ಆ್ಯಪ್ನಗರ

ಬಾವಿಕೆರೆ ಶಾಶ್ವತ ತಡೆಗೋಡೆ ಎತ್ತರ ಕಡಿತ ಪರಿಶೀಲನೆ

ಬಾವಿಕೆರೆಯಲ್ಲಿ ಚಂದ್ರಗಿರಿ ಹೊಳೆಗೆ ಅಡ್ಡವಾಗಿ ನಿರ್ಮಿಸುವ ಶಾಶ್ವತ ತಡೆಗೋಡೆ ನಿರ್ಮಾಣ ಪ್ರಗತಿ ಬಗ್ಗೆ ಅವಲೋಕನ ನಡೆಸುವುದಕ್ಕಾಗಿ ಐಡಿಆರ್‌ಬಿ ಚೀಫ್‌ ಎಂಜಿನಿಯರ್‌ ಕೆ.ಎಚ್‌. ಸಂಶುದ್ದೀನ್‌ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

Vijaya Karnataka 13 Apr 2019, 5:00 am
ಕಾಸರಗೋಡು: ಬಾವಿಕೆರೆಯಲ್ಲಿ ಚಂದ್ರಗಿರಿ ಹೊಳೆಗೆ ಅಡ್ಡವಾಗಿ ನಿರ್ಮಿಸುವ ಶಾಶ್ವತ ತಡೆಗೋಡೆ ನಿರ್ಮಾಣ ಪ್ರಗತಿ ಬಗ್ಗೆ ಅವಲೋಕನ ನಡೆಸುವುದಕ್ಕಾಗಿ ಐಡಿಆರ್‌ಬಿ ಚೀಫ್‌ ಎಂಜಿನಿಯರ್‌ ಕೆ.ಎಚ್‌. ಸಂಶುದ್ದೀನ್‌ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web bavikere break wall height decrecing inspection
ಬಾವಿಕೆರೆ ಶಾಶ್ವತ ತಡೆಗೋಡೆ ಎತ್ತರ ಕಡಿತ ಪರಿಶೀಲನೆ


ನಾಲ್ಕು ತಿಂಗಳುಗಳಿಂದ ವೇಗವಾಗಿ ಕಾಮಗಾರಿ ನಡೆಯುತ್ತಿದೆ ಎಂಬುದಾಗಿ ಚೀಫ್‌ ಎಂಜಿನಿಯರ್‌ ತಿಳಿಸಿದರು. ತಡೆಗೋಡೆ ನಿರ್ಮಿಸುವುದಕ್ಕಾಗಿರುವ ತಾಂತ್ರಿಕ ಸಮಸ್ಯೆಗಳ ಕುರಿತು ಈ ಮೊದಲೇ ಉದುಮ ಶಾಸಕ ಕೆ.ಕುಂಞಿರಾಮನ್‌ ಗಮನಕ್ಕೆ ತರಲಾಗಿತ್ತು. ಇದರ ಆಧಾರದಲ್ಲಿ ಎತ್ತರವನ್ನು ಕಡಿಮೆಗೊಳಿಸುವ ವಿಷಯವೂ ಪರಿಗಣನೆಯಲ್ಲಿರುವುದಾಗಿ ಎಂದು ಅವರು ಹೇಳಿದರು.

ಪ್ರಸ್ತುತ 16ಮೀಟರ್‌ ಎತ್ತರದಲ್ಲಿ ತಡೆಗೋಡೆ ನಿರ್ಮಿಸುತ್ತಿರುವುದರಿಂದ ಈ ಪ್ರದೇಶದ ನಿವಾಸಿಗಳಿಗೆ ಪ್ರಯೋಜನವಿಲ್ಲದರ ವಾಸ್ತಾವಂಶವನ್ನು ಅಧಿಕಾರಿಗಳಿಗೆ ಮನದಟ್ಟು ಮಾಡಲಾಯಿತು. ಈ ಸಂದರ್ಭದಲ್ಲಿ ಕಿರು ಜಲಸಂಪನ್ಮೂಲ ಇಲಾಖೆಯ ಸೂಪರಿಟೆಂಟಿಂಗ್‌ ಎಂಜಿನಿಯರ್‌ ರವೀಂದ್ರನ್‌, ಕಾರ್ಯನಿರ್ವಾಹಕ ಎಂಜಿನಿಯರ್‌ ವರ್ಗೀಸ್‌, ಐಡಿಆರ್‌ಬಿ ಜಂಟಿ ನಿರ್ದೇಶಕ ಸಿ.ಕೆ.ಗೀತಾ, ಉಪನಿರ್ದೇಶಕ ಸುಜಾ ಗ್ರೇಸಿನ್‌, ಸಹಾಯಕ ನಿರ್ದೇಶಕರಾದ ಬಿ.ಶಿನಾ, ಟಿ.ಎಂ.ಶ್ರುತಿ, ಮೆಕ್ಯಾನಿಕಲ್‌ ವಿಭಾಗದ ಸಹಾಯಕ ಎಂಜಿನಿಯರ್‌ ಕೆ.ಕೆ.ಹರೀಶ್‌, ಅನೂಪ್‌, ಸಂಜೀವ್‌ ತಂಡದಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ