ಆ್ಯಪ್ನಗರ

ಅರಿಬೈಲು ಶ್ರೀನಾಗಬ್ರಹ್ಮ ಕಂಬಳ ಸಮಾಪ್ತಿ

ಗಡಿನಾಡಿನ ಏಕೈಕ ದೇವರ ಕಂಬಳವೆಂದೇ ಪ್ರಸಿದ್ಧಿ ಪಡೆದಿರುವ ಅರಿಬೈಲು ಶ್ರೀನಾಗಬ್ರಹ್ಮ ಕಂಬಳ ಮಂಗಳವಾರ ಸಾಂಪ್ರದಾಯಿಕ ಶ್ರದ್ಧಾ ಭಕ್ತಿಗಳೊಂದಿಗೆ ನಡೆಯಿತು.

Vijaya Karnataka 6 Dec 2018, 5:00 am
ಉಪ್ಪಳ : ಗಡಿನಾಡಿನ ಏಕೈಕ ದೇವರ ಕಂಬಳವೆಂದೇ ಪ್ರಸಿದ್ಧಿ ಪಡೆದಿರುವ ಅರಿಬೈಲು ಶ್ರೀನಾಗಬ್ರಹ್ಮ ಕಂಬಳ ಮಂಗಳವಾರ ಸಾಂಪ್ರದಾಯಿಕ ಶ್ರದ್ಧಾ ಭಕ್ತಿಗಳೊಂದಿಗೆ ನಡೆಯಿತು.
Vijaya Karnataka Web aribailu nagabrahma kambala
ಅರಿಬೈಲು ಶ್ರೀನಾಗಬ್ರಹ್ಮ ಕಂಬಳ ಸಮಾಪ್ತಿ


ಶ್ರೀ ನಾಗಬ್ರಹ್ಮ ಹುತ್ತದ ರೂಪದಲ್ಲಿ ಇಲ್ಲಿ ಪೂಜಿಸಲ್ಪಡುತ್ತಿದ್ದು, ಶ್ರೀನಾಗಬ್ರಹ್ಮ ಕ್ಷೇತ್ರ ಹಾಗೂ ಇಲ್ಲಿ ನಡೆಯುವ ಕಂಬಳ ಚಾರಿತ್ರಿಕ ಮಹತ್ವವನ್ನು ಹೊಂದಿದೆ.

ಅರಿಬೈಲು ಶ್ರೀ ನಾಗಬ್ರಹ್ಮ ಕ್ಷೇತ್ರದ ವಾರ್ಷಿಕೋತ್ಸವದ ಅಂಗವಾಗಿ ಪರಂಪರಾಗತವಾಗಿ ನಡೆದು ಬರುವ ಕಂಬಳಕ್ಕೆ ಕ್ಷೇತ್ರದ ಆಡಳಿತ ಮೊಕ್ತೇಸರ ರಾಧಾಕೃಷ್ಣ ಅರಿನಾಯರು ಚಾಲನೆ ನೀಡಿದರು. ಅರಿಬೈಲು ನೆತ್ಯ ಗೋಪಾಲ ಶೆಟ್ಟಿ, ಪಕೀರ ಮೂಲ್ಯ, ರಮೆಶ, ಗೋಪಾಲ ಮೂಲ್ಯ ಸಹಕರಿಸಿದರು.

ಕುಂಬಳದಲ್ಲಿ ಕೌಡೂರು ಬೀಡು ಮಾರಪ್ಪ ಭಂಡಾರಿ, ರಕ್ಷಿತ್‌ ರವೀಂದ್ರ ಪಕ್ಕಳ ಇವರ ಎರಡು ಜೋಡಿ ಕೋಣಗಳು, ಕೃಷ್ಣ ಶೆಟ್ಟಿ ಪಟ್ಟತ್ತಮೊಗರು, ಶಾಂತಪ್ಪ ಶೆಟ್ಟಿ ಕುಂಜತ್ತೂರು, ಗೋಪಾಲ ಮಡಿವಾಳ ಕೂಟತ್ತಜೆ ನಿಡಂಬಿರಿ, ಆನಂದ ಪಜಿಂಗಾರು ಬೆಟ್ಟುಮನೆ, ಸಂಜೀವ ಮಡಿವಾಳ ಕಡಂಬಾರು, ಕಲ್ಲಾಜೆ ಜಗನ್ನಾಥ ಶೆಟ್ಟಿ ಅರಿಬೈಲು ಅವರ ಕೋಣಗಳು ಭಾಗವಹಿಸಿದ್ದವು. ಪಾವೂರು ಮೋನು ಬ್ಯಾರಿಯ ಕೋಣ ಈ ಬಾರಿ ಉಪವಾಸ ಕೋಣವಾಗಿ ಭಾಗವಹಿಸಿತ್ತು. ಬಳಿಕ ಕಂಬಳಗದ್ದೆಯಲ್ಲಿ ಪೂಕರೆ ಅಳವಡಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ