ಆ್ಯಪ್ನಗರ

ಬಿಜೆಪಿ ಪ್ರವೇಶ ತನ್ನ ರಾಜಕೀಯ ಜೀವನದ ಪುನರ್ಜನ್ಮ: ಅಬ್ದುಲ್ಲ ಕುಟ್ಟಿ

ನರೇಂದ್ರ ಮೋದಿಯವರ ಅಭಿವೃದ್ಧಿ ಯೋಜನೆಗಳನ್ನು ಹೊಗಳಿ ಬೆಂಬಲಿಸಿದ ಹಿನ್ನೆಲೆಯಲ್ಲಿ ಎಡ ಹಾಗೂ ಐಕ್ಯರಂಗಗಳಿಂದ ಹೊರ ಬಂದಿರುವುದು ಮತ್ತು ಬಿಜೆಪಿ ಪ್ರವೇಶವು ತನ್ನ ರಾಜಕೀಯ ಪ್ರವೇಶದ ಪುನರ್ಜನ್ಮ ಎಂಬುದಾಗಿ ಮಾಜಿ ಸಂಸದ ಎಪಿ ಅಬ್ದುಲ್ಲ ಕುಟ್ಟಿ ಹೇಳಿದರು.

Vijaya Karnataka 18 Jul 2019, 5:00 am
ಕಾಸರಗೋಡು: ನರೇಂದ್ರ ಮೋದಿಯವರ ಅಭಿವೃದ್ಧಿ ಯೋಜನೆಗಳನ್ನು ಹೊಗಳಿ ಬೆಂಬಲಿಸಿದ ಹಿನ್ನೆಲೆಯಲ್ಲಿ ಎಡ ಹಾಗೂ ಐಕ್ಯರಂಗಗಳಿಂದ ಹೊರ ಬಂದಿರುವುದು ಮತ್ತು ಬಿಜೆಪಿ ಪ್ರವೇಶವು ತನ್ನ ರಾಜಕೀಯ ಪ್ರವೇಶದ ಪುನರ್ಜನ್ಮ ಎಂಬುದಾಗಿ ಮಾಜಿ ಸಂಸದ ಎಪಿ ಅಬ್ದುಲ್ಲ ಕುಟ್ಟಿ ಹೇಳಿದರು.
Vijaya Karnataka Web bjp entry is political rebirth abdull kutti
ಬಿಜೆಪಿ ಪ್ರವೇಶ ತನ್ನ ರಾಜಕೀಯ ಜೀವನದ ಪುನರ್ಜನ್ಮ: ಅಬ್ದುಲ್ಲ ಕುಟ್ಟಿ


ಅವರು ಬುಧವಾರ ನಗರದ ಸ್ಪೀಡ್‌ ವೇ ಇನ್‌ ಸಭಾಂಗಣದಲ್ಲಿ ಭಾರತೀಯ ಜನತಾ ಅಲ್ಪಸಂಖ್ಯಾತ ಮೋರ್ಚಾ ಸದಸ್ಯತ್ವ ಅಭಿಯಾನದ ಜಿಲ್ಲಾಮಟ್ಟದ ಉದ್ಘಾಟನೆಯನ್ನು ನಿರ್ವಹಿಸಿ ಮಾತನಾಡಿದರು.

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಪಕ್ಷ ವಾದ ಬಿಜೆಪಿ ಸದಸ್ಯತ್ವ ಸ್ವೀಕರಿಸಲು ಹಿಂದಿನ ಕಾಲದ ಪುಣ್ಯದಿಂದ ನನಗೆ ಸಾಧ್ಯವಾಗಿದೆ. ಏಕಾತ್ಮಕ ಮಾನವ ದರ್ಶನಂತೆ ಗಾಂಧಿ ದರ್ಶನವನ್ನು ಬಿಜೆಪಿ ಎತ್ತಿಹಿಡಿದಿದೆ. ಎರಡನೇ ಮೋದಿ ಸರಕಾರ ತನ್ನ ಬಜೆಟ್‌ನಲ್ಲಿ ಗಾಂಧಿ ಆಶಯ ಹಾಗೂ ಆದರ್ಶಗಳಿಗೆ ಆದ್ಯತೆ ನೀಡಿ ಮಂಡಿಸಿದ್ದಾರೆ. ತಾನು ರಾಷ್ಟ್ರೀಯ ಮುಸ್ಲಿಂ ಎಂಬುದಾಗಿ ಹೇಳಿಕೆಗೆ ಟ್ರೋಲ್‌ ಮಾಡುವಾಗ ರಾಷ್ಟ್ರೀಯ ಹೂವು ತಾವರೆ ಎಂಬುದನ್ನು ಮರೆದಿದ್ದಾರೆ ಎಂದರು.

ಮುಸ್ಲಿಂ ಸಮುದಾಯದಗಳಲ್ಲಿ ಎಡ ಹಾಗೂ ಐಕ್ಯರಂಗಗಳು ನಡೆಸುತ್ತಿರುವ ಅಪಪ್ರಚಾರಗಳೇ ಬಿಜೆಪಿಯಿಂದ ದೂರವಿಡುವಂತೆ ಮಾಡಿರುವುದು. ಸಿಪಿಎಂ ಪಕ್ಷ ಗಳ ಈ ಅಪಪ್ರಚಾರ ಕೇವಲ ಗ್ರಾಮಗಳಲ್ಲಿ ಮಾತ್ರ ನಡೆಯುತ್ತಿದೆ. ಇದೀಗ ಕೇರಳವೂ ಬಿಜೆಪಿಗೆ ಅನುಕೂಲಕರವಾಗಿದೆ. ಗುಜರಾತ್‌ನಲ್ಲಿ ಯಾವುದೇ ಉದ್ಯಮಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿ ಬರುವುದಿಲ್ಲ, ಅಲ್ಲಿ ಕೈಗಾರಿಕೆಯನ್ನು, ಉದ್ಯಮಿಗಳನ್ನು ಪ್ರೋತ್ಸಾಹಿಸುವ ಮಣ್ಣಾಗಿದೆ ಎಂಬುದಾಗಿ ಅಬ್ದುಲ್ಲ ಕುಟ್ಟಿ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯತ್ವ ಪಡೆದ ಎಂ.ಜೆ.ಜೋಯ್‌, ಪಿ.ಎಫ್‌ ಸೆಬಾಸ್ಟಿಯನ್‌, ಎ.ಯು.ಮತ್ತಾಯಿ, ಬೇಬಿ ಮಾಥ್ಯೂ, ಇಬ್ರಾಹಿಂ ಎಂಬವರನ್ನು ಅಬ್ದುಲ್ಲ ಕುಟ್ಟಿ ಶಾಲು ಹೊದಿಸಿ ಬರಮಾಡಿಕೊಂಡರು. ಅಲ್ಪಸಂಖ್ಯಾತ ಮೋರ್ಚಾ ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ವಿ.ಮಾಥ್ಯೂ ಅಧ್ಯಕ್ಷ ತೆ ವಹಿಸಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಪ್ರಮೀಳಾ ಸಿ.ನಾಯ್ಕ್‌, ಸಮಿತಿ ಸದಸ್ಯರಾದ ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ, ರವೀಶ ತಂತ್ರಿ ಕುಂಟಾರು, ಜಿಲ್ಲಾಧ್ಯಕ್ಷ ಅಡ್ವಾ. ಕೆ.ಶ್ರೀಕಾಂತ್‌, ಪ್ರಧಾನ ಕಾರ‍್ಯದರ್ಶಿ ಎ.ವೇಲಾಯುಧನ್‌ ಮುಂತಾದವರು ಮಾತನಾಡಿದರು. ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಡಾನಿಯಲ್‌ ಸ್ವಾಗತಿಸಿ, ಮಂಜೇಶ್ವರ ಮಂಡಲ ಅಧ್ಯಕ್ಷ ಅಬ್ದುಲ್ಲ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ