಜಿಕ ತಾಣದಲ್ಲಿ ಪ್ರಚಾರ ಮಾಡಿದ್ದು, ಜನರು ಸಹಕಾರ ನೀಡಿದ್ದಾರೆ.

ಮಂಗಳೂರಿನಿಂದ ಮಂಗಳವಾರ ಬೆಳಗ್ಗೆ 11 ಗಂಟೆಗೆ ತಿರುವನಂತಪುರಕ್ಕೆ ಹೊರಟ ಆಂಬುಲೆನ್ಸ್ ಅನ್ನು ಕಾಸರಗೋಡಿನ ಹಸನ್ ಚಲಾಯಿಸಿದ್ದಾರೆ.

ಕಾಸರಗೋಡು ವಿದ್ಯಾನಗರ ಪಾರಕಟ್ಟಾ ನಿವಾಸಿ ನಿಶ್ಚಿತಾಹ್-ಷಾನಿಯಾ ದಂಪತಿಯ 16 ದಿನ ಪ್ರಾಯದ ಮಗುವನ್ನು ಮಂಗಳೂರಿನಿಂದ ತಿರುವನಂತಪುರದ ಶ್ರೀಚಿತ್ತರ ಆಸ್ಪತ್ರೆಗೆ ತಲುಪಿಸಬೇಕಿತ್ತು. ಅದಕ್ಕಾಗಿ ಆಂಬುಲ್ಸೆನ್ ತೆರಳಲು ಸಂಚಾರ ಸುಗುಮಗೊಳಿಸುವುದಕ್ಕಾಗಿ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಹಾಕಲಾಗಿತ್ತು. ಅದರಂತೆ ಮಂಗಳವಾರ ಸಂಜೆ 6 ಗಂಟೆಗೆ ತಿರುವನಂತಪುರ ಆಸ್ಪತ್ರೆಗೆ ತಲುಪಿಸುವುದಕ್ಕಾಗಿ ಕೇರಳದ ವಿವಿಧ ಜಿಲ್ಲೆಗಳಲ್ಲಿ ಹಾದು ಹೋಗುವಾಗ ಸಂಚಾರ ನಿಯಂತ್ರಿಸಲು ಸೋಶಿಯಲ್ ಮೀಡಿಯಾ ಮೂಲಕ ಪೋಸ್ಟ್ ಹಾಕಲಾಗಿದೆ.


16 ದಿನದ ಹಿಂದೆ ಜನ್ಮನೀಡಿದ ಮಗುವಿಗೆ ಹೃದಯ ಸಂಬಂಧ ಕಾಯಿಲೆ ಕಾಣಿಸಿಕೊಂಡಿತ್ತು. ಹೆಚ್ಚಿನ ಚಿಕಿತ್ಸಾಗಿ ತಿರುವನಂತಪುರ ಶ್ರೀಚಿತ್ರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತಲುಪಿಸಲು ನಿರ್ದೇಶನ ನೀಡಲಾಗಿತ್ತು. ಹೀಗಾಗಿ ಈ ಹಿಂದೆ ಇದೇ ರೀತಿಯಲ್ಲಿ ರೋಗಿಯನ್ನು ಆಂಬುಲೆನ್ಸ್ ಮೂಲಕ ತಲುಪಿಸಿದ ಚಾಲಕ ಹಸನ್ ಮತ್ತೆ ಇಂತಹ ಸವಾಲನ್ನು ಸ್ವೀಕರಿಸಿ ಹೊರಟಿದ್ದಾರೆ.

ಆಂಬುಲೆನ್ಸ್ ಸುಗಮ ಸಂಚಾರಕ್ಕೆ ಎನ್‌ಜಿಒಗಳು ಸಾಮಾಜಿಕ ತಾಣ ಮೂಲಕ ಕೈಜೋಡಿಸಿದ್ದಾರೆ. ಉದುಮ ಮುಕ್ಕುನ್ನತ್ ಶಿಹಾಬ್ ತಂಙಲ್ ಚಾರಿಟೇಬಲ್ ಟ್ರಸ್ಟ್‌ನ ಆಂಬುಲೆನ್ಸ್ ಮೂಲಕ ಮಗುವನ್ನು ತಿರುವನಂತಪುರಕ್ಕೆ ಕರೆದೊಯ್ಯಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ