ಆ್ಯಪ್ನಗರ

ಅಡಕೆ ಕೃಷಿಕರಿಗಾಗಿ ಪ್ರತ್ಯೇಕ ಪ್ಯಾಕೆಜ್‌ ಮಂಜೂರುಗೊಳಿಸಲು ಆಗ್ರಹ

ಉತ್ಪಾದನೆಯಲ್ಲಿ ಗಣನೀಯ ಕುಸಿತದ ಕಾರಣ ಸಂದಿಗ್ಧತೆಗೊಳಗಾದ ಜಿಲ್ಲೆಯ ಅಡಕೆ ಕೃಷಿಕರಿಗೆ ಸಹಾಯ ಮಾಡುವುದಕ್ಕಾಗಿ ಪ್ರತ್ಯೇಕ ಪ್ಯಾಕೇಜ್‌ ಮಂಜೂರುಗೊಳಿಸಬೇಕು ಎಂದು ಕೃಷಿ ಸಂಘದ ನೇತೃತ್ವದಲ್ಲಿ ನಡೆದ ಅಡಕೆ ಕೃಷಿಕ ಹೋರಾಟ ಘೋಷಣಾ ಸಮಾವೇಶದಲ್ಲಿ ಕೇಂದ್ರ-ರಾಜ್ಯ ಸರಕಾರಗಳನ್ನು ಆಗ್ರಹಿಸಲಾಗಿದೆ.

Vijaya Karnataka 13 Jul 2019, 5:00 am
ಕಾಸರಗೋಡು: ಉತ್ಪಾದನೆಯಲ್ಲಿ ಗಣನೀಯ ಕುಸಿತದ ಕಾರಣ ಸಂದಿಗ್ಧತೆಗೊಳಗಾದ ಜಿಲ್ಲೆಯ ಅಡಕೆ ಕೃಷಿಕರಿಗೆ ಸಹಾಯ ಮಾಡುವುದಕ್ಕಾಗಿ ಪ್ರತ್ಯೇಕ ಪ್ಯಾಕೇಜ್‌ ಮಂಜೂರುಗೊಳಿಸಬೇಕು ಎಂದು ಕೃಷಿ ಸಂಘದ ನೇತೃತ್ವದಲ್ಲಿ ನಡೆದ ಅಡಕೆ ಕೃಷಿಕ ಹೋರಾಟ ಘೋಷಣಾ ಸಮಾವೇಶದಲ್ಲಿ ಕೇಂದ್ರ-ರಾಜ್ಯ ಸರಕಾರಗಳನ್ನು ಆಗ್ರಹಿಸಲಾಗಿದೆ.
Vijaya Karnataka Web arecanet grow seperate package
ಅಡಕೆ ಕೃಷಿಕರಿಗಾಗಿ ಪ್ರತ್ಯೇಕ ಪ್ಯಾಕೆಜ್‌ ಮಂಜೂರುಗೊಳಿಸಲು ಆಗ್ರಹ


ಬೇಸಗೆಯಲ್ಲಿ ಉಂಟಾದ ತೀವ್ರವಾದ ಬರಗಾಲದಲ್ಲಿ ಜಿಲ್ಲೆಯ ಶೇ. 70ರಷ್ಟು ಅಡಕೆ ಮರಗಳು ಒಣಗಿ ನಶಿಸಿವೆ. ಒಣಗದೆ ಉಳಿದ ಅಡಕೆ ಮರಗಳಲ್ಲಿ ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಇದರಿಂದ ಲಭಿಸುವ ಆದಾಯಕ್ಕಿಂತ ಹೆಚ್ಚು ಉತ್ಪಾದನಾ ವೆಚ್ಚ ಇರುವುದರಿಂದ ಹೆಚ್ಚಿನ ಕೃಷಿಕರು ಆತ್ಮಹತ್ಯೆಗೆ ಶರಣಾಗಬೇಕಾದ ಸ್ಥಿತಿಯಲ್ಲಿದ್ದಾರೆ ಎಂದು ಸಮಾವೇಶ ಸೂಚಿಸಿದೆ.

ಅಡಕೆ ಕೃಷಿಕರ ಸಮಸ್ಯೆಗಳ ಅಧ್ಯಯನ ನಡೆಸಲು, ಕೃಷಿ ನಷ್ಟ ಮತ್ತಿತರ ನಿಖರವಾದ ಮಾಹಿತಿ ಸಂಗ್ರಹಣೆ ನಡೆಸಲು ಕೃಷಿ ಇಲಾಖೆ ಮಧ್ಯಪ್ರವೇಶಿಸಬೇಕು ಎಂದು ಕೃಷಿ ಭವನಗಳಿಗೆ ಹೊಣೆಗಾರಿಕೆ ನೀಡಿ ಶೀಘ್ರದಲ್ಲೇ ಇದನ್ನು ಪೂರ್ತಿಗೊಳಿಸಿ ಕೃಷಿ ನಾಶ ಸಂಭವಿಸಿದ ಎಲ್ಲ ಕೃಷಿಕರಿಗೆ ನಷ್ಟ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಮಾವೇಶ ಆಗ್ರಹಿಸಿದೆ. ಕೃಷಿ ನಶಿಸಿದ ಕೃಷಿಕರಿಗೆ ನಿರಂತರ ಕೃಷಿ ನಡೆಸಲು ಅಗತ್ಯ ಸಸಿಗಳನ್ನು ಕೃಷಿ ಭವನದ ಮೂಲಕ, ಫಾರಂಗಳ ಮೂಲಕ ಉಚಿತವಾಗಿ ವಿತರಿಸಲಾಗುವುದು.

ಕೃಷಿಕರಿಗೆ ನೆರವಾಗಿ ರಾಜ್ಯ ಸರಕಾರ ಅಡಕೆ ಕೃಷಿಕ ಪ್ಯಾಕೇಜ್‌ ಮೂಲಕ ಎರಡು ಕೋಟಿ ರೂ. ಮೀಸಲಿರಿಸಿದೆ. ಇದು ತಾತ್ಕಾಲಿಕ ಸಾಂತ್ವನ ಮಾತ್ರ ಆಗಲಿದೆ. ಈ ಹಿನ್ನ್ನೆಲೆಯಲ್ಲಿ ಕೃಷಿಕರಿಗೆ ಸಹಾಯ ಮಾಡಲು ಕೇಂದ್ರ ಸರಕಾರ ಮುಂದೆ ಬರಬೇಕು. ಎಲ್ಲ ಅಡಕೆ ಕೃಷಿಕರನ್ನು ರಕ್ಷಿಸುವುದಕ್ಕಾಗಿ ಅಡಕೆ ಕೃಷಿಗೆ ಪ್ರತ್ಯೇಕ ಪ್ಯಾಕೇಜ್‌ ಮಂಜೂರುಗೊಳಿಸಲು ಕೇಂದ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜು. 30ರಂದು ಜಿಲ್ಲಾಧಿಕಾರಿ ಕಚೇರಿಗೆ ಜಾಥಾ ನಡೆಸಲು ಹೋರಾಟ ಘೋಷಣಾ ಸಮಾವೇಶ ತೀರ್ಮಾನಿಸಿದೆ.

ಬೆಳಗ್ಗೆ 10 ಗಂಟೆಗೆ ಕಾಸರಗೋಡು ಸರಕಾರಿ ಕಾಲೇಜು ಪರಿಸರದಿಂದ ಜಾಥಾ ಆರಂಭಿಸಲಾಗುವುದು. ಕೃಷಿಕ ಸಂಘ ರಾಜ್ಯ ಕಾರ್ಯದರ್ಶಿ ಕೆ.ವಿ. ರಾಮಕೃಷ್ಣನ್‌ ಉದ್ಘಾಟಿಸಿದರು.

ಕಾಸರಗೋಡು ನಗರಸಭೆಯ ಸಭಾಂಗಣದಲ್ಲಿ ನಡೆದ ಹೋರಾಟ ಘೋಷಣಾ ಸಮಾವೇಶವನ್ನು ಕೃಷಿಕ ಸಂಘದ ರಾಜ್ಯ ಜತೆ ಕಾರ್ಯದರ್ಶಿ ಸಿ.ಎಚ್‌. ಕುಞಂಬು ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಪಿ. ಜನಾರ್ದನನ್‌ ಅಧ್ಯಕ್ಷ ತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಎಂ.ವಿ. ಕೋಮನ್‌ ನಂಬಿಯಾರ್‌ ಹೋರಾಟ ಘೋಷಣಾ ರೂಪುರೇಷೆ ಮಂಡಿಸಿದರು. ಎ. ರವೀಂದ್ರನ್‌ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ