ಆ್ಯಪ್ನಗರ

ಬಾಲಕನ ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ

ಬಾಲಕ ಫಹಾದ್‌ ಕೊಲೆ ಪ್ರಕರಣದ ಆರೋಪಿ, ತೆಂಗಿನ ಕಾಯಿ ಕೊಯ್ಯುವ ಕಾರ್ಮಿಕ ಅಂಬಲತ್ತರ ಪೊಲೀಸ್‌ ಠಾಣೆ ವ್ಯಾಪ್ತಿಯ ವಿಜಯನ್‌ (31) ಎಂಬಾತನಿಗೆ ಕಾಸರಗೋಡು ಅಡಿಶನಲ್‌ ಸೆಷನ್ಸ್‌ ನ್ಯಾಯಾಲಯ (ಒಂದು) ಜೀವವಾಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

Vijaya Karnataka 19 Jun 2018, 5:00 am
ಕಾಸರಗೋಡು: ಬಾಲಕ ಫಹಾದ್‌ ಕೊಲೆ ಪ್ರಕರಣದ ಆರೋಪಿ, ತೆಂಗಿನ ಕಾಯಿ ಕೊಯ್ಯುವ ಕಾರ್ಮಿಕ ಅಂಬಲತ್ತರ ಪೊಲೀಸ್‌ ಠಾಣೆ ವ್ಯಾಪ್ತಿಯ ವಿಜಯನ್‌ (31) ಎಂಬಾತನಿಗೆ ಕಾಸರಗೋಡು ಅಡಿಶನಲ್‌ ಸೆಷನ್ಸ್‌ ನ್ಯಾಯಾಲಯ (ಒಂದು) ಜೀವವಾಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಕಾಸರಗೋಡು ಜಿಲ್ಲಾ ಅಡಿಶನಲ್‌ ಸೆಷನ್ಸ್‌ ನ್ಯಾಯಾಧೀಶ ಶಿವ ಕುಮಾರ್‌ ಶಿಕ್ಷೆ ವಿಧಿಸಿದ್ದಾರೆ.
Vijaya Karnataka Web boy murder
ಬಾಲಕನ ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ


2015ರ ಜು. 9ರಂದು ಬೆಳಗ್ಗೆ ಪೆರಿಯಾ ಕಲ್ಯೋಟ್‌ ಸಮೀಪ ಆರೋಪಿ ವಿಜಯನ್‌ ಶಾಲೆಗೆ ತೆರಳುತ್ತಿದ್ದ ಮೂರನೇ ತರಗತಿ ವಿದ್ಯಾರ್ಥಿ ಫಹಾದ್‌(9) ಎಂಬಾತನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದ. ಬಾಲಕನ ತಂದೆಯೊಂದಿಗಿದ್ದ ವೈರಾಗ್ಯವೇ ಕೊಲೆಗೆ ಕಾರಣವೆನ್ನಲಾಗಿತ್ತು.

ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ತನಿಖೆ ನಡೆಸಿದ ಹೊಸದುರ್ಗ ಸರ್ಕಲ್‌ ಇನ್ಸ್‌ಪೆಕ್ಟರ್‌ ಯು. ಪ್ರೇಮನ್‌ ಆರೋಪ ಪಟ್ಟಿ ಸಲ್ಲಿಸಿದ್ದರು. 60ರಷ್ಟು ಸಾಕ್ಷಿಗಳಿದ್ದ ಪ್ರಕರಣದಲ್ಲಿ ಫಹಾದ್‌ನ ಸಹೋದರಿ ಸಹಿತ 36 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿದ್ದರು. ಆರೋಪಿಗೆ ಮರಣದಂಡನೆ ನೀಡಬೇಕು ಎಂದು ಪ್ರಾಸಿಕ್ಯೂಟರ್‌ ಪಿ. ರಾಘವನ್‌ ವಾದಿಸಿದ್ದರು. ಆರೋಪಿ ಮಾನಸಿಕ ರೋಗ ಬಾಧಿತರಾದ್ದರಿಂದ ಶಿಕ್ಷೆಯಲ್ಲಿ ರಿಯಾಯಿತಿ ನೀಡಬೇಕೆಂದು ಆರೋಪಿ ಪರ ವಕೀಲರು ವಾದಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ