ಆ್ಯಪ್ನಗರ

ಬಿಡಿಜೆಎಸ್‌ ನೇತಾರ ತುಷಾರ್‌ ವೆಳ್ಳಾಪಳ್ಳಿ ದುಬೈಯಲ್ಲಿ ಸೆರೆ

ಬಿಡಿಜೆಎಸ್‌ ಅಧ್ಯಕ್ಷ , ಎನ್‌ಡಿಎ ಕೇರಳ ಘಟಕ ನೇತಾರ ತುಷಾರ್‌ ವೆಳ್ಳಾಪಳ್ಳಿ ಅವರನ್ನು ದುಬೈಯಲ್ಲಿ ಪೊಲೀಸರು ಗುರುವಾರ ಬಂಧಿಸಿದ್ದು, ಬಳಿಕ ಜಾಮೀನು ಪಡೆದು ಬಿಡುಗಡೆಗೊಂಡಿದ್ದಾರೆ.

Vijaya Karnataka 23 Aug 2019, 5:00 am
ಕಾಸರಗೋಡು : ಬಿಡಿಜೆಎಸ್‌ ಅಧ್ಯಕ್ಷ , ಎನ್‌ಡಿಎ ಕೇರಳ ಘಟಕ ನೇತಾರ ತುಷಾರ್‌ ವೆಳ್ಳಾಪಳ್ಳಿ ಅವರನ್ನು ದುಬೈಯಲ್ಲಿ ಪೊಲೀಸರು ಗುರುವಾರ ಬಂಧಿಸಿದ್ದು, ಬಳಿಕ ಜಾಮೀನು ಪಡೆದು ಬಿಡುಗಡೆಗೊಂಡಿದ್ದಾರೆ.
Vijaya Karnataka Web bdjs leader arrest at dubai
ಬಿಡಿಜೆಎಸ್‌ ನೇತಾರ ತುಷಾರ್‌ ವೆಳ್ಳಾಪಳ್ಳಿ ದುಬೈಯಲ್ಲಿ ಸೆರೆ


ಬ್ಯಾಂಕ್‌ ಚೆಕ್‌ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿ ತ್ರಿಶೂರು ನಿವಾಸಿ ನಾಸೀರ್‌ ಅಬ್ದುಲ್ಲ ಎಂಬಾತ ನೀಡಿದ ದೂರಿನಂತೆ ದುಬೈ ಅಜ್ಮಾನ್‌ ಪೊಲೀಸರು ಬಂಧಿಸಿದ್ದಾರೆ.

ತುಷಾರ್‌ ವೆಳ್ಳಾಪಳ್ಳಿ ಅವರನ್ನು ಚರ್ಚೆಗೆಂದು ದುಬೈಗೆ ಆಹ್ವಾನಿಸಿದ್ದು, ಅದರಂತೆ ತೆರಳಿದ್ದರು. ಆದರೆ ಅವರ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಗುರುವಾರ ಬಂಧಿಸಲಾಗಿದೆ. ಈ ಹಿಂದೆ ತುಷಾರ್‌ ವೆಳ್ಳಾಪಳ್ಳಿ ದುಬೈಯ ಅಜ್ಮಾನ್‌ನಲ್ಲಿ ಬೋಯಿಂಗ್‌ ಕನ್‌ಸ್ಟ್ರಕ್ಷ ನ್‌ ಎಂಬ ಸಂಸ್ಥೆ ಹೊಂದಿದ್ದರು. ಆ ವೇಳೆ ದೂರುದಾರ ನಾಸೀರ್‌ ಅಬ್ದುಲ್ಲ ಸಂಸ್ಥೆಯ ಉಪ ಗುತ್ತಿಗೆದಾರನಾಗಿ ದುಡಿಯುತ್ತಿದ್ದರು. ವ್ಯವಹಾರ ನಷ್ಟದ ಹಾದಿಗೆ ಸಾಗಿದ ಹಿನ್ನೆಲೆಯಲ್ಲಿ ಸಂಸ್ಥೆಯನ್ನು ನಾಸೀರ್‌ ಅಬ್ದುಲ್ಲಗೆ ಹಸ್ತಾಂತರಿಸಿದ್ದರು. ಆ ವ್ಯವಹಾರಕ್ಕೆ ಸಂಬಂಧಿಸಿದಂತೆ ತುಷಾರ್‌ ವೆಳ್ಳಾಪಳ್ಳಿ ಅವರು ನಾಸೀರ್‌ ಅಬ್ದುಲ್ಲ ಅವರಿಗೆ ಹತ್ತು ಮಿಲಿಯನ್‌ ಯುಎಇ ದರಂ (19.50 ಕೋಟಿ ರೂ.)ನ ಬ್ಯಾಂಕ್‌ ಚೆಕ್‌ ನೀಡಿದ್ದರು. ಹತ್ತು ವರ್ಷದ ಹಿಂದೆ ನೀಡಿದ ಚೆಕ್‌ ಅಮಾನ್ಯವಾಗಿದೆ ಎಂದು ಆರೋಪಿಸಿ ನಾಸೀರ್‌ ಅಬ್ದುಲ್‌ ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದರು.

ತುಷಾರ್‌ ವೆಳ್ಳಾಪಳ್ಳಿ ಬಂಧಿತನಾಗಿರುವ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ಮಲೆಯಾಳಿ ಉದ್ಯಮಿ ಲುಲು ಗ್ರೂಪ್‌ ಅಧ್ಯಕ್ಷ ಎಂ.ಎ. ಯೂಸುಫಾಲಿ ನೇತೃತ್ವದಲ್ಲಿ ಅಲ್ಲಿಯೇ ವಕೀಲರನ್ನು ನೇಮಿಸಿ ಜಾಮೀನು ಲಭಿಸುವುದಕ್ಕಾಗಿ ಜುಲ್ಮಾನೆ ಪಾವತಿಸಿದ್ದಾರೆ. ಶುಕ್ರವಾರ ಹಾಗೂ ಶನಿವಾರ ಯುಎಇಯಲ್ಲಿ ರಜೆಯಾಗಿರುವುದರಿಂದ ಗುರುವಾರವೇ ಜಾಮೀನು ಪಡೆದಿದ್ದಾರೆ. ಹತ್ತು ವರ್ಷ ಹಿಂದಿನ ಚೆಕ್‌ ಅಮಾನ್ಯ ಪ್ರಕರಣಕ್ಕೆ ಯಾವುದೇ ಕಾನೂನು ಸಾಧ್ಯತೆಯಿಲ್ಲ ಎಂದು ತುಷಾರ್‌ ವೆಳ್ಳಾಪಳ್ಳಿ ತಿಳಿಸಿದ್ದಾರೆ.

ಈ ಮಧ್ಯೆ ತುಷಾರ್‌ ವೆಳ್ಳಾಪಳ್ಳಿ ವಿರುದ್ಧ ದೂರು ನೀಡಿದ ನಾಸೀರ್‌ ಅಬ್ದುಲ್ಲ ಅವರ ಕೇರಳದ ತ್ರಿಶೂರು ಮನೆಗೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿದ್ದ ಕುಟುಂಬ ಸದಸ್ಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ. 10 ವರ್ಷ ಹಿಂದೆ ನಡೆದ ಚೆಕ್‌ ಪ್ರಕರಣದಲ್ಲಿ ಇದೀಗ ಕೇಸು ನೀಡಿರುವುದರ ಹಿಂದೆ ಕೈವಾಡವಿದೆ ಎಂದು ತುಷಾರ್‌ ವೆಳ್ಳಾಪಳ್ಳಿ ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ