ಆ್ಯಪ್ನಗರ

ಕೃಷಿ ಪ್ರದೇಶಕ್ಕೆ ಕಾಡುಕೋಣಗಳ ಲಗ್ಗೆ

ಕೃಷಿ ಪ್ರದೇಶಕ್ಕೆ ಇಳಿದು ದಾಳಿ ನಡೆಸಿದ ಕಾಡುಕೋಣಗಳನ್ನು ನಾಗರಿಕರ ಸಹಾಯದೊಂದಿಗೆ ಅರಣ್ಯ ಪಾಲಕರು ಕಾಡಿಗೆ ಬೆನ್ನಟ್ಟಿದ್ದಾರೆ.

Vijaya Karnataka 10 Jun 2019, 5:00 am
ಕಾಸರಗೋಡು: ಕೃಷಿ ಪ್ರದೇಶಕ್ಕೆ ಇಳಿದು ದಾಳಿ ನಡೆಸಿದ ಕಾಡುಕೋಣಗಳನ್ನು ನಾಗರಿಕರ ಸಹಾಯದೊಂದಿಗೆ ಅರಣ್ಯ ಪಾಲಕರು ಕಾಡಿಗೆ ಬೆನ್ನಟ್ಟಿದ್ದಾರೆ.
Vijaya Karnataka Web bison enters agriculture area
ಕೃಷಿ ಪ್ರದೇಶಕ್ಕೆ ಕಾಡುಕೋಣಗಳ ಲಗ್ಗೆ


ಅಡೂರು ತಲಚ್ಚೇರಿಯ ವೆಂಕಟರಮಣ ಪಾಳಿತ್ತಾಯ ಅವರ ಕೃಷಿ ತೋಟಕ್ಕೆ ಎರಡು ಕಾಡುಕೋಣಗಳು ಬಂದಿವೆ.

ಕಾಡುಕೋಣಗಳು ದಾಳಿ ನಡೆಸಿರುವುದರಿಂದ ಭೀತಿಗೊಳಗಾದ ವೆಂಕಟರಮಣ ಅರಣ್ಯ ಪಾಲಕರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಡೂರು ಫಾರೆಸ್ಟ್‌ ಬೀಟ್‌ ಅಧಿಕಾರಿ ಬಾಬು ನೇತೃತ್ವದಲ್ಲಿರುವ ಅರಣ್ಯ ಪಾಲಕರ ತಂಡ ಸ್ಥಳಕ್ಕೆ ತಲುಪಿ, ನಾಗರಿಕ ಸಹಾಯದೊಂದಿಗೆ ಕೋಣಗಳನ್ನು ಅರಣ್ಯ ವಲಯಕ್ಕೆ ಅಟ್ಟಿಸಲಾಯಿತು.

ಕೆಲ ದಿನಗಳಿಂದ ಈ ಪ್ರದೇಶದಲ್ಲಿ ಕಾಡುಕೋಣಗಳು ಕೃಷಿ ಬೆಳೆಗಳನ್ನು ನಾಶ ಮಾಡುತ್ತಿವೆ. ಇದಲ್ಲದೆ ಜನರ ಮೇಲೆ ಆಕ್ರಮಣ ನಡೆಸಿದ ಘಟನೆಗಳೂ ನಡೆದಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ